More

    ಏಕದಿನ ವಿಶ್ವಕಪ್​ ಫೈನಲ್​ ಮರುಕಳಿಸಲಿ; ಟೀಮ್​ ಇಂಡಿಯಾ ಸೋಲಬೇಕು ಎಂದ ಮಾಜಿ ನಾಯಕ

    ಗಯಾನ: 09ನೇ ಆವೃತ್ತಿಯ ಚುಟುಕು ವಿಶ್ವಸಮರದಲ್ಲಿ ಟೀಮ್​ ಇಂಡಿಯಾ ಅಜೇಯವಾಗಿ ಫೈನಲ್​ ಪ್ರವೇಶಿಸಿದ್ದು, ಫೈನಲ್ಗೂ ತನ್ನ ಗೆಲುವಿನ ಓಟವನ್ನು ವಿಸ್ತರಿಸಲು ಸಜ್ಜಾಗಿದೆ. 2022ರಲ್ಲಿ ನಡೆದ ಟಿ20 ವಿಶ್ವಕಪ್​ ಸೆಮಿಫೈನಲ್​ ಸೋಲಿನ ಸೇಡನ್ನು ಭಾರತ ತೀರಿಸಿಕೊಂಡಿದ್ದು, ಈ ವಿಚಾರ ಇಂಗ್ಲೆಂಡ್​ ತಂಡದ ಮಾಜಿ ನಾಯಕ ಮೈಕೆಲ್​ ವಾಗನ್​ ಅವರ ಕಣ್ಣು ಕೆಂಪಗಾಗಿಸಿದೆ.

    ಈ ಕುರಿತು ಸಾಮಾಜಿಕ ಜಾಲತಾಣದಲ್ಲಿ ಬರೆದುಕೊಂಡಿದ್ದು, ಅವರ ಪೋಸ್ಟ್​ಗೆ ಮಾಜಿ ಕ್ರಿಕೆಟಿಗ ವಾಸಿಂ ಜಾಫರ್​ ಪ್ರತಿಕ್ರಿಯಿಸಿದ್ದಾರೆ. ಈ ಪೋಸ್ಟ್​ ಭಾರತ ಕ್ರಿಕೆಟ್​ ತಂಡದ ಅಭಿಮಾನಿಗಳ ಕಣ್ಣು ಕೆಂಪಗಾಗಿಸಿದ್ದು, ಮಾಜಿ ಆಟಗಾರನ ಟ್ವೀಟ್​ಗೆ ಕಿಡಿಕಾರಿದ್ದಾರೆ.

    ಇದನ್ನೂ ಓದಿ: ಟಿ20 ವಿಶ್ವಕಪ್​ ಫೈನಲ್​ಗೆ ಅಜೇಯ ಎಂಟ್ರಿ; ಆಸ್ಟ್ರೇಲಿಯಾ ಹೆಸರಿನಲ್ಲಿದ್ದ ವಿಶ್ವದಾಖಲೆಯನ್ನು ಸರಿಗಟ್ಟಿದ ಟೀಮ್​ ಇಂಡಿಯಾ

    ಟಿ20 ವಿಶ್ವಕಪ್​ನ ಎರಡನೇ ಸೆಮಿಫೈನಲ್​ನಲ್ಲಿ ಇಂಗ್ಲೆಂಡ್​ ವಿರುದ್ಧ ಟೀಮ್ ಇಂಡಿಯಾ ಗೆಲ್ಲುತ್ತಿದ್ದಂತೆ ವಾನ್ ಅವರನ್ನು ಟ್ಯಾಗ್ ಮಾಡಿ ನೀವು ಚೆನ್ನಾಗಿದ್ದೀರೆಂದ ಭಾವಿಸುತ್ತೇನೆ ಎಂದು ವಾಸಿಂ ಜಾಫರ್​ ಕಾಲೆಳೆದಿದ್ದಾರೆ. ನೀವು ಚೆನ್ನಾಗಿದ್ದೀರಾ ಎಂದು ಕೇಳಿರುವುದಕ್ಕೆ ಸಂತೋಷ… ಭಾರತ ತಂಡ ಉತ್ತಮ ಪ್ರದರ್ಶನ ನೀಡಿದೆ. ಈ ಬಾರಿಯ ವಿಶ್ವಕಪ್​ನಲ್ಲಿ ಈವರೆಗಿನ ಅತ್ಯುತ್ತಮ ತಂಡ… ಕಳೆದ ಏಕದಿನ ಫೈನಲ್​ನಂತೆ ಈ ಬಾರಿ ಟಿ20 ವಿಶ್ವಕಪ್​ ಅನ್ನು ಸುಲಭವಾಗಿ ಗೆಲ್ಲಬೇಕು ಎಂದು ಇಂಗ್ಲೆಂಡ್​ನ ಮಾಜಿ ನಾಯಕ ಮೈಕಲ್ ವಾಗನ್ ಪ್ರತಿಕ್ರಿಯಿಸಿದ್ದಾರೆ.

    ಏಕದಿನ ವಿಶ್ವಕಪ್​ನಂತೆ ಈ ಬಾರಿ ಭಾರತ ಗೆಲ್ಲಬೇಕು ಎನ್ನಲು ಮುಖ್ಯ ಕಾರಣ, ಟೀಮ್ ಇಂಡಿಯಾ 2023ರ ಏಕದಿನ ವಿಶ್ವಕಪ್ ಫೈನಲ್​ ಪಂದ್ಯದಲ್ಲಿ ಸೋತಿರುವುದು. ಇದನ್ನು ಪ್ರಸ್ತಾಪಿಸುವ ಮೂಲಕ ಫೈನಲ್​ನಲ್ಲಿ ಸುಲಭವಾಗಿ ಎದುರಾಳಿ ತಂಡ ಗೆಲ್ಲಬೇಕೆಂದು ಪರೋಕ್ಷವಾಗಿ ವಾಗನ್ ಆಶಿಸಿದ್ದಾರೆ. ಇಂಗ್ಲೆಂಡ್​ ತಂಡದ ಮಾಜಿ ನಾಯಕನ ಪೋಸ್ಟ್​ ವೈರಲ್​ ಆಗಿದ್ದು, ಫೈನಲ್ ಪಂದ್ಯದ ಬಳಿಕ ಈ ಪೋಸ್ಟ್​ಗೆ ಸರಿಯಾದ ಉತ್ತರ ನೀಡುತ್ತೇವೆ ಎಂದು ಭಾರತದ ಅಭಿಮಾನಿಗಳು ಪೋಸ್ಟ್​ಗೆ ಕಮೆಂಟ್​ ಹಾಕಿದ್ದಾರೆ.

    ಸಿನಿಮಾ

    ಲೈಫ್‌ಸ್ಟೈಲ್

    ಟೆಕ್ನಾಲಜಿ

    Latest Posts