ಧಾರವಾಡ: ಬಿಎಸ್ಸಿ ಕೃಷಿ ಪದವಿಯಲ್ಲಿ ಶ್ರೀಯಾ ಎಸ್. ಕರಿ 3 ಚಿನ್ನದ ಪದಕ ಪಡೆದು ಕೃಷಿ ವಿಶ್ವವಿದ್ಯಾಲಯದ ‘ಚಿನ್ನದ ಹುಡುಗಿ’ಯಾಗಿ ಹೊರಹೊಮ್ಮಿದರು.
ಹುಬ್ಬಳ್ಳಿಯ ಕೇಶ್ವಾಪುರದ ಸುಧೀರ ಹಾಗೂ ರುಕ್ಮಿಣಿ ದಂಪತಿಯ ಪುತ್ರಿ ಶ್ರೀಯಾ ಹುಬ್ಬಳ್ಳಿಯಲ್ಲಿ ಪಿಯುಸಿವರೆಗೆ ಶಿಕ್ಷಣ ಪೂರೈಸಿದ್ದಾರೆ. ಇವರ ತಂದೆ ಸುಧೀರ ವಾಸ್ತುಶಿಲ್ಪಿ, ತಾಯಿ ಗೃಹಿಣಿ. ಕುಟುಂಬಕ್ಕೂ ಕೃಷಿಗೂ ನಂಟು ಇಲ್ಲದಿದ್ದರೂ ಶ್ರೀಯಾ ಕೃಷಿ ಪದವಿಗೆ ಸೇರುವ ಇಚ್ಚೆ ವ್ಯಕ್ತಪಡಿಸಿದ್ದರು. ಸಿಇಟಿಯಲ್ಲಿ ಉತ್ತಮ ರ್ಯಾಂಕಿಂಗ್ನೊಂದಿಗೆ ಧಾರವಾಡ ಕೃಷಿ ವಿಶ್ವವಿದ್ಯಾಲಯ ಆಯ್ಕೆ ಮಾಡಿಕೊಂಡು ಕೃಷಿ ಪದವಿ ಸೇರಿದರು. ಸದ್ಯ ಹರಿಯಾಣದ ನ್ಯಾಷನಲ್ ಡೇರಿ ರಿಸರ್ಚ್ ಇನ್ಸ್ಟಿಟ್ಯೂಟ್ನಲ್ಲಿ ಕೃಷಿ ಅರ್ಥಶಾಸ ಸ್ನಾತಕೋತ್ತರ ಓದುತ್ತಿದ್ದಾರೆ. ಮುಂದೆ ಕೃಷಿ ವಿಜ್ಞಾನಿಯಾಗಿ ರೈತ ಸಮುದಾಯಕ್ಕೆ ನೆರವಾಗುವ ಗುರಿ ಶ್ರೀಯಾ ಅವರದು.
ನನಗೆ ಮೊದಲಿನಿಂದಲೂ ಬಾಟನಿ ವಿಷಯದಲ್ಲಿ ವಿಶೇಷ ಆಸಕ್ತಿ ಇತ್ತು. ಪಿಯುಸಿ ನಂತರ ಕೃಷಿ ಪದವಿ ಸೇರಬೇಕೆಂದಾಗ ತಂದೆ- ತಾಯಿ ಒಪ್ಪಿದರು. ಯೋಜನಾಬದ್ಧ ಓದಿನಿಂದ 3 ಚಿನ್ನದ ಪದಕ ಪಡೆಯಲು ಸಾಧ್ಯವಾಯಿತು. ಈ ಸಾಧನೆಯ ಹಿಂದೆ ಕುಟುಂಬ, ಬೋಧಕರು, ಸಹಪಾಠಿಗಳ ಪ್ರೋತ್ಸಾಹ ಇದೆ. ಸದ್ಯ ಕೃಷಿ ಅರ್ಥಶಾಸ ಸ್ನಾತಕೋತ್ತರ ಪದವಿಗೆ ಸೇರಿದ್ದೇನೆ. ಕೃಷಿ ವಿಜ್ಞಾನಿಯಾಗುವುದು ನನ್ನ ಗುರಿ. ಸಾಕಷ್ಟು ಸವಾಲುಗಳನ್ನು ಎದುರಿಸುತ್ತಿರುವ ರೈತರಿಗೆ ನೆರವಾಗುತ್ತೇನೆ.
– ಶ್ರಿಯಾ ಎಸ್. ಕರಿ, ಬಿಎಸ್ಸಿ ಕೃಷಿ ಪದವಿಯಲ್ಲಿ 3 ಚಿನ್ನದ ಪದಕ ವಿಜೇತೆ