ಕುಂಬಳೆ: ಪುಸ್ತಕಗಳು ನಾವು ಹೇಗಿದ್ದೇವೆ, ಹೇಗಿರಬೇಕು ಎನ್ನುವ ದಾರಿ ತೋರಿಸುವ ದಾರಿದೀಪಗಳಾಗಿವೆ. ಪುಸ್ತಕ ಓದು ಮಾತ್ರವೇ ನಮ್ಮನ್ನು ಸಮರ್ಥವಾಗಿ ಬೆಳೆಸುವುದಕ್ಕೆ ಸಾಧ್ಯ ಎಂದು ಮಾಯಿಪ್ಪಾಡಿ ಡಯಟ್ ಕೇಂದ್ರದ ಉಪನ್ಯಾಸಕ ಗಿರೀಶ್ ಬಾಬು ಅಭಿಪ್ರಾಯಪಟ್ಟರು.
ಮೊಗ್ರಾಲ್ ಪುತ್ತೂರು ಸರ್ಕಾರಿ ಹೈಯರ್ ಸೆಕೆಂಡರಿ ಶಾಲೆಯಲ್ಲಿ ಗುರುವಾರ ವಿವಿಧ ಸಂಘಗಳ ಉದ್ಘಾಟನೆ ನಿರ್ವಹಿಸಿ ಮಾತನಾಡಿದರು.
ಶಾಲಾ ಮುಖ್ಯಸ್ಥೆ ಬೀನಾ ಸಿ.ಟಿ. ಅಧ್ಯಕ್ಷತೆ ವಹಿಸಿದ್ದರು. ಹಿರಿಯ ಶಿಕ್ಷಕರಾದ ರಾಘವ ಎಂ.ಎನ್, ಜನಾರ್ದನ ಟಿ.ವಿ, ಅಹಮ್ಮದ್ ನಿಜಾರ್ ಕೆ.ಸಿ, ಅಕ್ಬರ್ ಎನ್, ಸಿಂಧು, ಮಾತೃಸಮಿತಿ ಅಧ್ಯಕ್ಷೆ ಫೌಸಿಯಾ ಹಾಗೂ ವಿವಿಧ ಸಂಘಗಳ ಪ್ರತಿನಿಧಿಗಳು ಶುಭಹಾರೈಸಿದರು.
ಸಂಘಗಳ ಚಟುವಟಿಕೆಗಳಿಗೆ ಚಾಲನೆ ನೀಡಲಾಯಿತು. ಕನ್ನಡ ಭಾಷಾ ಸಂಘ ಹಾಗೂ ವಿದ್ಯಾರಂಗ ಜಂಟಿಯಾಗಿ ಹಮ್ಮಿಕೊಂಡ ಪುಸ್ತಕ ಆಸ್ವಾದನಾ ಟಿಪ್ಪಣಿ ಸ್ಪರ್ಧೆಯಲ್ಲಿ ವಿಜೇತರಾದ ವೈಷ್ಣವಿ ಹಾಗೂ ನವ್ಯಶ್ರೀ ಅವರಿಗೆ ಬಹುಮಾನ ವಿತರಿಸಲಾಯಿತು. ಪ್ರೌಢಶಾಲಾ ಎಸ್.ಆರ್.ಜಿ. ಸಂಚಾಲಕ ಅಹಮ್ಮದ್ ನಿಸಾರ್ ಸ್ವಾಗತಿಸಿದರು. ಯು.ಪಿ ವಿಭಾಗದ ಎಸ್.ಆರ್.ಜಿ ಪ್ರತಿನಿಧಿ ನಿಸಾರ್ ವಂದಿಸಿದರು.