More

    ಮನುಷ್ಯ ಕುಲ ನಾಶಗೊಳಿಸುವ ವಿಷ: ಪಿಎಸ್‌ಐ ಸಮರ್ಥ ಆರ್.ಗಾಣಿಗೇರ ಬಣ್ಣನೆ

    ಕೊಕ್ಕಡ: ಮಾದಕ ವಸ್ತು ಮನುಷ್ಯ ಕುಲವನ್ನು ಹಂತ-ಹಂತವಾಗಿ ನಾಶಗೊಳಿಸುವ ಒಂದು ವಿಷ. ಒಮ್ಮೆ ಇದರ ಸೆಳೆತಕ್ಕೆ ಸಿಕ್ಕಿ ಬಿದ್ದರೆ ಹೊರ ಬರಲಾರದೆ ಜೀವನ ಹಾಳು ಮಾಡಿಕೊಂಡಂತೆ ಎಂದು ಧರ್ಮಸ್ಥಳ ಠಾಣಾ ಪಿಎಸ್‌ಐ ಸಮರ್ಥ ಆರ್.ಗಾಣಿಗೇರ ಹೇಳಿದರು.
    ಪಟ್ರಮೆ ಗ್ರಾಮದ ಪಟ್ಟೂರಿನ ಶ್ರೀರಾಮ ವಿದ್ಯಾಸಂಸ್ಥೆಯಲ್ಲಿ ಮಾದಕ ವಸ್ತುಗಳ ದುರುಪಯೋಗ ಮತ್ತು ಅಕ್ರಮ ಸಾಗಣೆ ಪರಿಣಾಮದ ಕುರಿತು ಜನಜಾಗೃತಿ ಅಭಿಯಾನ ಅಂಗವಾಗಿ ಬುಧವಾರ ವಿದ್ಯಾರ್ಥಿಗಳೊಂದಿಗೆ ಸಮಾಲೋಚಿಸಿದರು.
    ವಿದ್ಯಾಸಂಸ್ಥೆಯ ಸಂಚಾಲಕ ಪ್ರಶಾಂತ್ ಶೆಟ್ಟಿ ದೇರಾಜೆ ಮಾತನಾಡಿ, ಮಕ್ಕಳು ಸಂಸ್ಕಾರಯುತ ಶಿಕ್ಷಣ ಪಡೆದರೆ ಮಾದಕ ವ್ಯಸನಕ್ಕೆ ಬಲಿಯಾಗಲಾರರು ಎಂದು ತಿಳಿಸಿದರು.
    ಠಾಣಾ ಸಿಬ್ಬಂದಿ ಮಂಜುನಾಥ ಪಾಟೀಲ್ ಉಪಸ್ಥಿತರಿದ್ದರು. ಮಾದಕ ವ್ಯಸನಮುಕ್ತ ಸಮಾಜ ನಿರ್ಮಾಣದ ಬಗ್ಗೆ ಪ್ರತಿಜ್ಞಾ ವಿಧಿ ಬೋಧಿಸಲಾಯಿತು. ಶಿಕ್ಷಕಿ ಶುಭಲಕ್ಷ್ಮೀ ಸ್ವಾಗತಿಸಿದರು. ರೇಷ್ಮಾ ವಂದಿಸಿದರು. ಭವ್ಯ ಪಿ.ಡಿ ನಿರೂಪಿಸಿದರು.

    ಸಿನಿಮಾ

    ಲೈಫ್‌ಸ್ಟೈಲ್

    ಟೆಕ್ನಾಲಜಿ

    Latest Posts