ಬಾರ್ಬಡೋಸ್: ವೆಸ್ಟ್ಇಂಡೀಸ್ನಲ್ಲಿ ಜೂನ್ 29ರಂದು ನಡೆದ ಟಿ20 ವಿಶ್ವಕಪ್ ಫೈನಲ್ನಲ್ಲಿ ದಕ್ಷಿಣ ಆಫ್ರಿಕಾವನ್ನು ಮಣಿಸಿ, ಟ್ರೋಫಿಗೆ ಮುತ್ತಿಡುವ ಮೂಲಕ ಟೀಮ್ ಇಂಡಿಯಾ ಹೊಸ ಇತಿಹಾಸವನ್ನು ನಿರ್ಮಿಸಿತು. 17 ವರ್ಷಗಳ ಬಳಿಕ ಇದೀಗ ಟಿ20 ವಿಶ್ವಕಪ್ ಭಾರತದ ಪಾಲಾಗಿದೆ. ಇದೇ ಖುಷಿಯಲ್ಲಿರುವ ಟೀಮ್ ಇಂಡಿಯಾ ದೊಡ್ಡ ಸಂಕಷ್ಟ ಎದುರಾಗಿತ್ತು. ಹವಾಮಾನ ವೈಪರೀತ್ಯದಿಂದ ವೆಸ್ಟ್ ಇಂಡೀಸ್ನಿಂದ ತವರಿಗೆ ಹಿಂದಿರುಗಲು ಸಾಧ್ಯವಾಗದೇ ಕೆರಿಬಿಯನ್ ನಾಡಲ್ಲಿ ಟೀಮ್ ಇಂಡಿಯಾ ಆಟಗಾರರು ಸಿಲುಕಿಕೊಂಡಿದ್ದರು.
ಇದನ್ನೂ ಓದಿ: ಆ ಪ್ರಶಸ್ತಿಗೆ ವಿರಾಟ್ ಅರ್ಹರಲ್ಲ! ಅದು ನಡೆದಿದ್ರೆ ಭಾರತದ ಪಾಲಿಗೆ ಕೊಹ್ಲಿಯೇ ವಿಲನ್… ಮಾಜಿ ಕ್ರಿಕೆಟಿಗನ ಹೇಳಿಕೆ
ವಿಂಡೀಸ್ನಲ್ಲಿ ಭಾರೀ ಮಳೆ ಮತ್ತು ಚಂಡಮಾರುತದ ಎಚ್ಚರಿಕೆಗಳು ಸೇರಿದಂತೆ ಪ್ರತಿಕೂಲ ಹವಾಮಾನದ ಕಾರಣದಿಂದಾಗಿ ಟೀಮ್ ಇಂಡಿಯಾದ ಸದಸ್ಯರು ತವರಿಗೆ ಬರುವುದು ವಿಳಂಬವಾಗಿತ್ತು. ಆದರೆ ಇದೀಗ ಬಿಸಿಸಿಐ ವಿಶೇಷ ವಿಮಾನವನ್ನು ವ್ಯವಸ್ಥೆ ಮಾಡಿದ್ದು, ಭಾರತೀಯ ಕ್ರಿಕೆಟ್ ತಂಡವನ್ನು ಬಾರ್ಬಡೋಸ್ನಿಂದ ಭಾರತಕ್ಕೆ ಕರೆತರಲು ಎಲ್ಲಾ ಮುಂಜಾಗ್ರತಾ ಕ್ರಮಗಳನ್ನು ತೆಗೆದುಕೊಂಡಿದೆ.
Good news. The Indian team to finally fly out of Barbados on a special flight arranged by BCCI Tuesday 6pm local time. To land in Delhi around 7.45 pm Wednesday
— Vikrant Gupta (@vikrantgupta73) July 2, 2024
ಇಂದು (ಜುಲೈ 2) ಬಿಸಿಸಿಐ ಏರ್ಪಡಿಸಿರುವ ವಿಶೇಷ ವಿಮಾನದಲ್ಲಿ ಬಾರ್ಬಡೋಸ್ನಿಂದ ಸಂಜೆ 6 ಗಂಟೆಗೆ ಹೊರಡಲಿರುವ ಟೀಮ್ ಇಂಡಿಯಾ, ಬುಧವಾರ (ಜು.03) ಸಂಜೆ 7:45ಕ್ಕೆ ದೆಹಲಿ ಅಂತಾರಾಷ್ಟ್ರೀಯ ವಿಮಾನ ನಿಲ್ದಾಣಕ್ಕೆ ಬಂದಿಳಿಯಲಿದೆ. ಈ ಕುರಿತು ಬಿಸಿಸಿಐ ತನ್ನ ಅಧಿಕೃತ ಸಾಮಾಜಿಕ ಜಾಲತಾಣದ ಖಾತೆಯಲ್ಲಿ ಮಾಹಿತಿ ಹಂಚಿಕೊಂಡಿದೆ,(ಏಜೆನ್ಸೀಸ್).
ಆ ಒಂದೊಂದು ಮಾತುಗಳು… ಅಂದು ತನ್ನೊಂದಿಗೆ ರೋಹಿತ್ ಹಂಚಿಕೊಂಡ ವಿಷಯ ಬಿಚ್ಚಿಟ್ಟ ಸೂರ್ಯ