More

    ಬ್ಯಾಂಕಿನ ಅಭಿವೃದ್ಧಿಗೆ ಬುನಾದಿ ಹಾಕಿದವರು – ಜಗನ್ನಾಥ ಸಾಲಿಯಾನ್ ಬಣ್ಣನೆ – ಎಲ್. ಎನ್. ಕುಡೂರುಗೆ ಶ್ರದ್ಧಾಂಜಲಿ

    ವಿಟ್ಲ: ಬ್ಯಾಂಕಿನ ಸರ್ವತೋಮುಖ ಅಭಿವೃದ್ಧಿಗೆ ಭದ್ರ ಬುನಾದಿ ಹಾಕಿಕೊಟ್ಟಿರುವ ಮಾಜಿ ಅಧ್ಯಕ್ಷ ಎಲ್.ಎನ್. ಕೂಡೂರು ಸಂಸ್ಥೆಯ ಎಲ್ಲ ಸಿಬ್ಬಂದಿಯನ್ನು ತಮ್ಮ ಕುಟುಂಬದ ಸದಸ್ಯರಂತೆ ಪ್ರೀತಿ, ವಿಶ್ವಾಸ, ಮಮತೆಯಿಂದ ನೋಡಿಕೊಂಡು ಸಿಬ್ಬಂದಿಯ ಎಲ್ಲ ಸಮಸ್ಯೆಗಳಿಗೆ ಸ್ಪಂದಿಸುತ್ತಿದ್ದರು. ಅವರ ಅಗಲಿಕೆ ಸಹಕಾರಿ, ಶಿಕ್ಷಣ ಹಾಗೂ ಧಾರ್ಮಿಕ ಕ್ಷೇತ್ರಕ್ಕೆ ತುಂಬಲಾರದ ನಷ್ಟ ಎಂದು ವಿಟ್ಲ ಗ್ರಾಮೀಣ ಸಹಕಾರಿ ಬ್ಯಾಂಕ್ ಅಧ್ಯಕ್ಷ ಜಗನ್ನಾಥ ಸಾಲಿಯಾನ್ ಹೇಳಿದರು.


    ಭಾನುವಾರ ನಿಧನರಾದ ಬ್ಯಾಂಕಿನ ಮಾಜಿ ಅಧ್ಯಕ್ಷ ಎಲ್. ಎನ್. ಕುಡೂರು ಅವರಿಗೆ ವಿಟ್ಲ ಗ್ರಾಮೀಣ ಸಹಕಾರಿ ಬ್ಯಾಂಕ್ ಪ್ರಧಾನ ಕಚೇರಿಯಲ್ಲಿ ಸೋಮವಾರ ನಡೆದ ನುಡಿನಮನ ಕಾರ್ಯಕ್ರಮದಲ್ಲಿ ಮಾತನಾಡಿದರು.


    ಕಠಿಣ ಪರಿಸ್ಥಿತಿಯಲ್ಲೂ ಸಮಸ್ಯೆಗಳನ್ನು ಅತ್ಯಂತ ನಿರಾಯಾಸವಾಗಿ ಬಗೆಹರಿಸುವ ಎದೆಗಾರಿಕೆ ಮತ್ತು ಜಾಣ್ಮೆಯನ್ನು ಹೊಂದಿದ ವ್ಯಕ್ತಿತ್ವ ಅವರದ್ದಾಗಿತ್ತು. ಇವರು ನಮ್ಮ ಬ್ಯಾಂಕಿನ ಶ್ರೇಯೋಭಿವೃದ್ಧಿಗೆ ನೀಡಿದ ಕೊಡುಗೆ ಅಪಾರ. ಬ್ಯಾಂಕಿನಲ್ಲಿ ೨೦೦೬ರಿಂದ ನಿರ್ದೇಶಕರಾಗಿ ಹಾಗೂ ೨೦೧೦ ಏ.೧ರಿಂದ ೨೦೨೦ ಮಾ.೮ರವರೆಗೆ ಅಧ್ಯಕ್ಷರಾಗಿ ನಿಸ್ವಾರ್ಥ ಸೇವೆ ಸಲ್ಲಿಸಿದ್ದಾರೆ ಎಂದು ತಿಳಿಸಿದರು.


    ವಿಟ್ಲ ಗ್ರಾಮೀಣ ಸಹಕಾರಿ ಬ್ಯಾಂಕ್ ಎಲ್ಲ ಶಾಖೆಗಳಲ್ಲಿ ಎಲ್.ಎನ್. ಕೂಡೂರು ಭಾವಚಿತ್ರಕ್ಕೆ ಪುಷ್ಪಾರ್ಚನೆ ಸಲ್ಲಿಸಿ ನುಡಿ ನಮನ ಸಲ್ಲಿಸಲಾಯಿತು. ಉಪಾಧ್ಯಕ್ಷ ಮೋಹನ್ ಕೆ.ಎಸ್., ನಿರ್ದೇಶಕರಾದ ಎಂ. ಹರೀಶ್ ನಾಯಕ್, ಮನೋರಂಜನ್ ಕೆ. ಆರ್., ವಿಶ್ವನಾಥ್ ಎಂ, ಕೃಷ್ಣ ಕೆ., ಉದಯಕುಮಾರ್ ಎ., ಬಾಲಕೃಷ್ಣ ಪಿ.ಎಸ್., ದಿವಾಕರ ವಿ., ದಯಾನಂದ ಆಳ್ವ ಕೆ., ಸುಂದರ ಡಿ., ಗೋವರ್ಧನ ಕುಮಾರ್ ಐ., ಶುಭಲಕ್ಷ್ಮೀ, ಜಯಂತಿ ಎಚ್. ರಾವ್, ಮುಖ್ಯಕಾರ್ಯನಿರ್ವಾಹಣಾಽಕಾರಿ ಕೃಷ್ಣಮುರಳಿ ಶ್ಯಾಮ್ ಕೆ. ಉಪಸ್ಥಿತರಿದ್ದರು.

    ಸಿನಿಮಾ

    ಲೈಫ್‌ಸ್ಟೈಲ್

    ಟೆಕ್ನಾಲಜಿ

    Latest Posts