More

    ಶಾಶ್ವತ ನೆನಪಿನಲ್ಲಿ ಉಳಿಯುವ ಕೆಲಸ ಮಾಡಿದರೆ ಸೇವೆ ಸಾರ್ಥಕ

    ಬೇಲೂರು: ಸರ್ಕಾರಿ ನೌಕರರು ಕೆಲಸ ನಿರ್ವಹಿಸಿದ ಸ್ಥಳದಲ್ಲಿ ಹಾಗೂ ಸ್ಥಳೀಯರಲ್ಲಿ ಶಾಶ್ವತವಾಗಿ ನಮ್ಮ ನೆನಪು ಉಳಿಯುವಂತಾದಾಗ ಮಾತ್ರ ನಾವು ಮಾಡಿದ ಸೇವೆೆ ಸಾರ್ಥಕವಾಗುತ್ತದೆ ಎಂದು ತಹಸೀಲ್ದಾರ್ ಎಂ.ಮಮತಾ ಹೇಳಿದರು.


    ತಾಲೂಕು ಕಚೇರಿ ಆಹಾರ ಶಾಖೆಯಲ್ಲಿ ಶಿರಸ್ತೇದಾರರಾಗಿ ಕಾರ್ಯನಿರ್ವಹಿಸಿ ನಿವೃತ್ತರಾದ ಮಂಜುನಾಥ್ ಹಾಗೂ ನೌಕರ ಕೋದಂಡ ರಾಮಶೆಟ್ಟಿ ಅವರನ್ನು ಶನಿವಾರ ಸನ್ಮಾನಿಸಿ ಮಾತನಾಡಿ, ತಾಲೂಕು ಮಟ್ಟದ ಅಧಿಕಾರಿಗಳು ಹಲವು ಒತ್ತಡಗಳ ನಡುವೆ ಕಾರ್ಯನಿರ್ವಹಿಸಬೇಕಾಗಿದೆ. ಅಲ್ಲದೆ, ಸರ್ಕಾರದ ವಿವಿಧ ಯೋಜನೆಗಳನ್ನು ಅನುಷ್ಠಾನಗೊಳಿಸುವುದು, ಸಮರ್ಪಕ ನಿರ್ವಹಣೆ, ಸಿಬ್ಬಂದಿ ಕೊರತೆ ನಡುವೆಯೇ ಸಹಕಾರದೊಂದಿಗೆ ಕಾರ್ಯರೂಪಕ್ಕೆ ತಂದಾಗ ಮಾತ್ರ ಯೋಜನೆಗಳು ಜನರಿಗೆ ತಲುಪುತ್ತದೆ ಎಂದು ತಿಳಿಸಿದರು.


    ಸನ್ಮಾನ ಸ್ವೀಕರಿಸಿ ಆಹಾರ ಶಾಖೆಯ ಶಿರಸ್ತೇದಾರ್ ಮಂಜುನಾಥ್ ಮಾತನಾಡಿದರು. ಉಪ ತಹಸೀಲ್ದಾರ್ ಪ್ರದೀಪ್, ದೊರೆ, ಮಹೇಂದ್ರ, ಶಿರಸ್ತೇದಾರ್ ರಂಗಸ್ವಾಮಿ, ಕಂದಾಯಾಧಿಕಾರಿ ದಯಾನಂದ್, ಪ್ರಕಾಶ್, ಗುರುಮೂರ್ತಿ, ಲತೇಶ್ ಕುಮಾರ್, ಚಂದ್ರೇಗೌಡ, ಸಿಬ್ಬಂದಿ ಪುರುಷೋತ್ತಮ್, ರಮೇಶ್ ಇತರರು ಇದ್ದರು.

    ಸಿನಿಮಾ

    ಲೈಫ್‌ಸ್ಟೈಲ್

    ಟೆಕ್ನಾಲಜಿ

    Latest Posts