ಗುರುಪುರ: ರಾಷ್ಟ್ರೀಯ ಹೆದ್ದಾರಿ 169ರ ವಾಮಂಜೂರು ಜಂಕ್ಷನ್ಗಿಂತ ಸ್ವಲ್ಪ ಮುಂದೆ ಸರಕು ತುಂಬಿದ್ದ ಲಾರಿಯೊಂದು ಹೆದ್ದಾರಿಯಿಂದ ಕೆಳಗೆ ಉರುಳಿದ ಘಟನೆ ಸೋಮವಾರ ಸಂಜೆ ನಡೆದಿದೆ.
ಚಾಲಕ ಪ್ರಾಣಾಪಾಯದಿಂದ ಪಾರು
![ವಾಮಂಜೂರಿನಲ್ಲಿ ಲಾರಿ ಪಲ್ಟಿ: ಚಾಲಕ ಪ್ರಾಣಾಪಾಯದಿಂದ ಪಾರು](https://cdn.vvimgs.com/wp-content/uploads/2024/06/web-vamanjuru-1.webp)
ವಾಮಂಜೂರು ಓಂಕಾರನಗರದಲ್ಲಿರುವ ವಿವಾದಿತ ಅಣಬೆ ಉತ್ಪಾದನಾ ಘಟಕಕ್ಕೆ ಗೊಬ್ಬರ ಹೇರಿಕೊಂಡು ಬಂದಿದ್ದ ಈ ಲಾರಿ, ಹೆದ್ದಾರಿಯಿಂದ ಒಳರಸ್ತೆಗೆ ತಿರುಗುತ್ತಲೇ ನಿಯಂತ್ರಣ ತಪ್ಪಿ ಪಲ್ಟಿ ಹೊಡೆದಿದೆ. ಲಾರಿ ಚಾಲಕ ಜಿಗಿದು ಪ್ರಾಣಾಪಾಯದಿಂದ ಪಾರಾಗಿದ್ದಾರೆ.
ವಾರಗಳ ಕಾಲ ನಡೆದಿತ್ತು ಪ್ರತಿಭಟನೆ
ಕಳೆದ ವರ್ಷ ಇದೇ ವೇಳೆಗೆ ಇಲ್ಲಿ ದುರ್ವಾಸನೆ ಬೀರುತ್ತಿರುವ ಅಣಬೆ ಫ್ಯಾಕ್ಟರಿ ವಿರುದ್ಧ ಸ್ಥಳೀಯ ನಾಗರಿಕರು ಒಂದು ವಾರ ಪ್ರತಿಭಟನೆ ನಡೆಸಿ, ಸ್ಥಳೀಯ ಪೂಜಾ ಕೇಂದ್ರಗಳಲ್ಲಿ ಪ್ರಾರ್ಥನೆ ಸಲ್ಲಿಸಿರುವುದನ್ನು ಸ್ಥಳದಲ್ಲಿದ್ದ ಕೆಲವರು ನೆನಪಿಸಿಕೊಂಡರು.