ನವದೆಹಲಿ: ಜೂ.29 ಬಾರ್ಬಡೋಸ್ನ ಕೆನ್ಸಿಂಗ್ಟನ್ ಓವಲ್ನಲ್ಲಿ ನಡೆದ ಐಸಿಸಿ ಟಿ20 ವಿಶ್ವಕಪ್ ಫೈನಲ್ ಪಂದ್ಯದಲ್ಲಿ ಭಾರತ ಮತ್ತು ದಕ್ಷಿಣ ಆಫ್ರಿಕಾ ಮುಖಾಮುಖಿಯಾಗಿ, ರೋಮಾಂಚನಕಾರಿ ಆಟಕ್ಕೆ ಸಾಕ್ಷಿಯಾಯಿತು. 7 ರನ್ಗಳ ಅಂತರದಿಂದ ದಕ್ಷಿಣ ಆಫ್ರಿಕಾ ಮಣಿಸಿದ ಟೀಮ್ ಇಂಡಿಯಾ, 17 ವರ್ಷಗಳ ಬಳಿಕ ಟಿ20 ವಿಶ್ವಕಪ್ ಟ್ರೋಫಿಗೆ ಮುತ್ತಿಟ್ಟಿತು. ಗೆಲುವಿನ ಸಂಭ್ರಮದಲ್ಲಿ ತೊಡಗಿದ್ದ ತಂಡವನ್ನು ನೋಡಿ ಭಾವುಕರಾದ ರೋಹಿತ್, ಮೈದಾನದಲ್ಲೇ ಕಣ್ಣೀರಿಟ್ಟರು.
ಇದನ್ನೂ ಓದಿ: ಮೇಟಗಳ್ಳಿ ಜೆಎಸ್ಎಸ್ ಆಂಗ್ಲ ಮಾಧ್ಯಮ ಶಾಲೆಯ ವಿದ್ಯಾರ್ಥಿ ಸಂಘದ ಉದ್ಘಾಟನೆ
ಅಮೆರಿಕ ಮತ್ತು ವೆಸ್ಟ್ಇಂಡೀಸ್ ಜಂಟಿಯಾಗಿ ಆಯೋಜಿಸಿದ್ದ ಟಿ20 ವಿಶ್ವಕಪ್ ಟೂರ್ನಿಯ ಆರಂಭದಲ್ಲೇ ಕೋಟ್ಯಂತರ ಭಾರತೀಯರು ಟೀಮ್ ಇಂಡಿಯಾ ಮೇಲಿಟ್ಟಿದ್ದ ನಂಬಿಕೆ ಹುಸಿಯಾಗಲಿಲ್ಲ. 2024ರ ಟಿ20 ವಿಶ್ವಕಪ್ ಟ್ರೋಫಿಯನ್ನು ತನ್ನ ಮುಡಿಗೇರಿಸಿಕೊಂಡ ಭಾರತಕ್ಕೆ, ದೇಶ-ವಿದೇಶಗಳಿಂದ ಅಭಿನಂದನೆಗಳ ಮಹಾಪೂರವೇ ಹರಿದುಬಂದಿತು. ದಕ್ಷಿಣ ಆಫ್ರಿಕಾ ವಿರುದ್ಧ ರೋಚಕ ಜಯ ಸಾಧಿಸಿದ ಭಾರತ, ಹೊಸ ಇತಿಹಾಸಕ್ಕೆ ಸಾಕ್ಷಿಯಾಯಿತು. ಅಂತಿಮ ಹಣಾಹಣಿಯಲ್ಲಿ 7 ರನ್ಗಳಿಂದ ಸೌತ್ ಆಫ್ರಿಕಾ ತಂಡವನ್ನು ಮಣಿಸಿದ ರೋಹಿತ್ ಪಡೆ ಇದೀಗ ಚಾಂಪಿಯನ್ಸ್ ಆಗಿ ಹೊರಹೊಮ್ಮಿದ್ದಾರೆ.
