ತಲೇಕಳ ದೇವಾಲಯದಿಂದ ಕಳವು : ಬಾಗಿಲು ಒಡೆದು ಚಿನ್ನ, ಬೆಳ್ಳಿ ಆಭರಣ, ನಗದು ಕಳ್ಳತನ

ಕಾಸರಗೋಡು: ಮಂಜೇಶ್ವರ ಪೊಲೀಸ್ ಠಾಣೆ ವ್ಯಾಪ್ತಿಯ ಮೀಯಪದವು ತಲೇಕಳ ಶ್ರೀ ಸದಾಶಿವ ರಾಮವಿಠಲ ದೇವಸ್ಥಾನದ ಬಾಗಿಲು ಒಡೆದು ಕಳ್ಳರು ಶಿವಲಿಂಗಕ್ಕೆ ಅಳವಡಿಸಿದ್ದ ಚಿನ್ನ ಹಾಗೂ ಬೆಳ್ಳಿ ಆಭರಣ, ಕಾಣಿಕೆ ಹುಂಡಿಯಿಂದ ನಗದು ದೋಚಿದ್ದಾರೆ. ದೇವಸ್ಥಾನದ ಅರ್ಚಕ ಶಿವರಾಜ ಭಟ್ಟ ಅವರು ಬೆಳಗ್ಗಿನ ಪೂಜೆಗೆ ದೇವಸ್ಥಾನಕ್ಕೆ ಆಗಮಿಸಿದಾಗ ಕಳವು ಬೆಳಕಿಗೆ ಬಂದಿದೆ. ಸುಮಾರು ಮೂರು ಪವನು ಚಿನ್ನ, ಬೆಳ್ಳಿ ಸಾಮಗ್ರಿ, ಎರಡು ಕಾಣಿಕೆ ಹುಂಡಿಯಿಂದ ನಗದು ಹಣ ಕಳವುಗೈಯಲಾಗಿದೆ. ಪುರಾತನ ದೇವಾಲಯ ಇದಾಗಿದ್ದು, ಹೊರಾಂಗಣ ಹಾಗೂ ಗರ್ಭಗುಡಿ ಬಾಗಿಲು … Continue reading ತಲೇಕಳ ದೇವಾಲಯದಿಂದ ಕಳವು : ಬಾಗಿಲು ಒಡೆದು ಚಿನ್ನ, ಬೆಳ್ಳಿ ಆಭರಣ, ನಗದು ಕಳ್ಳತನ