More

    ವಿದ್ಯಾರ್ಥಿಗಳ ನಡುವೆ ಘರ್ಷಣೆ; 10ನೇ ತರಗತಿ ಬಾಲಕ ಮೃತ್ಯು!

    ಉತ್ತರಪ್ರದೇಶ: 10ನೇ ತರಗತಿಯ ವಿದ್ಯಾರ್ಥಿಗಳ ನಡುವೆ ಹೊಡೆದಾಟ ನಡೆದಿದ್ದು, ಜಗಳದಲ್ಲಿ ಬಾಲಕನೊಬ್ಬ ಮೃತಪಟ್ಟ ಘಟನೆ ಉತ್ತರಪ್ರದೇಶದ ಪ್ರಯಾಗರಾಜ್​ನಲ್ಲಿ ವರದಿಯಾಗಿದೆ.

    ಇದನ್ನೂ ಓದಿ: ನಟ ಬಾಲಯ್ಯ ಅಭಿಮಾನಿಗಳಿಗೆ ಇದು ಬೇಸರ ಸುದ್ದಿ!

    ಘಟನೆಯ ವಿವರ: ಸಂತ್ರಸ್ತ ಬಾಲಕ ಮತ್ತು ಆರೋಪಿ ವಿದ್ಯಾರ್ಥಿಗಳು ಶಾಲೆಯಲ್ಲಿ ಜಗಳವಾಡಿದ್ದಾರೆ. ಇದನ್ನು ಅರಿತ ಶಿಕ್ಷಕರು ಈ ವಿಷಯವನ್ನು ಇತ್ಯರ್ಥಪಡಿಸಿದ್ದರು. ಆದ್ರೆ, ಅಲ್ಲಿಗೆ ಮುಗಿಯದ ಕಲಹ, ಸೋಮವಾರ ಸಂಜೆ ಬಾಲಕ ತನ್ನ ತಂಗಿಯೊಂದಿಗೆ ಮನೆಗೆ ಹೋಗುವಾಗ ಆತನಿಗೆ ಥಳಿಸಿ, ಹತ್ಯೆ ಮಾಡಿದ್ದಾರೆ ಎಂದು ವರದಿ ತಿಳಿಸಿದೆ.

    ಆರೋಪಿ ವಿದ್ಯಾರ್ಥಿಗಳು ಬಾಲಕನ ಸಹೋದರಿಗೆ ಕಿರುಕುಳ ನೀಡಿದ ಕಾರಣ ಈ ಕಲಹ ಸಂಭವಿಸಿದೆ. ವಿದ್ಯಾರ್ಥಿಗಳ ಗುಂಪು ಬಾಲಕನಿಗೆ ಹಿಗ್ಗಾಮುಗ್ಗಾ ಥಳಿಸಿದ ಪರಿಣಾಮ, ಘಟನೆಯಲ್ಲಿ ಆತ ಸಾವನ್ನಪ್ಪಿದ್ದಾನೆ. ವಿಷಯ ತಿಳಿದ ಕುಟುಂಬಸ್ಥರು ರಸ್ತೆಯ ಮಧ್ಯೆ ತೀವ್ರ ಪ್ರತಿಭಟನೆ ನಡೆಸಿದ್ದಾರೆ. ತಮ್ಮ ಮಗನ ಮೃತದೇಹವನ್ನು ತಮಗೆ ಹಸ್ತಾಂತರಿಸುವಂತೆ ಒತ್ತಾಯಿಸಿದ್ದಾರೆ. ವಿದ್ಯಾರ್ಥಿಯ ಕುಟುಂಬ ಮತ್ತು ಗ್ರಾಮಸ್ಥರ ಪ್ರತಿಭಟನೆಯ ನಡುವೆ ಪೊಲೀಸರು ವಿದ್ಯಾರ್ಥಿಯ ಅಂತ್ಯಕ್ರಿಯೆಯನ್ನು ನೆರೆವೇರಿಸಿದ್ದಾರೆ.

    ಇದನ್ನೂ ಓದಿ: ಮೂತ್ರದಿಂದ ಆಗಾಗ ನೊರೆ ಬರ್ತಿದ್ಯಾ? ಇದಕ್ಕೆ ಕಾರಣವೇನು ಮತ್ತು ಯಾವ ಆರೋಗ್ಯ ಸಮಸ್ಯೆ ಸೂಚಿಸುತ್ತದೆ?

    ಘಟನೆಗೆ ತೀವ್ರ ಆಕ್ರೋಶ ಹೊರಹಾಕಿದ ಖೇರಿ ಗ್ರಾಮಸ್ಥರು, ರಸ್ತೆ ತಡೆದು ಪ್ರತಿಭಟನೆ ನಡೆಸಿದರು. ಪರಿಸ್ಥಿತಿಯನ್ನು ಶಾಂತಗೊಳಿಸುವ ಪ್ರಯತ್ನದಲ್ಲಿ ಕಮಿಷನರ್ ರಮೇಶ್ ಶರ್ಮಾ ಮತ್ತು ಡಿಎಂ ಸಂಜಯ್ ಖತ್ರಿ ಅವರು ಮೈಕ್ ಮೂಲಕ ಜನರನ್ನು ಉದ್ದೇಶಿಸಿ ಪರಿಸ್ಥಿತಿಯನ್ನು ನಿಯಂತ್ರಿಸಿದ್ದಾರೆ,(ಏಜೆನ್ಸೀಸ್).

    ನಟ ಬಾಲಯ್ಯ ಅಭಿಮಾನಿಗಳಿಗೆ ಇದು ಬೇಸರ ಸುದ್ದಿ!

    ಸಿನಿಮಾ

    ಲೈಫ್‌ಸ್ಟೈಲ್

    ಟೆಕ್ನಾಲಜಿ

    Latest Posts