More

    ರಾಜಕಾರಣಿಗಳು ಮಾಡಿದ ಕರ್ಮಕ್ಕೆ ತಕ್ಕ ಪಾಠ ಕಲಿಯುವ ದಿನ ಬಂದಿದೆ: ಕಾಲಜ್ಞಾನಿ ಪಂ. ಶ್ರೀ ಕಾಶಿನಾಥ್ ಮಿಶ್ರ

    ಬೆಂಗಳೂರು: ಕಲಿಯುಗ- ಸತ್ಯಯುಗದ ಸಂಧಿಕಾಲ ಆರಂಭವಾಗಿದ್ದು, ರಾಜಕಾರಣಿಗಳು ಅವರು ಮಾಡಿದ ಕರ್ಮಕ್ಕೆ ತಕ್ಕ ಫಲ ಅನುಭವಿಸುತ್ತಿದ್ದಾರೆ ಎಂದು ಓಡಿಶಾದ ಖ್ಯಾತ ಕಾಲಜ್ಞಾನಿ, ವಿಶ್ವದೆಲ್ಲೆಡೆ ಅತ್ಯಂತ ಜನಪ್ರಿಯವಾಗಿರುವ ಭವಿಷ್ಯ ಮಾಲಿಕಾದ ಅದ್ಭುತ ಜ್ಞಾನವನ್ನು ಸಿದ್ದಿಕೊಂಡಿರುವ ಕಾಲಜ್ಞಾನಿ ಪಂ. ಶ್ರೀ ಕಾಶಿನಾಥ್ ಮಿಶ್ರ ಅವರು ತಿಳಿಸಿದ್ದಾರೆ.

    ನಗರದ ಬಸವನಗುಡಿಯ ಶಂಕರಮಠದ ಶ್ರೀ ಭಾರತೀ ತೀರ್ಥ ಸಭಾ ಭವನದಲ್ಲಿ ಸುದ್ದಿಗೋಷ್ಠಿಯನ್ನು ಉದ್ದೇಶಿಸಿ ಮಾತನಾಡಿದ ಅವರು, ಈ ತೆರನಾದ ಬೆಳವಣಿಗೆ ಎಲ್ಲಾ ರಾಜಕಾರಣಿಗಳ ಬದುಕಿನಲ್ಲಿ ಕಂಡು ಬರಲಿದೆ ಎಂದು ತಿಳಿಸಿದರು. ‘ಎಲ್ಲ ರಾಜಕಾರಣಿಗಳು ತಮ್ಮ ಕರ್ಮಕ್ಕೆ ಫಲ ಪಡೆಯುವ ದಿನ ಬಂದಿದೆ. ಅದು ಒಂದಿಬ್ಬರು ರಾಜಕಾರಣಿಗಳಲ್ಲ,” ಎಂದು ಅವರು ತಿಳಿಸಿದರು.

    ಮಾರ್ಚ್ 29, 2025ರಿಂದ 2034ರವರೆಗೆ ವಿಶ್ವ ಸಂಕಷ್ಟದ ದಿನ ಎದುರಿಸಲಿದೆ. ಭಾರತದ ಮೇಲೆ 13 ರಾಷ್ಟ್ರಗಳು ದಾಳಿ ಮಾಡಲಿವೆ. ಇದರಲ್ಲಿ ಕೆಲವು ಮಿತ್ರ ದೇಶಗಳು ಕೂಡಾ ಸೇರಿವೆ. ಈ ಯುದ್ಧದಲ್ಲಿ ಉತ್ತರ ಭಾರತ ಅಪಾರ ಕಷ್ಟ ಎದುರಿಸಲಿದೆ ಎಂದು ತಿಳಿಸಿದ ಅವರು ಪುರಿ ಜಗನ್ನಾಥ ದೇಗುಲ ಸಮುದ್ರದಲ್ಲಿ ಮುಳುಗುವ ಸಾಧ್ಯತೆ ಇದೆ ಎಂದು ತಿಳಿಸಿದರು.

    ವಿಶ್ವದಲ್ಲಿ ಈ ಅವಧಿಯಲ್ಲಿ ಹೊಸ ಸಾಂಕ್ರಾಮಿಕ ಮಹಾಮಾರಿ, ಯುದ್ಧ ನಡೆಯಲಿದೆ. ೨೦೨೪ರ ಬಳಿಕ ಸತ್ಯಯುಗ ಆರಂಭ ಬಳಿಕ ಎಲ್ಲವು ಬದಲಾಗಲಿದೆ ಎಂದು ಅವರು ತಿಳಿಸಿದರು. ಕಾಲಜ್ಞಾನಿ ಪಂ. ಶ್ರೀ ಕಾಶಿನಾಥ್ ಮಿಶ್ರ ನಮ್ಮ ಬೆಂಗಳೂರಿನಲ್ಲಿ ಶ್ರೀ ಮದ್ಭಾಗವತ ಮಹಾ ಪುರಾಣ ಕಥಾಮೃತ ಮತ್ತು ಭವಿಷ್ಯ ಮಾಲಿಕಾ ಪುರಾಣ ಕಾಯಕ್ರಮ ನಡೆಸಿಕೊಡಲು ಆಗಮಿಸಿದ್ದಾರೆ. ಇದೆ ಮೊದಲ ಬಾರಿಗೆ ಅವರು ನಮ್ಮ ಬೆಂಗಳೂರಿನಲ್ಲಿ ಆಸ್ತಿಕ ಮಹಾಶಯರನ್ನು ಹರಸಲಿದ್ದಾರೆ.

