More

    ನಾಯಕತ್ವ ಗುಣ ಬೆಳೆಯಲು ಸಹಕಾರಿ : ಸಬಾಸ್ಟಿಯನ್ ಪುನ್ನತಾನತ್ತಾ ಹೇಳಿಕೆ

    ಬೆಳ್ತಂಗಡಿ: ಪುದುವೆಟ್ಟು ಶ್ರೀ ಧರ್ಮಸ್ಥಳ ಮಂಜುನಾಥೇಶ್ವರ ಅನುದಾನಿತ ಹಿರಿಯ ಪ್ರಾಥಮಿಕ ಶಾಲೆಯಲ್ಲಿ ವಿದ್ಯಾರ್ಥಿ ಸರ್ಕಾರದ ಪ್ರತಿಜ್ಞಾವಿಧಿ ಸ್ವೀಕಾರ ಕಾರ್ಯಕ್ರಮ ನಡೆಯಿತು.

    ಮುಖ್ಯಶಿಕ್ಷಕ ಶೀನಪ್ಪಗೌಡ ಅಧ್ಯಕ್ಷತೆ ವಹಿಸಿದ್ದರು. ಧರ್ಮಗುರು ಸಬಾಸ್ಟಿಯನ್ ಪುನ್ನತಾನತ್ತಾ ಮಾತನಾಡಿ, ಶಾಲೆಯಲ್ಲಿ ಒಂದು ಸರ್ಕಾರ ರಚನೆ ಮಾಡಿ ಮಕ್ಕಳಿಗೆ ಜವಾಬ್ದಾರಿ ಹಂಚುವುದು ಬಹಳಷ್ಟು ಸಂತೋಷವಾಗಿದೆ. ಈ ಸಂದರ್ಭದಲ್ಲಿ ತಮ್ಮ ಬಾಲ್ಯದ ನೆನಪುಗಳನ್ನು ವಿದ್ಯಾರ್ಥಿಗಳಲ್ಲಿ ಹಂಚಿಕೊಂಡರು. ಶಾಲೆಯಿಂದ ಎಲ್ಲ ಶಿಕ್ಷಣ ದೊರೆಯಬೇಕು ಶಾಲಾ ಚುನಾವಣೆಯು ವಿದ್ಯಾರ್ಥಿಗಳ ನಾಯಕತ್ವ ಗುಣ ಬೆಳೆಸಲು ಸಹಕಾರಿಯಾಗಿದೆ ಎಂದರು.

    ಶೀನಪ್ಪ ಗೌಡ ಅಧ್ಯಕ್ಷತೆ ವಹಿಸಿ ಮಾತನಾಡಿ, ಈ ವರ್ಷ ವಿದ್ಯಾರ್ಥಿಗಳಿಗೆ ಚುನಾವಣೆಯ ಕಲ್ಪನೆ ಮೂಡಿಸಿ, ಶಾಲೆಯಲ್ಲಿ ವಿದ್ಯಾರ್ಥಿಗಳಿಗೆ ಹಲವು ಜವಾಬ್ದಾರಿಗಳನ್ನು ಹಂಚಲಾಗಿದೆ. ಇದರಿಂದ ಮಕ್ಕಳಿಗೆ ಶಾಲಾ ದಿನಗಳಲ್ಲಿ ಉತ್ತಮ ಜವಾಬ್ದಾರಿ ಬರುತ್ತದೆ ಎಂದರು.

    ಶಿಕ್ಷಕ ಶ್ರೀನಿಶಾಂತ್ ಕುಮಾರ್ ಅವರು ಶಾಲಾ ಮಂತ್ರಿಮಂಡಲ ಜವಾಬ್ದಾರಿಗಳನ್ನು ತಿಳಿಸಿದರು. ಹಿರಿಯ ಶಿಕ್ಷಕಿ ತೇಜಾವತಿ ಸ್ವಾಗತಿಸಿ, ಶಿಕ್ಷಕ ಪವನ್ ಕುಮಾರ್ ವಂದಿಸಿದರು. ಶಿಕ್ಷಕಿ ಪುಷ್ಪಲತಾ ನಿರೂಪಿಸಿದರು.

    ಸಿನಿಮಾ

    ಲೈಫ್‌ಸ್ಟೈಲ್

    ಟೆಕ್ನಾಲಜಿ

    Latest Posts