ನವದೆಹಲಿ: ಬಾರ್ಬಡೋಸ್ನಲ್ಲಿ ದಕ್ಷಿಣ ಆಫ್ರಿಕಾ ವಿರುದ್ಧ ಟೀಮ್ ಇಂಡಿಯಾ ಐತಿಹಾಸಿಕವಾಗಿ ವಿಶ್ವಕಪ್ ಗೆಲ್ಲುತ್ತಿದ್ದಂತೆ ತಂಡದ ಸ್ಟಾರ್ ಕ್ರಿಕೆಟಿಗರಾದ ಕ್ಯಾಪ್ಟನ್ ರೋಹಿತ್ ಶರ್ಮ, ವಿರಾಟ್ ಕೊಹ್ಲಿ ಮತ್ತು ರವೀಂದ್ರ ಜಡೇಜಾ ಟಿ20 ಮಾದರಿಗೆ ನಿವೃತ್ತಿ ಘೋಷಿಸಿದರು. ತಮ್ಮ ನೆಚ್ಚಿನ ಸ್ಟಾರ್ ಕ್ರಿಕೆಟಿಗರು ಇನ್ಮುಂದೆ ಈ ಫಾರ್ಮೆಟ್ನಲ್ಲಿ ಕಾಣಿಸಿಕೊಳ್ಳುವುದಿಲ್ಲ ಎಂಬ ವಿಷಯ ಸದ್ಯ ಅಭಿಮಾನಿಗಳಲ್ಲಿ ದೊಡ್ಡ ಆಘಾತವನ್ನೇ ಉಂಟುಮಾಡಿದೆ.
ಇದನ್ನೂ ಓದಿ: ಒಂದು ಚಿಕ್ಕ ತಪ್ಪಿನಿಂದ ದರ್ಶನ್ ಕೆರಿಯರ್ ಹಾಳಾಗೋ ಥರ ಆಯ್ತು ಎಂದ ರವಿಚೇತನ್
ಇನ್ನು ದಕ್ಷಿಣ ಆಫ್ರಿಕಾ ವಿರುದ್ಧ ವಿಶ್ವಕಪ್ ಟ್ರೋಫಿ ಗೆದ್ದ ಭಾರತೀಯ ಆಟಗಾರರು, ಮೈದಾನದಲ್ಲೇ ಭಾವುಕರಾದರು. ಕ್ಯಾಪ್ಟನ್ ರೋಹಿತ್ ಶರ್ಮ ಮತ್ತು ಹಾರ್ದಿಕ್ ಪಾಂಡ್ಯ ತಂಡದ ಸಹ ಆಟಗಾರರನ್ನು ತಬ್ಬಿಕೊಂಡು ಕಣ್ಣೀರಿಟ್ಟರು. ಇಂತಹ ಐತಿಹಾಸಿಕ ಕ್ಷಣವನ್ನು ಕಂಡ ಕ್ರಿಕೆಟ್ ಅಭಿಮಾನಿಗಳು, ರೋಹಿತ್ ಪಡೆಗೆ ಸ್ಟೇಡಿಯಂನಲ್ಲಿ ಎದ್ದು ನಿಂತು ಚಪ್ಪಾಳೆ ತಟ್ಟಿ, ಅಭಿನಂದಿಸಿದರು. ಬಾರ್ಬಡೋಸ್ ಪಿಚ್ನಲ್ಲಿ ವಿಶ್ವಕಪ್ ಗೆಲ್ಲುವ ಮುನ್ನ ರೋಹಿತ್ ಹೇಳಿದ ಮಾತುಗಳನ್ನು ಟೀಮ್ ಇಂಡಿಯಾದ ಮಿಸ್ಟರ್ 360 ಮುಕ್ತವಾಗಿ ಹಂಚಿಕೊಂಡಿದ್ದಾರೆ.
“ಅಂದು ನಮಗೆ ಧೈರ್ಯ ಹೇಳಿದ ರೋಹಿತ್, ‘ನಾನು ಈ ಪರ್ವತವನ್ನು ಒಬ್ಬಂಟಿಯಾಗಿ ಏರಲು ಸಾಧ್ಯವಿಲ್ಲ. ಶಿಖರದ ತುತ್ತ ತುದಿಗೆ ತಲುಪಬೇಕಾದರೆ, ನಿಮ್ಮೆಲರ ಆಮ್ಲಜನಕ ಅಗತ್ಯ’. ನಿಮ್ಮ ಬಳಿ ಇರುವ ಅಷ್ಟು ಸಾಮರ್ಥ್ಯವನ್ನು ಪಂದ್ಯದಲ್ಲಿ ತೋರಿಸಿ. ಆಗ ನಾವು ಮುಂದಿನ ದಿನಗಳಲ್ಲಿ ಸೋತೆವು ಎಂಬ ಪಶ್ಚಾತಾಪದಲ್ಲಿ ಇರುವುದಿಲ್ಲ’ ಎಂದರು. ಕ್ಯಾಪ್ಟನ್ ಆಗಿ ರೋಹಿತ್ ನಿಜಕ್ಕೂ ಒಂದು ಅದ್ಭುತ ಶಕ್ತಿ ಎಂದರೆ ತಪ್ಪಾಗಲಾರದು. ಇದನ್ನು ಅವರು ಮೈದಾನದಲ್ಲಿದ್ದಾಗ ನೀವು ಗಮನಿಸರಬಹುದು “ಎಂದ ಸೂರ್ಯ ರೋಹಿತ್ರನ್ನು ಮೆಚ್ಚಿ ಮಾತನಾಡಿದರು,(ಏಜೆನ್ಸೀಸ್).
ಅಂದು ಅವಮಾನ ಇಂದು ಸನ್ಮಾನ: ಇದಕ್ಕೆ ಹೇಳೋದು… ಹಾರ್ದಿಕ್ಗೆ ಫ್ಯಾನ್ಸ್ ಕೊಟ್ಟ ಸಂದೇಶವಿದು!