    ಜೂನ್ 24ರಿಂದ ಜೂನ್ 30ರವರೆಗೆ ಪ್ರತಿದಿನ ಸಂಜೆ 4ರಿಂದ 7ರವರೆಗೆ, ನಗರದ ಬಸವನಗುಡಿಯ ಶಂಕರಪುರಂನ ಶಂಕರ ಮಠದ ಶ್ರೀ ಭಾರತೀ ತೀರ್ಥ ಸಭಾ ಭವನದಲ್ಲಿ ಅವರು ಈ ಕಾಲಜ್ಞಾನ ಕಾರ್ಯಕ್ರಮ ನಡೆಸಿಕೊಡಲಿದ್ದಾರೆ. ಈ ಗ್ರಂಥದ ಪ್ರಕಾರ ಈಗಿರುವ 795 ಕೋಟಿ ಜನರ ಪೈಕಿ ಕೇವಲ 64 ಕೋಟಿ ಜನರು ಮಾತ್ರ ಕಲಿಯುಗದಿಂದ ಸತ್ಯಯುಗಕ್ಕೆ ತೆರಳುತ್ತಾರೆ. ಮುಂದಿನ 8 ವರ್ಷಗಳಲ್ಲಿ ಜಗತ್ತು ಮೂರನೇ ಜಾಗತಿಕ ಮಹಾಯುದ್ಧ, ಆಹಾರ ಧಾನ್ಯಗಳ ಕೊರತೆ, ಬಿರುಗಾಳಿಗಳು ಮತ್ತು ಸುಂಟರಗಾಳಿಗಳು, ಪ್ರವಾಹಗಳು ಮತ್ತು ಸುನಾಮಿಗಳು, ಜ್ವಾಲಾಮುಖಿ ಸ್ಫೋಟಗಳು ಮತ್ತು ಬೆಂಕಿಯಿಂದ ನಾಶ, ಭೂಕಂಪಗಳು, ಬರ ಮತ್ತು ಹಸಿವು, ಸಾಂಕ್ರಾಮಿಕ ರೋಗಗಳಿಂದ ಈ ಜಗತ್ತು ನಡುಗಲಿದೆ. ಈ ಪೈಕಿ ಈಗಾಗಲೇ ಕೆಲವು ಸತ್ಯವಾಗುತ್ತಿದ್ದು, ಹೀಗಾಗಿ, ಪಂ. ಶ್ರೀ ಕಾಶಿನಾಥ್ ಮಿಶ್ರ ಅವರ ಭವಿಷ್ಯ ದರ್ಪಣ ಎಲ್ಲೆಡೆ ಪ್ರಖ್ಯಾತಿ ಹೊಂದುತ್ತಿದೆ.

    ಶ್ರೀ ಪುರಿಯ ಶ್ರೀ ಜಗನ್ನಾಥನ ಪರಮ ಭಕ್ತರಾದ ಪಂ. ಶ್ರೀ ಕಾಶಿನಾಥ್ ಮಿಶ್ರ ತ್ರಿಸಂಧ್ಯಾಧಾರ ಶ್ಲೋಕದ ಮೂಲಕ ಜಗತ್ತನ್ನು ರಕ್ಷಿಸಲು ತಮ್ಮ ಭಕ್ತರೊಂದಿಗೆ ಶ್ರಮಿಸುತ್ತಿದ್ದಾರೆ. ಈ ಭವಿಷ್ಯ ಮಾಲಿಕಾ ಗ್ರಂಥಗಳನ್ನು 600 ವರ್ಷಗಳ ಹಿಂದೆ ಪಂಚ ಸಖರು ಅಂದರೆ ದ್ವಾಪರ ಯುಗದ ಭಗವಾನ್ ಶ್ರೀ ಕೃಷ್ಣನ ಪರಮ ಮಿತ್ರರು ಕಲಿಯಗದಲ್ಲಿ ಪುನರ್ಜನ್ಮ ಪಡೆದು ಬರೆದು, ಮನುಕುಲದ ಭವಿಷ್ಯ ಬರೆದಿದ್ದಾರೆ. ಈ ಕೃಷ್ಣನ ಸ್ನೇಹಿತರೆಂದರೆ ಅಚ್ಯುತಾನಂದ ದಾಸ, ಬಲರಾಮ ದಾಸ, ಶಿಶು ಅನಂತ ದಾಸ, ಯಶವಂತ ದಾಸ, ಮತ್ತು ಜಗನ್ನಾಥ ದಾಸ (ಧಾಮ, ಸುಧಾಮ, ಸುಭಾಲ, ಸುಭಾವು, ಹಾಗು ಸುಭಾಕ್ಷ.) ಈ ಗ್ರಂಥದ ಜ್ಞಾನವನ್ನು ಕಾಲಜ್ಞಾನಿ ಪಂ. ಶ್ರೀ ಕಾಶಿನಾಥ್ ಮಿಶ್ರ ಭಕ್ತರಿಗೆ ಅನುಗ್ರಹಿಸಲಿದ್ದಾರೆ.

    ಸಿನಿಮಾ

    ಲೈಫ್‌ಸ್ಟೈಲ್

    ಟೆಕ್ನಾಲಜಿ

    Latest Posts