ನವದೆಹಲಿ: ಆಸ್ಟ್ರೇಲಿಯಾ ವಿರುದ್ಧ 2023ರ ಏಕದಿನ ವಿಶ್ವಕಪ್ ಫೈನಲ್ನಲ್ಲಿನ ಸೋಲಿಗೆ ಟೀಮ್ ಇಂಡಿಯಾ ಸೇಡು ತೀರಿಸಿಕೊಂಡಿದೆ. ನಿನ್ನೆ (ಜೂನ್ 24) ನಡೆದ ಟಿ20 ವಿಶ್ವಕಪ್ ಟೂರ್ನಿಯ ಸೂಪರ್ 8 ಪಂದ್ಯದಲ್ಲಿ ಆಸಿಸ್ ವಿರುದ್ಧ ಭಾರತ 24 ರನ್ಗಳ ಅಂತರದಿಂದ ಗೆಲುವು ಸಾಧಿಸಿತು. ಸೋತು ಸುಣ್ಣವಾಗಿರುವ ಆಸೀಸ್, ಸೆಮಿಸ್ ಅವಕಾಶಕ್ಕಾಗಿ ಬಾಂಗ್ಲಾದೇಶ-ಅಫ್ಘಾನ್ ಪಂದ್ಯದ ಮೇಲೆ ಅವಲಂಬಿತವಾಗಿದೆ.
ನಿನ್ನೆ ಆಸಿಸ್ ಪಡೆಯನ್ನು ರೋಹಿತ್ ಶರ್ಮ ಅಕ್ಷರಶಃ ಕಾಡಿದರು. ಬೌಂಡರಿ ಹಾಗೂ ಸಿಕ್ಸರ್ ಸುರಿಮಳೆ ಮೂಲಕ ಆಸಿಸ್ ಬೌಲರ್ಗಳಿಗೆ ಬೆವರಿಳಿಸಿದರು. ಒಂದೇ ಪಂದ್ಯದಲ್ಲಿ 6 ದಾಖಲೆಗಳನ್ನು ತಮ್ಮ ಹೆಸರಿಗೆ ಬರೆಯುವ ಮೂಲಕ ಹಿಟ್ಮ್ಯಾನ್ ಅಂದ್ರೆ ಏನು ಎಂಬುದನ್ನು ಸಾಬೀತು ಮಾಡಿದರು. ಇನ್ನು ಪಂದ್ಯದ ಬಳಿಕ ಮಾತನಾಡಿದ ರೋಹಿತ್ ಶರ್ಮ, ಅನಿರೀಕ್ಷಿತ ಕಾಮೆಂಟ್ ಮಾಡಿದ್ದಾರೆ. ಅದೇನೆಂದು ನಾವೀಗ ತಿಳಿಯೋಣ.
ನಿರ್ಣಾಯಕ ಪಂದ್ಯದಲ್ಲಿ ಟೀಮ್ ಇಂಡಿಯಾ ನಾಯಕ ರೋಹಿತ್ ಶರ್ಮ ಅತ್ಯದ್ಭುತ ಫಾರ್ಮ್ಗೆ ಮರಳಿದರು. ಆಸಿಸ್ ವಿರುದ್ಧದ ಕೊನೆಯ ಸೂಪರ್ 8 ಪಂದ್ಯದಲ್ಲಿ ಭಾರತ 24 ರನ್ಗಳ ಜಯ ಸಾಧಿಸಿತು. ಈ ಪಂದ್ಯದಲ್ಲಿ ಮೊದಲು ಬ್ಯಾಟ್ ಮಾಡಿದ ಭಾರತ 20 ಓವರ್ಗಳಲ್ಲಿ 5 ವಿಕೆಟ್ ನಷ್ಟಕ್ಕೆ 205 ರನ್ಗಳ ಬೃಹತ್ ಮೊತ್ತ ಕಲೆಹಾಕಿತು. ರೋಹಿತ್ 41 ಎಸೆತಗಳಲ್ಲಿ 7 ಬೌಂಡರಿ ಹಾಗೂ 8 ಸಿಕ್ಸರ್ ನೆರವಿನಿಂದ 92 ರನ್ ಗಳಿಸಿ ಶತಕ ವಂಚಿತರಾದರು. ಬಳಿಕ ಟೀಮ್ ಇಂಡಿಯಾ ನೀಡಿದ 206 ರನ್ಗಳ ಬೃಹತ್ ಗುರಿಯನ್ನು ಮುರಿಯನ್ನು ಬೆನ್ನತ್ತ ಆಸಿಸ್ ಪಡೆ 7 ವಿಕೆಟ್ ಕಳೆದುಕೊಂಡು 181 ರನ್ ಗಳಿಸಿತು.
