ನವದೆಹಲಿ: ಟೀಮ್ ಇಂಡಿಯಾ ಸತತ ಗೆಲುವಿನೊಂದಿಗೆ ಟಿ20 ವಿಶ್ವಕಪ್ ಮೆಗಾಟೂರ್ನಿಯಲ್ಲಿ ಸೆಮಿಫೈನಲ್ ಲಗ್ಗೆಯಿಟ್ಟಿದೆ. ಸೋಮವಾರ (ಜೂನ್ 24) ಆಸ್ಟ್ರೇಲಿಯಾ ವಿರುದ್ಧ ವೆಸ್ಟ್ಇಂಡೀಸ್ನ ಸೇಂಟ್ ಲೂಸಿಯಾದಲ್ಲಿ ನಡೆದ ಸೂಪರ್ 8ರ ಪಂದ್ಯದಲ್ಲಿ 24 ರನ್ಗಳಿಂದ ಭರ್ಜರಿ ಜಯಗಳಿಸಿತು. ನಾಯಕ ರೋಹಿತ್ ಶರ್ಮ 92 ರನ್ ಗಳಿಸಿ ಅದ್ಭುತ ಇನ್ನಿಂಗ್ಸ್ ಆಡಿದ್ದರು. ಆದರೆ, ಕ್ರಿಕೆಟ್ ದಂತಕತೆ ಸಚಿನ್ ತೆಂಡೂಲ್ಕರ್ ಪ್ರಕಾರ ಈ ಗೆಲುವಿನಲ್ಲಿ ಪ್ರಮುಖ ಪಾತ್ರ ವಹಿಸಿದ್ದು, ರೋಹಿತ್ ಶರ್ಮ ಅಲ್ಲವಂತೆ! ಟೀಮ್ ಇಂಡಿಯಾ ಗೆಲ್ಲಲು ಈ ಇಬ್ಬರು ಆಟಗಾರರು ಕಾರಣ ಎಂದು ಸಚಿನ್ ಟ್ವೀಟ್ ಮಾಡಿದ್ದು, ಭಾರಿ ಚರ್ಚೆಗೆ ಕಾರಣವಾಗಿದೆ.
ಆಸ್ಟ್ರೇಲಿಯಾ ವಿರುದ್ಧ ಟೀಮ್ ಇಂಡಿಯಾ 24 ರನ್ಗಳಿಂದ ಗೆದ್ದು ಸೆಮಿಫೈನಲ್ ಪ್ರವೇಶಿಸಿದೆ. ಸೆಮಿಫೈನಲ್ನಲ್ಲಿ ಭಾರತ ಬಲಿಷ್ಠ ಇಂಗ್ಲೆಂಡ್ ತಂಡವನ್ನು ಎದುರಿಸಲಿದೆ. ಆಸಿಸ್ ವಿರುದ್ಧ ಅದ್ಭುತ ಇನ್ನಿಂಗ್ಸ್ ಆಡಿದ ನಾಯಕ ರೋಹಿತ್ ಶರ್ಮ ಆಸ್ಟ್ರೇಲಿಯಾ ವಿರುದ್ಧದ ಗೆಲ್ಲುವಲ್ಲಿ ಪ್ರಮುಖ ಪಾತ್ರ ವಹಿಸಿದ್ದಾರೆ ಎಂದು ಎಲ್ಲರೂ ಹೇಳುತ್ತಾರೆ. ಆದರೆ ದಿಗ್ಗಜ ಬ್ಯಾಟ್ಸ್ಮನ್, ಮಾಸ್ಟರ್ ಬ್ಲಾಸ್ಟರ್ ಸಚಿನ್ ಈ ವಿಚಾರದಲ್ಲಿ ಸ್ವಲ್ಪ ವಿಭಿನ್ನವಾಗಿ ಪ್ರತಿಕ್ರಿಯಿಸಿದ್ದಾರೆ. ಈ ಪಂದ್ಯದ ಬಗ್ಗೆ ಎಕ್ಸ್ ವೇದಿಕೆಯಲ್ಲಿ ತಮ್ಮ ಅಭಿಪ್ರಾಯ ವ್ಯಕ್ತಪಡಿಸಿದ್ದಾರೆ.
