More

    ಸ್ವಾರ್ಥ,ಪ್ರತಿಷ್ಠೆಯಿಂದ ಜೀವನದ ಮೌಲ್ಯಗಳು ಕುಸಿಯುತ್ತಿವೆ

    ಚಿಕ್ಕಮಗಳೂರು: ಸ್ವಾರ್ಥ, ಪ್ರತಿಷ್ಟೆಗಳಿಂದ ಸಾಮಾಜಿಕ ಆರೋಗ್ಯ, ವ್ಯಕ್ತಿಗತ ನೆಮ್ಮದಿಗಳನ್ನು ಕಳೆದುಕೊಳ್ಳಬೇಕಾಗಿದೆ. ಈ ನಿಟ್ಟಿನಲ್ಲಿ ವಿದ್ಯಾರ್ಥಿಗಳನ್ನು ಸ್ವಾವಲಂಬಿಗಳನ್ನಾಗಿ ಮಾಡದೆ ಇದ್ದರೆ ಮೌಲ್ಯಗಳು ಉಳಿಯಲು ಸಾಧ್ಯವಿಲ್ಲ ಎಂದು ಬಸವ ತತ್ವ ಪೀಠದ ಡಾ. ಶ್ರೀ ಬಸವ ಮರುಳಸಿದ್ದ ಸ್ವಾಮೀಜಿ ಹೇಳಿದರು.