ಪಂದ್ಯದ ಬಳಿಕ ಮಾತನಾಡಿದ ರೋಹಿತ್ ಶರ್ಮ, ನನಗೆ ಮೊದಲಿನಿಂದಲೂ ಹೀಗೆಯೇ ಆಡಿ ಅಭ್ಯಾಸ. ನಾನು ಮೊದಲೇ ಹೇಳಿದ್ದೆ, ಆಕ್ರಮಣಕಾರಿಯಾಗಿ ಆಡಿ ಬೌಲರ್ಗಳ ಮೇಲೆ ಒತ್ತಡ ಹೇರಬೇಕು. ಆಗ ಅವರು ರಕ್ಷಣಾತ್ಮಕ ಮನೋಭಾವವನ್ನು ಹೊಂದುತ್ತಾರೆ. ಅದನ್ನೇ ನಾನು ಎಲ್ಲ ಪಂದ್ಯಗಳಲ್ಲಿ ಅನ್ವಯಿಸಲು ಬಯಸುತ್ತೇನೆ. ಆದರೆ, ಈ ಕ್ರಮದಲ್ಲಿ ನಾನು ಶತಕದ ಬಗ್ಗೆ ಯೋಚಿಸುವುದಿಲ್ಲ. ಆದರೆ ನನಗೆ ತಂಡದ ಯಶಸ್ಸು ತುಂಬಾ ಮುಖ್ಯ ಎಂದು ರೋಹಿತ್ ಹೇಳಿದರು. 90 ರನ್ ಗಳಿಸಿದ ನಂತರ ಕೆಲವರು ಶತಕವನ್ನು ನೋಡುತ್ತಾರೆ. ಆದರೆ, ನಾನು ಅಂತಹ ವ್ಯಕ್ತಿಯಲ್ಲ ಎಂದು ರೋಹಿತ್ ಹೇಳಿದರು.
ಸದ್ಯ ರೋಹಿತ್ ಆಡಿದ ಮಾತುಗಳು ವೈರಲ್ ಆಗಿದ್ದು, ಕ್ರೀಡಾಭಿಮಾನಿಗಳಿಂದ ಮೆಚ್ಚುಗೆಯ ಮಹಾಪೂರವೇ ಹರಿದುಬರುತ್ತಿದೆ. ರೋಹಿತ್ ಓರ್ವ ನಿಸ್ವಾರ್ಥ ಆಟಗಾರ ಎಂದು ಕೊಂಡಾಡುತ್ತಿದ್ದಾರೆ. (ಏಜೆನ್ಸೀಸ್)
ನಿಜ ಹೇಳ್ತೀನಿ 2 ಬಾರಿ ಅನುಷ್ಕಾ ಶರ್ಮಾರನ್ನು… ಮದ್ವೆ ಬಳಿಕ ಸ್ಫೋಟಕ ಸತ್ಯ ಬಿಚ್ಚಿಟ್ಟ ವಿಜಯ್ ಮಲ್ಯ ಪುತ್ರ!
ಅದರ ಮೇಲೆಯೇ ಕಣ್ಣು… ಬಟ್ಟೆ ಬಿಚ್ಚಿದ್ದನ್ನು ಟ್ರೋಲ್ ಮಾಡಿದವರಿಗೆ ಖಡಕ್ ಉತ್ತರ ಕೊಟ್ಟ ಅನಸೂಯಾ!