ಧಾರವಾಡ: ಮೇ 7ರಂದು ಜರುಗಲಿರುವ ೨ನೇ ಹಂತದ ಲೋಕಸಭಾ ಚುನಾವಣೆಯ ಹಿನ್ನೆಲೆಯಲ್ಲಿ ಗುರುವಾರ ತಾಲೂಕಿನ ಅಮ್ಮಿನಬಾವಿ ಗ್ರಾಮದ ಪ್ರಮುಖ ರಸ್ತೆಗಳಲ್ಲಿ ಸಶಸ್ತç ಪೊಲೀಸ್ ಪಡೆಯ ಪಥಸಂಚಲನ ಜರುಗಿತು. ಶಾಂತಿಯುತ ಚುನಾವಣೆ ನಡೆಯುವುದಕ್ಕೆ ಪೂರಕವಾಗಿ ಗುಜರಾತದಿಂದ ಆಗಮಿಸಿರುವ ಸಶಸ್ತç ಮೀಸಲು ಪೊಲೀಸ್ ಪಡೆಯ ವಿಶೇಷ ಪಥಸಂಚಲನದಲ್ಲಿ ಇಬ್ಬರು ಪಿ.ಎಸ್.ಐ., ಓರ್ವ ಎ.ಎಸ್.ಐ. ಹಾಗೂ ೫೩ ಕಾನ್ಸ್ಟೇಬಲ್ಗಳು ಹಾಗೂ ಸ್ಥಳೀಯ ಪೊಲೀಸ್ ಅಧಿಕಾರಿಗಳು ಪಾಲ್ಗೊಂಡಿದ್ದರು.