    ನಗರದ ಕಲ್ಯಾಣ ನಗರದ ಬಸವ ಮಂದಿರದಲ್ಲಿ ಏರ್ಪಡಿಸಲಾಗಿದ್ದ ೩೫ನೇ ಶಿವಾನುಭವಗೋಷ್ಠಿ, ನೂತನವಾಗಿ ಆಯ್ಕೆಯಾದ ಜನಪ್ರತಿನಿಧಿಗಳಿಗೆ ಅಭಿನಂದನೆ ಮತ್ತು ವಿದ್ಯಾರ್ಥಿಗಳಿಗೆ ಪ್ರತಿಭಾ ಪುರಸ್ಕಾರ ಕಾರ್ಯಕ್ರಮದ ಸಾನ್ನಿಧ್ಯವಹಿಸಿ ಆಶೀರ್ವಚನ ನೀಡಿದ ಅವರು, ಮೌಲ್ಯಗಳನ್ನು ಸರಿಯಾಗಿ ರಕ್ಷಿಸಿಕೊಳ್ಳದಿದ್ದರೆ ಏನಾಗಬಹುದು ಎಂಬುದಕ್ಕೆ ಇಂದು ಸಮಾಜದಲ್ಲಿ ನಡೆಯುತ್ತಿರುವ ಘಟನೆಗಳೇ ಸಾಕ್ಷಿ. ಮೌಲ್ಯಗಳಿಗೆ ಮಾದರಿಯಾಗಬೇಕಿದ್ದವರು ಅವುಗಳನ್ನು ಗಾಳಿಗೆ ತೂರಿ ಮೆರೆಯುತ್ತಿದ್ದಾರೆ ಎಂದು ವಿಷಾಧಿಸಿದರು.
    ಉನ್ನತ ಸ್ನಾನಮಾನದಲ್ಲಿ ಇದ್ದವರಿಂದಲೇ ಸಮಾಜಕ್ಕೆ ಅಪಾಯ ಉಂಟಾಗಿದೆ. ಇಂದು ನಡೆಯುತ್ತಿರುವ ದುರಂತಕ್ಕೆ ಪ್ರಮುಖ ಕಾರಣ ಉನ್ನತ ಸ್ಥಾನದಲ್ಲಿ ಇರುವವರೇ ಆಗಿದ್ದಾರೆ. ಅವರೇ ಬಹುಪಾಲು ಮೌಲ್ಯಗಳ ಹರಣ ಮಾಡುತ್ತಿದ್ದಾರೆ. ಸ್ವಾರ್ಥ, ಪ್ರತಿಷ್ಟೆಗಳಿಗಿಂತಲೂ ಜೀವನ ಬಹಳ ದೊಡ್ಡದು ಎಂದು ಅರಿತು ಬಾಳಬೇಕಾಗಿದೆ ಎಂದು ಕಿವಿಮಾತು ಹೇಳಿದರು.
    ಮಹಾಭಾರತದಲ್ಲಿ ವಸ್ತಾçಪಹರಣ ನಡೆಯಿತು. ಈಗ ಮಾನಾಪಹರಣ ನಡೆಯುತ್ತಿದೆ. ಅತ್ಯಾಚಾರ, ಅನಾಚಾರಗಳಿಗೆ ಬದಲಾಗಿ ಶರಣರ ಪಂಚಾಚಾರಗಳನ್ನು ಅಳವಡಿಸಿಕೊಳ್ಳಬೇಕು. ಎಲ್ಲಾ ರಂಗಗಳಲ್ಲಿಯೂ ಭ್ರಷ್ಟರೇ ಕುಳಿತರೆ ಮೌಲ್ಯಗಳಿಗೆ ಮಾದರಿಯಾಗುವವರು ಯಾರು ಎಂದು ಪ್ರಶ್ನಿಸಿದರು.
    ಇಂದು ಮಾದರಿಯಾಗಬಲ್ಲ ವ್ಯಕ್ತಿತ್ವಗಳು ಎಲ್ಲಿವೆ ಎಂದು ಪ್ರಶ್ನಿಸಿದ ಶ್ರೀಗಳು, ಸರಿದಾರಿಯನ್ನು ದಿಗ್ದರ್ಶಿಸುವವನೇ ನಾಯಕ. ಸತ್ಯ, ನ್ಯಾಯ ಮತ್ತು ಶ್ರಮದ ಮೌಲ್ಯಗಳು ವಿದ್ಯಾರ್ಥಿಗಳನ್ನು ಸ್ವಾವಲಂಬಿಗಳನಾಲಿಸುತ್ತವೆ. ದುಷ್ಟರಿಂದ ದೇಶ ಕುಲಗೆಡುತ್ತಿಲ್ಲ. ಅವರ ವಿರುದ್ಧ ಸತ್ಯ ಹೇಳಲಿಕ್ಕೆ ಆಗದ ಶಿಷ್ಟರಿಂದ ದೇಶ ಹಾಳಾಗುತ್ತಿದೆ ಎಂದು ಪ್ರತಿಪಾಧಿಸಿದರು.
    ಮಾಜಿ ಸಚಿವ ಹಾಗೂ ವಿಧಾನಪರಿಷತ್ ಸದಸ್ಯ ಸಿ.ಟಿ ರವಿ ಮಾತನಾಡಿ, ಬುದ್ಧಿ ಮುಕ್ಕಾಲು ವಿದ್ಯೆ ಒಕ್ಕಾಲು ಇದ್ದರೆ ಎಲ್ಲಿಯೂ ಬದುಕಿ ಬರುತ್ತಾರೆ. ಜೀವನದಲ್ಲಿ ಎದುರಾಗುವ ಕಷ್ಟಗಳನ್ನು ಎದುರಿಸಿ ನಿಂತಾಗ ಗಟ್ಟಿಯಾಗುತ್ತೇವೆ. ಕಷ್ಟವನ್ನು ಎದುರಿಸದಿದ್ದರೆ ಗಟ್ಟಿಯಾಗಲು ಅವಕಾಶವೇ ಸಿಗುವುದಿಲ್ಲ ಎಂದು ಹೇಳಿದರು.