ಅದ್ಭುತ ಗೆಲುವಿಗಾಗಿ ಟೀಮ್ ಇಂಡಿಯಾಕ್ಕೆ ಮೊದಲು ಅಭಿನಂದನೆಗಳು. ಆಸ್ಟ್ರೇಲಿಯಾ ವಿರುದ್ಧದ ಪಂದ್ಯದಲ್ಲಿ ಟೀಮ್ ಇಂಡಿಯಾ ಗೆಲುವಿಗೆ ಎರಡು ಕ್ಷಣಗಳು ಕಾರಣವಾಗಿತ್ತು. ಅದರಲ್ಲಿ ಒಂದು ಬೌಂಡರಿ ಗೆರೆ ಬಳಿ ಅಕ್ಷರ್ ಪಟೇಲ್ ಹಿಡಿದ ಅದ್ಭುತ ಕ್ಯಾಚ್. ಮತ್ತೊಂದು ಜಸ್ಪ್ರೀತ್ ಬುಮ್ರಾ ಅವರು ಟ್ರಾವಿಸ್ನ ಹೆಡ್ ಅನ್ನು ಔಟ್ ಮಾಡಿದ್ದು. ಸೆಮಿಫೈನಲ್ಗೆ ಕಾಯಲು ಆಗುತ್ತಿಲ್ಲ ಎಂದು ಎಕ್ಸ್ ಖಾತೆಯಲ್ಲಿ ಸಚಿನ್ ಬರೆದುಕೊಂಡಿದ್ದಾರೆ. ಆದರೆ, ಈ ಟ್ವೀಟ್ನಲ್ಲಿ ಅದ್ಭುತ ಆಟವಾಡಿದ ರೋಹಿತ್ ಹೆಸರನ್ನು ಉಲ್ಲೇಖಿಸಿಲ್ಲ ಎಂಬುದು ಗಮನಾರ್ಹ.
ಟ್ರಾವಿಸ್ ಹೆಡ್-ಮಿಚೆಲ್ ಮಾರ್ಷ್ 48 ಎಸೆತಗಳಲ್ಲಿ 81 ರನ್ ಜೊತೆಯಾಟ ನಡೆಸಿ ಪಂದ್ಯದ ಮೇಲೆ ಒಂದು ಹಂತದಲ್ಲಿ ಹಿಡಿತ ಸಾಧಿಸಿದ್ದರು. ಹೀಗಿರುವಾಗ ಕುಲದೀಪ್ ಯಾದವ್ ಬೌಲಿಂಗ್ನಲ್ಲಿ ಮಿಚೆಲ್ ಮಾರ್ಷ್ (37) ಬೃಹತ್ ಹೊಡೆತಕ್ಕೆ ಯತ್ನಿಸಿದರು. ಚೆಂಡು ಸಿಕ್ಸರ್ಗೆ ಹೋಗುತ್ತದೆ ಎಂದು ಎಲ್ಲರೂ ಭಾವಿಸಿದ್ದರು. ಆದರೆ, ಬೌಂಡರಿ ಗೆರೆ ಬಳಿ ಫೀಲ್ಡಿಂಗ್ ಮಾಡುತ್ತಿದ್ದ ಅಕ್ಷರ್ ಪಟೇಲ್ ಗಾಳಿಯಲ್ಲಿ ಹಾರಿ ಅದ್ಭುತ ಕ್ಯಾಚ್ ಹಿಡಿದರು. ಇತ್ತ ಅಪಾಯಕಾರಿಯಾಗುತ್ತಿದ್ದ ಟ್ರಾವಿಸ್ ಹೆಡ್ (76) ಅವರನ್ನು ಬುಮ್ರಾ ಔಟ್ ಮಾಡಿದರು. ಈ ಎರಡು ಘಟನೆಗಳು ಪಂದ್ಯವನ್ನು ಟೀಮ್ ಇಂಡಿಯಾದತ್ತ ವಿಜಯಲಕ್ಷ್ಮಿಯನ್ನು ತಿರುಗಿಸಿದವು.
Well done, India! Two crucial moments defined our victory today: @akshar2026's brilliant catch at the boundary and @Jaspritbumrah93's wicket of Travis Head. Can't wait for the semi-finals! #AUSvIND #T20WorldCup pic.twitter.com/wHKSxY682A
— Sachin Tendulkar (@sachin_rt) June 24, 2024
ಅಂದಹಾಗೆ ಟೀಮ್ ಇಂಡಿಯಾದ ಯಶಸ್ಸಿಗೆ ಬುಮ್ರಾ ಮತ್ತು ಅಕ್ಷರ್ ಪಟೇಲ್ ಕಾರಣ ಎಂಬ ಸಚಿನ್ ಅವರ ಕಾಮೆಂಟ್ಗಳ ಕುರಿತು ನಿಮ್ಮ ಅಭಿಪ್ರಾಯಗಳನ್ನು ಕಾಮೆಂಟ್ಗಳ ರೂಪದಲ್ಲಿ ನಮ್ಮೊಂದಿಗೆ ಹಂಚಿಕೊಳ್ಳಿ. (ಏಜೆನ್ಸೀಸ್)
11ನೇ ವಯಸ್ಸಿನಲ್ಲೇ ಎಮ್ಮೆ ಹಾಲು ಮಾರಾಟ! ಕೋಟಿಗಳ ಸಾಮ್ರಾಜ್ಯ ಕಟ್ಟಿದ ಯುವತಿಯ ಯಶೋಗಾಥೆ ಇದು…
ಸೆಮಿಸ್ಗೂ ಮುನ್ನ ಇಂಗ್ಲೆಂಡ್ ತಂಡಕ್ಕೆ ಖಡಕ್ ಎಚ್ಚರಿಕೆ ಸಂದೇಶ ರವಾನಿಸಿದ ಹಾರ್ದಿಕ್ ಪಾಂಡ್ಯ!