ಶಿರ್ವ: ಬಂಟಕಲ್ಲು ಶ್ರೀ ಮಧ್ವ ವಾದಿರಾಜ ತಾಂತ್ರಿಕ ಮಹಾವಿದ್ಯಾಲಯದ ವಾಣಿಜೋದ್ಯಮ ಅಭಿವೃದ್ಧಿಕೋಶ ಮತ್ತು ಇನ್ನೋ ವೇಶನ್ ಕೌನ್ಸಿಲ್ ವತಿಯಿಂದ ‘ಉದ್ಯಮಿಗಳಿಗೆ ಹಣಕಾಸಿನ ಮೂಲಗಳು’ ಎಂಬ ವಿಷಯದ ಕುರಿತು ಮೌಲ್ಯವರ್ಧಿತ ಕೋರ್ಸ್ ಆಯೋಜಿಸಿತ್ತು.
ಪ್ರಾಂಶುಪಾಲ ಡಾ.ತಿರುಮಲೇಶ್ವರ ಭಟ್ ಮಾತನಾಡಿ, ಮೌಲ್ಯವರ್ಧಿತ ಕೋರ್ಸ್ಗಳು ಹೊಸ ಆಲೋಚನೆ ಹುಟ್ಟು ಹಾಕಲು ಸಹಾಯ ಹಾಗೂ ವಿದ್ಯಾರ್ಥಿಗಳಿಗೆ ಉತ್ತಮ ಪ್ರಯೋಜನಕಾರಿಯಾಗಿದೆ ಎಂದರು.
ಪ್ರೀಮಿಯರ್ ಇನ್ವೆಸ್ಟ್ಮೆಂಟ್ ಮುಖ್ಯಸ್ಥ ಹಾಗೂ ಸಂಸ್ಥೆ ಆಡಳಿತ ಮಂಡಳಿ ಸದಸ್ಯ ಹರಿಶ್ ಬೆಳ್ಮಣ್ ಮಾತನಾಡಿ, ಬಂಡವಾಳ ಮತ್ತು ಮಾರುಕಟ್ಟೆಯಲ್ಲಿನ ಅವಕಾಶಗಳಿಗೆ ಸಂಬಂಧಿಸಿದಂತೆ ಮಾಹಿತಿ ನೀಡಿದರು.
ವಾಣಿಜೋದ್ಯಮ ಅಭಿವೃದ್ಧಿ ಕೋಶದ ಸಂಯೋಜಕ ಡಾ.ಮಧುಕರ ನಾಯಕ್ ಪರಿಚಯಿಸಿದರು. ಪ್ರಾಧ್ಯಾಪಕಿ ಸಹನಾ ಕಾರಂತ್ ಸ್ವಾಗತಿಸಿದರು. ಉಷಾ ಪಾರ್ವತಿ ವಂದಿಸಿದರು. ಅದಿತಿ ನಾಯಕ್ ಕಾರ್ಯಕ್ರಮ ನಿರೂಪಿಸಿದರು.