ಕಾರ್ಕಳ: ಇನ್ನಾ ಆಯುರ್ವೇದ ಭೂಷಣ ಎಂ.ವಿ.ಶಾಸ್ತ್ರಿ ಫೌಢಶಾಲೆಯಲ್ಲಿ 35 ವರ್ಷ ಹಿಂದಿ ಮತ್ತು ಸಮಾಜ ವಿಜ್ಞಾನ ಶಿಕ್ಷಕರಾಗಿ ಸೇವೆ ಸಲ್ಲಿಸಿ ನಿವೃತ್ತರಾದ ದಿನೇಶ್ ನಾಯಕ್ ಅವರನ್ನು ಸನ್ಮಾನಿಸಲಾಯಿತು. ಹಳೇ ವಿದ್ಯಾರ್ಥಿ ಹಾಗೂ ಶಿಕ್ಷಕ ವೀಣೇಶ್ ಅಮೀನ್, ಇನ್ನಾ ಬಾಳಿಕೆ ವಿಠ್ಠಲ ಶೆಟ್ಟಿ, ಪಂಚಾಯಿತಿ ಪೂರ್ವಾಧ್ಯಕ್ಷ ಕುಶ ಆರ್.ಮೂಲ್ಯ, ಕನ್ನಡ ಸಾಹಿತ್ಯ ಪರಿಷತ್ ತಾಲೂಕು ಅಧ್ಯಕ್ಷ ಪ್ರಭಾಕರ ಶೆಟ್ಟಿ ಕೊಂಡಳ್ಳಿ ಅಭಿನಂದನಾ ಭಾಷಣ ಮಾಡಿದರು.
ಪಂಚಾಯಿತಿ ಅಧ್ಯಕ್ಷೆ ಸರಿತಾ ಶೆಟ್ಟಿ, ಉಪಾಧ್ಯಕ್ಷೆ ವಿಮಲಾ, ಮಾಜಿ ಅಧ್ಯಕ್ಷೆ ಸುಲೋಚನಾ ಕೋಟ್ಯಾನ್, ಮುಖ್ಯಶಿಕ್ಷಕ ರಾಜೇಂದ್ರ ಭಟ್ ಕೆ., ದಿನೇಶ್ ನಾಯಕ್ ಅವರ ಪತ್ನಿ ಉಷಾ ನಾಯಕ್, ಶಿಕ್ಷಕ ರಕ್ಷಕ ಸಂಘ ಅಧ್ಯಕ್ಷ ಗುರುರಾಜ್, ಪಲಿಮಾರು ಜೂನಿಯರ್ ಕಾಲೇಜು ಪ್ರಾಂಶುಪಾಲೆ ಗ್ರೆಟ್ಟಾ, ಇನ್ನ ಶಾಲೆ ಮುಖ್ಯ ಶಿಕ್ಷಕಿ ಅಶ್ವಿನಿ ಮತ್ತಿತರರು ಉಪಸ್ಥಿತರಿದ್ದರು. ಶಿಕ್ಷಕಿ ವಾಣಿ ಶೇರಿಗಾರ್ತಿ ಸ್ವಾಗತಿಸಿ, ಸೌಮ್ಯಾ ಆರ್.ಶೆಟ್ಟಿ ವಂದಿಸಿದರು.