More

    ಮರ್ದಾಳ ಜಂಕ್ಷನ್‌ನಲ್ಲಿ ಹಂಪ್ಸ್ : ಲೋಕೋಪಯೋಗಿ ಇಲಾಖೆ ಇಂಜಿನಿಯರ್‌ಗೆ ಮನವಿ

    ಕಡಬ: ಧರ್ಮಸ್ಥಳ-ಸುಬ್ರಹ್ಮಣ್ಯ ಮತ್ತು ಕಡಬ-ಉಪ್ಪಿನಂಗಡಿ ರಾಜ್ಯ ರಸ್ತೆಯ ಪ್ರಮುಖ ಎರಡು ಹೆದ್ದಾರಿಗಳ ಸಂಪರ್ಕಕೊಂಡಿಯಾಗಿರುವ ಮರ್ದಾಳ ಜಂಕ್ಷನ್‌ನಲ್ಲಿ ಹಂಪ್ಸ್ ಅಳವಡಿಸುವಂತೆ ಲೋಕೋಪಯೋಗಿ ಇಲಾಖೆಗೆ ಸ್ಥಳಿಯ ಮುಖಂಡರಿಂದ ಮನವಿ ನೀಡಲಾಯಿತು.

    ಇತ್ತೀಚೆಗೆ ಈ ಸ್ಥಳದಲ್ಲಿ ಹಲವು ಅಪಘಾತಗಳು ನಡೆದಿದ್ದವು. ಜೀವಹಾನಿಯೂ ಸಂಭವಿಸಿತ್ತು. ಅಲ್ಲದೆ ಗ್ರಾ.ಪಂ ಸೇರಿದಂತೆ ಶಾಲೆಗಳು, ಮಸೀದಿ ಮಂದಿರಗಳು ಪೇಟೆಯ ಬದಿಗಳಲ್ಲಿಯೇ ಇದ್ದು ರಸ್ತೆ ದಾಟುವವರ ಸಂಖ್ಯೆ ಅಧಿಕವಾಗಿದೆ. ಹಾಗಾಗಿ ಹಂಪ್ಸ್ ನಿರ್ಮಿಸಬೇಕೆಂಬ ಸ್ಥಳಿಯರ ಬೇಡಿಕೆ ಅನ್ವಯ ಲೋಕೋಪಯೋಗಿ ಇಲಾಖೆ ಸಹಾಯಕ ಇಂಜಿನಿಯರ್ ಕನಿಷ್ಕ ಎಸ್. ಸ್ಥಳ ಪರಿಶೀಲನೆ ನಡೆಸಿದರು.

    ಸ್ಥಳ ಪರಿಶೀಲನೆ ಬಳಿಕ, ಎರಡು ವಾರದೊಳಗೆ ಹೆದ್ದಾರಿಯ ಎರಡೂ ಕಡೆಗಳಲ್ಲಿ ಹಂಪ್ಸ್ ಹಾಕಲಾಗುವುದು. ಅದಕ್ಕಿಂತ ಮೊದಲು ಸೂಚನಾ ಫಲಕ ಸಿದ್ಧಪಡಿಸಿ ನಂತರ ಕಾಮಗಾರಿ ನಡೆಸಲಾಗುವುದು ಎಂದರು.

    ಈ ಬಗ್ಗೆ ಬಂಟ್ರ ಗ್ರಾ.ಪಂ ಕೂಡ ಮನವಿ ನೀಡಿದೆ. ಗ್ರಾ.ಪಂ ಉಪಾಧ್ಯಕ್ಷ ಗಂಗಾಧರ ರೈ ಬಸವಪಾಲು, ಗ್ರಾ.ಪಂ ಸದಸ್ಯ ಹರೀಶ್ ಕೊಡಂದೂರು, ಎಪಿಎಂಸಿ ಮಾಜಿ ಸದಸ್ಯ ಮೇದಪ್ಪ ಗೌಡ ಡೆಪ್ಪುಣಿ, ಸಾಮಾಜಿಕ ಕಾರ್ಯಕರ್ತ ದೇವಿಪ್ರಸಾದ್ ಬಿ.ಮರ್ದಾಳ ಮೊದಲಾದವರು ಇದ್ದರು.

    ಸಿನಿಮಾ

    ಲೈಫ್‌ಸ್ಟೈಲ್

    ಟೆಕ್ನಾಲಜಿ

    Latest Posts