ಹುಬ್ಬಳ್ಳಿ: ಭಾರತೀಯ ಔಷಧ ಪದ್ಧತಿ ರಾಷ್ಟ್ರೀಯ ಆಯೋಗ, ಆಯುರ್ವೇದ ಸೇವಾ ಸಮಿತಿಯ ಆಯುರ್ವೇದ ಮಹಾವಿದ್ಯಾಲಯ ಮತ್ತು ಆಸ್ಪತ್ರೆ ವತಿಯಿಂದ ವೈಜ್ಞಾನಿಕ ಬರವಣಿಗೆಯ ಸಂಶೋಧನಾ ಸಮಗ್ರತೆ ಮತ್ತು ಪ್ರಕಟಣೆಯ ನೀತಿಶಾಸ್ತ್ರದ ಕಾರ್ಯಾಗಾರ (ಎನ್ಸಿಐಎಸ್ಎಂ ಇನ್ಸಿಯೇಟಿವ್)ವನ್ನು ಇಲ್ಲಿಯ ಗೋಕುಲ ರಸ್ತೆಯ ಕೋಟಿಲಿಂಗನಗರದ ಶ್ರೀ ರಾಜೇಶ್ವರ ಭವನದಲ್ಲಿ ಸೋಮವಾರ ಉದ್ಘಾಟಿಸಲಾಯಿತು.
ನರರೋಗ ತಜ್ಞ, ಆರ್ಜಿಯುಎಚ್ಎಸ್ ಸಿಂಡಿಕೇಟ್ ಸದಸ್ಯ ಡಾ. ಕ್ರಾಂತಿಕಿರಣ ಅವರು ಉದ್ಘಾಟಿಸಿದರು.
10ಕ್ಕೂ ಹೆಚ್ಚು ನುರಿತ ತರಬೇತುದಾರರು, ಭಾರತದ ವಿವಿಧ ಆಯುರ್ವೇದ ಕಾಲೇಜ್ಗಳಿಂದ ಆಯ್ಕೆಯಾದ 60 ಆಯುರ್ವೇದ ವೈದ್ಯಕೀಯ ಸ್ನಾತಕೋತ್ತರ ವಿದ್ಯಾರ್ಥಿಗಳಿಗೆ ಮಾರ್ಗದರ್ಶನ ನೀಡಿದರು.
ಪ್ರಾಚಾರ್ಯ ಡಾ. ಎ.ಎಸ್. ಪ್ರಶಾಂತ, ಡಾ. ರೂಪಾ ಭಟ್ಟ, ಕೆ.ಬಿ. ನಾಗೂರ, ಮಾಮಲೆ ದೇಶಪಾಂಡೆ, ಡಾ. ತ್ಯಾಗರಾಜ, ಡಾ.ಜೆ.ಆರ್. ಜೋಶಿ, ಡಾ. ಶಿವಾಜಿ ಚವ್ಹಾಣ ಇತರರು ಇದ್ದರು.