ವಿಹಾರಕ್ಕೆಂದು ಬಂದಾತ ಸಮುದ್ರಪಾಲು: ಸ್ಥಳೀಯರಿಂದ ಓರ್ವನ ರಕ್ಷಣೆ ; ಪತ್ತೆಗೆ ಕಾರ್ಯಾಚರಣೆ

ಕೋಟ: ಕುಂದಾಪುರ ತಾಲೂಕಿನ ಬೀಜಾಡಿ ಬೀಚ್‌ಗೆ ಸ್ನೇಹಿತನ ಜತೆ ವಿಹಾರಕ್ಕೆಂದು ಬಂದಿದ್ದ ತುಮಕೂರು ಜಿಲ್ಲೆ ತಿಪಟೂರಿನ ಯೋಗೀಶ್(23) ಎಂಬುವರು ಸಮುದ್ರಪಾಲಾಗಿದ್ದಾರೆ. ಅವರೊಂದಿಗೆ ಬಂದಿದ್ದ ಅದೇ ಜಿಲ್ಲೆಯ ಸಂದೀಪ್(24) ಎಂಬುವರನ್ನು ಸ್ಥಳೀಯರು ರಕ್ಷಿಸಿದ್ದಾರೆ. ಯೋಗೀಶ್ ಹಾಗೂ ಸಂದೀಪ್ ಸ್ನೇಹಿತ ಬೀಜಾಡಿಯ ವಿನಯ್ ಅವರ ಅಕ್ಕನ ಮದುವೆಗೆಂದು ಬುಧವಾರ ಬಂದಿದ್ದರು. ಸಂಜೆ ವೇಳೆ ಬೀಜಾಡಿ ಬೀಚ್‌ಗೆ ವಿಹಾರಕ್ಕೆಂದು ತೆರಳಿದ್ದರು. ಈ ವೇಳೆ ಯೋಗೀಶ್ ನೀರಿಗಿಳಿದಿದ್ದಾರೆ. ಸಂಜೆ ಮಳೆ ಇದ್ದುದಲ್ಲದೆ, ಕಡಲ ಅಲೆಗಳ ಅಬ್ಬರ, ಗಾಳಿಯ ವೇಗವೂ ತುಸು ಜೋರಾಗಿಯೇ ಇತ್ತು. … Continue reading ವಿಹಾರಕ್ಕೆಂದು ಬಂದಾತ ಸಮುದ್ರಪಾಲು: ಸ್ಥಳೀಯರಿಂದ ಓರ್ವನ ರಕ್ಷಣೆ ; ಪತ್ತೆಗೆ ಕಾರ್ಯಾಚರಣೆ