    ದೇವರು ಒಂದಲ್ಲ ಒಂದು ಅವಕಾಶವನ್ನು ಸೃಷ್ಟಿ ಮಾಡಿರುತ್ತಾನೆ. ಹೀಗಾಗಿ ಒಂದು ಅವಕಾಶ ತಪ್ಪಿದ ಕಾರಣಕ್ಕೆ ಜೀವನ ಮುಗಿದುಹೋಯಿತು ಎಂದು ಭಾವಿಸಬಾರದು. ಹೊಸತನವನ್ನು ಮೈಗೂಡಿಸಿಕೊಂಡು ಸಾಧನೆ ಮಾಡಿದ ಎಪಿಜೆ ಅಬ್ದುಲ್ ಕಲಾಂ ಜೀವನವನ್ನು ಸ್ಮರಿಸಬೇಕು. ದೇವರು ಹುಟ್ಟು-ಸಾವು ಎರಡನ್ನು ಮಾತ್ರ ಬರೆಯುತ್ತಾನೆ ಎಂದು ತಿಳಿಸಿದರು.
    ವಿದ್ಯಾರ್ಥಿಗಳು ಇದು ನಮ್ಮಿಂದ ಸಾಧ್ಯವಿಲ್ಲ ಎಂಬ ಮನೋಭಾವದಿಂದ ಹೊರಬಂದು ಸಮಾಜಮುಖಿ ಕಾರ್ಯಕ್ರಮಗಳಲ್ಲಿ ತೊಡಗಿ ಸಾಧನೆ ಮಾಡಿದಾಗ ಮಾತ್ರ ಸಂಬAಧ ಇಲ್ಲದವರೂ ನಮ್ಮನ್ನು ನೆನಪಿಸಿಕೊಳ್ಳುತ್ತಾರೆ. ರಾಷ್ಟçಭಾವ ಮತ್ತು ಸಮಾಜಭಾವ ಇಲ್ಲದಿದ್ದರೆ ಹಾಗೂ ನಾವೆಲ್ಲ ಒಂದು ಎಂಬ ಭಾವನೆ ಇಲ್ಲದೆ ಹೋದರೆ ರಾಷ್ಟçವೂ ಸತ್ತು ಮನುಷ್ಯರೂ ಇರಲು ಸಾಧ್ಯವಿಲ್ಲ. ಆದ್ದರಿಂದ ಪರಸ್ಪರ ಹೊಂದಾಣಿಕೆಯಿAದ ಜೀವನ ನಡೆಸುವ ಮೂಲಕ ಸಮಾಜಕ್ಕೆ ಮಾದರಿಯಾಗೋಣ ಎಂದು ಕರೆ ನೀಡಿದರು.
    ಅಭಿನಂದನೆ ಸ್ವೀಕರಿಸಿ ಮಾತನಾಡಿದ ವಿಧಾನ ಪರಿಷತ್ ಸದಸ್ಯ ಎಸ್.ಎಲ್.ಭೋಜೇಗೌಡ, ಗುರುಮಠಗಳ ಮತ್ತು ಗುರುಗಳ ಆಶೀರ್ವಾದ ಸದಾ ನಮಗೆ ಹಾಗೂ ಸಮಾಜಕ್ಕೆ ಬೇಕಾಗುತ್ತದೆ. ಗುರುಗಳು ಸಮಾಜವನ್ನು ತಿದ್ದಿ, ತೀಡಿ ಉತ್ತಮ ಕಾರ್ಯಗಳನ್ನು ಮಾಡುತ್ತಿದ್ದಾರೆ. ಶ್ರೀಗಳು ಭಕ್ತರನ್ನು ಸಮಯೋಚಿತವಾಗಿ ತೆಗೆದುಕೊಂಡು ಅಭಿವೃದ್ಧಿ ಕಾರ್ಯಗಳಲ್ಲಿ ಸಾಧನೆ ಮಾಡಿದ್ದಾರೆ ಎಂದರು.
    ಇAದು ಸಮಾಜದಲ್ಲಿ ಸ್ವಾರ್ಥ-ಪ್ರತಿಷ್ಟೆಯಿಂದಾಗಿ ನೆಮ್ಮದಿಯ ಬದುಕು ಮರೀಚಿಕೆಯಾಗಿದೆ. ನಮ್ಮ ಹಿರಿಯರು ಕೃಷಿಯಿಂದ ಸ್ವಾಸ್ಥö್ಯ ಸಮಾಜ ಕಟ್ಟಿ ಬೆಳೆಸಿದ್ದಾರೆ. ಇಂದು ಮಕ್ಕಳು ಕೃಷಿ ಬದುಕಿನಿಂದ ದೂರ ಉಳಿಯುತ್ತಿರುವುದು ತುಂಬಾ ಅಪಾಯಕಾರಿ ಬೆಳವಣಿಗೆ ಎಂದು ಹೇಳಿದರು.
    ಶಿವಮೊಗ್ಗದ ಉಪನ್ಯಾಸಕ ಡಾ. ಕೆ.ಜಿ ವೆಂಕಟೇಶ್ ಸಾಮಾಜಿಕ ಜೀವನ ಮತ್ತು ಮೌಲ್ಯ ಪ್ರಜ್ಞೆ ವಿಷಯದ ಬಗ್ಗೆ ಉಪನ್ಯಾಸ ನೀಡಿದರು. ಇದೇ ಸಂದರ್ಭದಲ್ಲಿ ಪ್ರತಿಭಾನ್ವಿತ ವಿದ್ಯಾರ್ಥಿ-ವಿದ್ಯಾರ್ಥಿನಿಯರನ್ನು ಸನ್ಮಾನಿಸಲಾಯಿತು. ವೇದಿಕೆಯಲ್ಲಿ ಕಡೂರು ಪಿಎಲ್‌ಡಿ ಬ್ಯಾಂಕ್ ಅಧ್ಯಕ್ಷ ಎಸ್.ಓಂಕಾರಪ್ಪ, ಪ್ರಮುಖರಾದ ಚಿದಾನಂದ, ಎಂ.ಎA.ಚAದ್ರಶೇಖರ್, ವೈ.ಎಸ್.ಮಲ್ಲೇಗೌಡ, ಸದಾಶಿವಪ್ಪ ಮತ್ತಿತರರಿದ್ದರು.

    ಸಿನಿಮಾ

    ಲೈಫ್‌ಸ್ಟೈಲ್

    ಟೆಕ್ನಾಲಜಿ

    Latest Posts