ಸಿರವಾರ: ಪ್ರತಿಯೊಬ್ಬ ವಿದ್ಯಾರ್ಥಿ ಉತ್ತಮ ಗುರಿ ಇಟ್ಟುಕೊಂಡು ವಿದ್ಯಾಭ್ಯಾಸ ಮಾಡಬೇಕು ಎಂದು ತಹಸೀಲ್ದಾರ್ ರವಿ ಎಸ್.ಅಂಗಡಿ ಹೇಳಿದರು.
ಇದನ್ನೂ ಓದಿ: ಶಾಲೆಗೆ ಕೊಠಡಿ ಕೊರತೆ : ಹೆಬ್ರಿ ಶಾಲೆಯಲ್ಲಿ ದಾಖಲೆ ಸಂಖ್ಯೆ ವಿದ್ಯಾರ್ಥಿಗಳು ; 10 ತರಗತಿಗಳಿಗೆ ಬೇಡಿಕೆ
ಪಟ್ಟಣದ ಬಾಲಕಿಯರ ಪ್ರೌಢ ಶಾಲೆಯಲ್ಲಿ ಕನ್ನಡ ಸಾಹಿತ್ಯ ಪರಿಷತ್ ತಾಲೂಕು ಘಟಕದಿಂದ ಕನ್ನಡ ಭಾಷೆಯಲ್ಲಿ 125 ಅಂಕಗಳಿಸಿದ ವಿದ್ಯಾರ್ಥಿಗಳಿಗೆ ಪ್ರತಿಭಾ ಪುರಸ್ಕಾರ ಕಾರ್ಯಕ್ರಮದಲ್ಲಿ ಮಾತನಾಡಿದರು. ಶಿಕ್ಷಣ ಎಂಬುದು ದೇಶ ಸ್ಥಿತಿಯನ್ನು ಬದಲಾಯಿಸಲು ಇರುವ ಒಂದು ಅದ್ಭುತ ಶಕ್ತಿ.
ಇದನ್ನು ಸರಿಯಾದ ಸಮಯದಲ್ಲಿ ಪಡೆದರೆ ಅ ವ್ಯಕ್ತಿ ಉನ್ನತ ಮಟ್ಟಕ್ಕೆ ಬೆಳೆಯಲು ಸಾಧ್ಯ. ವಿದ್ಯಾರ್ಥಿ ಜೀವನ ವ್ಯರ್ಥ ಮಾಡದೆ ಉತ್ತಮ ಅಭ್ಯಾಸ ಮಾಡಿ ಶಾಲೆಗೆ, ಊರಿಗೆ, ಪಾಲಕರಿಗೆ ಉತ್ತಮ ಹೆಸರು ತನ್ನಿ ಎಂದರು.
ಹೆಚ್ಚು ಅಂಕ ಪಡೆದ ಭಾಗ್ಯ, ಸಾವಿತ್ರಮ್ಮ, ಅಶ್ವಿನಿ, ಅನ್ನಪೂರ್ಣ, ಹೇಮಲತಾ, ಅನ್ನಪೂರ್ಣ ಶರಣಪ್ಪ, ದೇವರಾಜ, ಅಮೃತಾ ಅವರನ್ನು ಸನ್ಮಾನಿಸಲಾಯಿತು.