ಹೈದರಾಬಾದ್: ಅತ್ತೆ-ಸೊಸೆ ನಡುವಿನ ಜಗಳಕ್ಕೆ ನಮ್ಮ ದೇಶದಲ್ಲಿ ದೊಡ ಇತಿಹಾಸವಿದ್ದು, ಇದು ಇಂದು ನಿನ್ನೆಯದಲ್ಲಾ ಎಂಬ ವಿಚಾರ ಎಲ್ಲರಿಗೂ ತಿಳಿದಿದೆ. ಇತ್ತೀಚಿನ ದಿನಗಳಲ್ಲಿ ಕ್ಷುಲಕ ಕಾರಣಗಳಿಗೆ ಗಲಾಟೆ ನಡೆಯುತ್ತಿದ್ದು, ಕೆಲವೊಮ್ಮೆ ಪರಿಸ್ಥಿತಿ ವಿಕೋಪಕ್ಕೆ ತಿರುಗಿ ಕೊಲೆಗಳು ನಡೆದಿವೆ. ಇದೀಗ ಚಹಾ ತಂದುಕೊಡಲಿಲ್ಲ ಎಂಬ ಕಾರಣಕ್ಕೆ ಅತ್ತೆಯೊಬ್ಬಳು ಸೊಸೆಯ ಕತ್ತು ಹಿಸುಕಿ ಕೊಲೆ ಮಾಡಿರುವ ಘಟನೆ ಬೆಳಕಿಗೆ ಬಂದಿದೆ.
ಘಟನೆಯು ತೆಲಂಗಾಣದ ರಾಜಧಾನಿ ಹೈದರಾಬಾದಿನಲ್ಲಿ ನಡೆದಿದ್ದು, ಮೃತ ದುರ್ದೈವಿಯನ್ನು ಅಜ್ಮೀರಾ ಬೇಗಂ (28) ಎಂದು ಗುರುತಿಸಲಾಗಿದೆ. ಮೃತಳ ಅತ್ತೆ ಫರ್ಝಾನಾಳನ್ನು ಪೊಲೀಸರು ವಶಕ್ಕೆ ಪಡೆದಿದ್ದಾರೆ.
ಇದನ್ನೂ ಓದಿ: ಸೋಶಿಯಲ್ ಮೀಡಿಯಾ ಸೆಲೆಬ್ರಿಟಿಗೆ ದಾಸನ ಫ್ಯಾನ್ಸ್ನಿಂದ ಕಿರುಕುಳ; ವಿಡಿಯೋ ಮಾಡಿ ಅಳಲು ತೋಡಿಕೊಂಡ ಸೋನು
ಈ ಕುರಿತು ಪ್ರತಿಕ್ರಿಯಿಸಿರುವ ಹಿರಿಯ ಪೊಲೀಸ್ ಅಧಿಕಾರಿಯೊಬ್ಬರು, ಗುರುವಾರ (ಜೂನ್ 27) ಬೆಳಗ್ಗೆ ಈ ಘಟನೆ ನಡೆದಿದ್ದು, ಚಹಾ ತಂದುಕೊಡಲಿಲ್ಲ ಎಂದು ಅತ್ತೆ ಸೊಸೆಯ ಕತ್ತು ಹಿಸುಕಿ ಕೊಲೆ ಮಾಡಿದ್ದಾರೆ. ಅತ್ತೆ ಫರ್ಝಾನಾ ಸೊಸೆ ಅಜ್ಮೀರಾ ಬಳಿ ನನಗೆ ಚಹಾ ತಂದುಕೊಂಡು ಎಂದು ಕೇಳಿದ್ದಾಳೆ. ಇದಕ್ಕೆ ಅಡುಗೆ ಮನೆಯಲ್ಲಿದ್ದ ಅಜ್ಮೀರಿ ಬೇಗಂ ಆಗಲ್ಲ ಎಂದು ಹೇಳಿದ್ದಾರೆ.
ಇದರಿಂದ ಕುಪಿತಗೊಂಡ ಅತ್ತೆ ಸೊಸೆಯ ಜೊತೆ ಜಗಳವಾಡಿದ್ದಾರೆ. ಮಾತಿಗೆ ಮತು ಬೆಳೆದು ಆತ್ತೆ ಸೊಸೆಯ ಕತ್ತಿಗೆ ಸ್ಕಾರ್ಫ್ನಲ್ಲಿ ಸುತ್ತಿ ಕತ್ತು ಹಿಸುಕಿ ಉಸಿರುಗಟ್ಟಿಸಿ ಕೊಲೆ ಮಾಡಿದ್ದಾಳೆ. ಮರಣೋತ್ತರ ಪರೀಕ್ಷೆಯ ವರದಿಗಳು ಇನ್ನಷ್ಟೇ ಬರಬೇಕಿದೆ. ಈ ಘಟನೆಗೆ ಚಹಾ ನೀಡದ್ದಷ್ಟೇ ಕಾರಣವೋ ಅಥವಾ ಬೇರೆ ಇನ್ನೇನಾದರೂ ಇದೆಯೋ ಎಂಬ ಬಗ್ಗೆ ತನಿಖೆ ನಡೆಯುತ್ತಿದ್ದು, ವರದಿ ಆಧರಿಸಿ ಮುಂದಿನ ಕ್ರಮ ಕೈಗೊಳ್ಳಲಾಗುವುದು ಎಂದು ಹಿರಿಯ ಪೊಲೀಸ್ ಅಧಿಕಾರಿಯೊಬ್ಬರು ತಿಳಿಸಿದ್ದಾರೆ.