ಇತರೆ ದೇಶಗಳ ಮಾಜಿ ಆಟಗಾರರ ಪೈಕಿ ಪಾಕಿಸ್ತಾನದ ಮಾಜಿ ಹಿರಿಯ ಕ್ರಿಕೆಟಿಗರು ಟೀಮ್ ಇಂಡಿಯಾದ ಗೆಲುವನ್ನು ಸಂಭ್ರಮಿಸಿದ್ದು ಇದೀಗ ಭಾರೀ ಆಶ್ಚರ್ಯಕ್ಕೆ ಕಾರಣವಾಗಿದೆ. ಪಾಕ್ನ ಮಾಜಿ ಕ್ಯಾಪ್ಟನ್ ಶಾಹೀದ್ ಆಫ್ರಿದಿ, ಶೋಯಿಬ್ ಅಖ್ತರ್ ಸೇರಿದಂತೆ ಇತರರು ಭಾರತ ಗೆದ್ದ ರೀತಿ, ಕೊಟ್ಟ ಪ್ರದರ್ಶನವನ್ನು ಮೆಚ್ಚಿ ಮಾತನಾಡಿದ್ದಾರೆ. ಅದರಲ್ಲೂ ‘ರಾವಲ್ಪಿಂಡಿ ಎಕ್ಸ್ಪ್ರೆಸ್’ ಎಂದೇ ಖ್ಯಾತರಾದ ಶೋಯಿಬ್ ಅಖ್ತರ್, ಟೀಮ್ ಇಂಡಿಯಾ ಕ್ಯಾಪ್ಟನ್ ರೋಹಿತ್ ಶರ್ಮಗೆ ಸಲಾಂ ಎಂದು ಹೇಳಿದ್ದಾರೆ.
ಇದನ್ನೂ ಓದಿ: ಪಹಣಿ ಪತ್ರಿಕೆಯಲ್ಲಿನ ನ್ಯೂನತೆ ಸರಿಪಡಿಕೆ ಶೀಘ್ರ: ಉಪ ವಿಭಾಗಾಧಿಕಾರಿ ಮೊಹಮ್ಮದ ಖಿಜರ್
“ಕ್ಯಾಪ್ಟನ್ ಆಗಿ ರೋಹಿತ್ ಶರ್ಮಾ ಇದನ್ನು ಸಾಧಿಸಿಯೇ ಬಿಟ್ಟರು. ಇಂತಹ ಸಮಯದಲ್ಲಿ ಭಾವನೆಗಳಿಗೆ ಕೊನೆಯಿಲ್ಲ. ಈ ಗೆಲುವಿಗೆ ಭಾರತ ಅರ್ಹ. ಇಡೀ ತಂಡಕ್ಕೆ ನನ್ನ ಅಭಿನಂದನೆಗಳು. ತಮ್ಮ ತಂಡ ಗೆಲ್ಲುತ್ತಿದ್ದಂತೆ ಮೈದಾನದ ಮೇಲೆ ಕುಸಿದ ರೋಹಿತ್, ಕಣ್ಣೀರಿಟ್ಟರು. ನಿಮಗಿದೋ ಸಲಾಂ” ಎಂದು ಶೋಯಿಬ್ ಅಭಿನಂದನೆ ತಿಳಿಸಿದರು. “ಕ್ಯಾಪ್ಟನ್ ಆಗಿ ನೀವು ನಿಮ್ಮ ಜವಾಬ್ದಾರಿಯನ್ನು ಅಚ್ಚುಕಟ್ಟಾಗಿ ನಿರ್ವಹಿಸಿದ್ದೀರಿ ರೋಹಿತ್. ಎಂದಿನಂತೆ ಮ್ಯಾಚ್ ವಿನ್ನರ್ ಆಗಿ ಕೊಹ್ಲಿ ಹೊರಹೊಮ್ಮಿದ್ದಾರೆ. ಇನ್ನು ಬುಮ್ರಾ ಬಗ್ಗೆ ಹೇಳುವುದೇ ಬೇಡ. ಅವರು ಬೆಸ್ಟ್ ಬೌಲರ್ ಎಂಬುದರಲ್ಲಿ ಅನುಮಾನವೇ ಇಲ್ಲ” ಎಂದು ಶಾಹೀದ್ ಆಫ್ರಿದಿ ಮೆಚ್ಚುಗೆ ವ್ಯಕ್ತಪಡಿಸಿದ್ದಾರೆ,(ಏಜೆನ್ಸೀಸ್).
ಅಂದು ಈ ವ್ಯಕ್ತಿ ಬಗ್ಗೆ ರೋಹಿತ್, ದ್ರಾವಿಡ್ ಆಡಿದ ಮಾತು ಇಂದು ನಿಜವಾಯ್ತು! ಟೀಕಾಕಾರಿಗೆ ಭಾರೀ ಮುಖಭಂಗ