More

    ಪ್ರತಿಭಾ ಪುರಸ್ಕಾರ ಪೂರ್ವಭಾವಿ ಸಭೆ

    ಅರಕೇರಾ: ಸಿರವಾರದಲ್ಲಿ ಜು.14ರಂದು ಆಯೋಜಿಸಿರುವ ಛಲವಾದಿ ಸಮುದಾಯದ ಪ್ರತಿಭಾ ಪುರಸ್ಕಾರ ಹಾಗೂ ಸನ್ಮಾನ ಕಾರ್ಯಕ್ರಮದ ಅಂಗವಾಗಿ ಪಟ್ಟಣದ ಪ್ರವಾಸಿ ಮಂದಿರದಲ್ಲಿ ಛಲವಾದಿ ಮಹಾಸಭಾ ತಾಲೂಕು ಸಮಿತಿ ಪದಾಧಿಕಾರಿಗಳ ಪೂರ್ವಭಾವಿ ಸಭೆ ಸೋಮವಾರ ನಡೆಯಿತು.

    ಕಾರ್ಯಕ್ರಮಕ್ಕೆ ಆಗಮಿಸಲಿರುವ ವಿದ್ಯಾರ್ಥಿಗಳು ಮತ್ತು ಪಾಲಕರಿಗೆ ವಾಹನಗಳ ವ್ಯವಸ್ಥೆ, ತಾಲೂಕು ಮಟ್ಟದಲ್ಲಿ ಬ್ಯಾನರ್ ಅಳವಡಿಕೆ, ಗ್ರಾಪಂ ಮಟ್ಟದಲ್ಲಿ ಭಿತ್ತಿಪತ್ರಗಳನ್ನು ಹಂಚುವುದಕ್ಕೆ ತಂಡಗಳ ರಚನೆ ಮಾಡಲಾಯಿತು. ತಾಲೂಕು ಸಮಿತಿ ಅಧ್ಯಕ್ಷ ಮರಿಲಿಂಗಪ್ಪ ಹೆಗ್ಗಡದಿನ್ನಿ ಅಧ್ಯಕ್ಷತೆ ವಹಿಸಿದ್ದರು. ಪ್ರಧಾನ ಕಾರ್ಯದರ್ಶಿ ಬಾಳಪ್ಪ ಎನ್.ಗಣೇಕಲ್, ಜಿಲ್ಲಾ ಸಮಿತಿ ಉಪಾಧ್ಯಕ್ಷ ಸಚ್ಚಿದಾನಂದ ಶಾಖಾಪುರ, ಪದಾಧಿಕಾರಿಗಳಾದ ರಂಗಣ್ಣ ನಾಗಡದಿನ್ನಿ, ಶಿವರಾಮ್ ಕಟ್ಟಿಮನಿ ಮುಂಡರಗಿ, ಹನುಮಂತ ಜಾಡಲದಿನ್ನಿ, ರಾಮಣ್ಣ ಬುದ್ದಿನ್ನಿ, ಮಲ್ಲಪ್ಪ ಎನ್.ಗಣೇಕಲ್, ಹೇಮಣ್ಣ, ಮರಿಯಪ್ಪ ಜಾಡಲದಿನ್ನಿ ಇದ್ದರು.

    ಸಿನಿಮಾ

    ಲೈಫ್‌ಸ್ಟೈಲ್

    ಟೆಕ್ನಾಲಜಿ

    Latest Posts