ದೂರದೃಷ್ಟಿಯ ಯೋಜನೆಗಳೊಂದಿಗೆ ಬೆಂಗಳೂರು ರೂಪಿಸಿದವರು : ಸುರೇಶ್ ಬೈಲು ಬಣ್ಣನೆ

ಕಡಬ: ಕಾಡುಗಳಿಂದ ಆವೃತವಾಗಿದ್ದ ಬೆಂಗಳೂರನ್ನು ದೂರದೃಷ್ಟಿಯ ಆಲೋಚನೆಯೊಂದಿಗೆ ಮಾದರಿಯಾಗಿ ನಾಡಪ್ರಭು ಕೆಂಪೇ ಗೌಡರು ನಿರ್ಮಾಣ ಮಾಡಿದ್ದಾರೆ. ಅವರ ಯೋಚನೆ, ಯೋಜನೆಗಳಿಂದ ನಾಡು ಬೆಳೆಯುತ್ತಿರುವುದರಿಂದ ಇಡೀ ವಿಶ್ವವೇ ಬೆಂಗಳೂರಿನತ್ತ ನೋಡುವಂತಾಗಿದೆ ಎಂದು ಒಕ್ಕಲಿಗ ಸೇವಾ ಸಂಘದ ಕಡಬ ತಾಲೂಕು ಅಧ್ಯಕ್ಷ ಸುರೇಶ್ ಬೈಲು ಹೇಳಿದರು. ಕಡಬ ಒಕ್ಕಲಿಗ ಸಮುದಾಯ ಭವನದಲ್ಲಿ, ಗುರುವಾರ ಕಡಬ ರಾಷ್ಟ್ರೀಯ ಹಬ್ಬಗಳ ಆಚರಣಾ ಸಮಿತಿಯಿಂದ ಆಯೋಜಿತ ನಾಡ ಪ್ರಭು ಕೆಂಪೇಗೌಡ ಜಯಂತಿ ಕಾರ್ಯಕ್ರಮದಲ್ಲಿ ಮಾತನಾಡಿದರು. ಕಡಬ ತಹಸೀಲ್ದಾರ್ ಪ್ರಭಾಕರ ಖಜೂರೆ ಉದ್ಘಾಟಿಸಿದರು. ಜಿಪಂ ಮಾಜಿ … Continue reading ದೂರದೃಷ್ಟಿಯ ಯೋಜನೆಗಳೊಂದಿಗೆ ಬೆಂಗಳೂರು ರೂಪಿಸಿದವರು : ಸುರೇಶ್ ಬೈಲು ಬಣ್ಣನೆ