ಸುಳ್ಯ: ಮನೆಯ ಸಮೀಪವಿರುವ ಹೊಳೆಗೆ ಶುಕ್ರವಾರ ಸ್ಥಳೀಯ ನಿವಾಸಿಯೊಬ್ಬರು ಕಾಲು ಜಾರಿ ಬಿದ್ದು ಮೃತಪಟ್ಟ ಘಟನೆ ಅರಂತೋಡು ಗ್ರಾಮದ ಅಡ್ಕಬಳೆಯಲ್ಲಿ ಸಂಭವಿಸಿದೆ. ಅಡ್ಕಬಳೆಯ ಚನಿಯ (50) ಮೃತಪಟ್ಟವರು. ಬೆಳಗ್ಗೆ 7 ಗಂಟೆ ವೇಳೆ ಹೊಳೆಗೆ ತೆರಳಿದ್ದು, ಅಕಸ್ಮಾತ್ ಕಾಲುಜಾರಿ ಹೊಳೆಗೆ ಬಿದ್ದಿದ್ದಾರೆ. ಇದನ್ನು ಕಂಡ ಮನೆಯವರು ಕಿರುಚಿದ್ದು, ಸ್ಥಳೀಯ ಗ್ರಾಮ ಪಂಚಾಯಿತಿ ಮಾಜಿ ಅಧ್ಯಕ್ಷ ಮನ್ಸ ಮುಗೇರ ಅವರು ತಕ್ಷಣವೇ ನೀರಿಗೆ ಹಾರಿ ಅವರನ್ನು ಮೇಲೆತ್ತಿದ್ದಾರೆ. ಆದರೆ ಚನಿಯ ಅದಾಗಲೇ ಮೃತಪಟ್ಟಿದ್ದರು.