More

    ಲಿಂಗಾನಂದ ಶ್ರೀ ಕೊಡುಗೆ ಅಪಾರ

    ಶಿವಮೊಗ್ಗ: ಬಸವಣ್ಣನವರು ಪ್ರತಿಪಾದಿಸಿದ ವೈಚಾರಿಕ ತತ್ವ, ಸಂದೇಶಗಳನ್ನು ಜನಮಾನಸದಲ್ಲಿ ಕ್ರಿಯಾತ್ಮಕವಾಗಿ ರೂಪಿಸುವುದರ ಮೂಲಕ ಬಸವ ಪರಂಪರೆಯ ಸಾಮ್ರಾಜ್ಯವನ್ನು ಮರುಸೃಷ್ಠಿಗೊಳಿಸಿದ ಶ್ರೇಷ್ಠ ಗುರುವರ್ಯರು ಶ್ರೀ ಲಿಂಗಾನಂದ ಮಹಾಸ್ವಾಮೀಜಿ ಎಂದು ಕೂಡಲಸಂಗಮ ಬಸವಧರ್ಮಪೀಠದ ಬಸವತತ್ವ ಪ್ರಚಾರಕಿ ಶಾಂತಾಕುಮಾರಿ ಹೇಳಿದರು.

    ರಾಷ್ಟ್ರೀಯ ಬಸವದಳ ಟ್ರಸ್ಟ್ ಶಿವಮೊಗ್ಗ ಶಾಖೆಯಿಂದ ಏರ್ಪಡಿಸಿದ್ದ ಶ್ರೀ ಲಿಂಗಾನಂದ ಸ್ವಾಮೀಜಿ ಹಾಗೂ ವಚನ ಸಾಹಿತ್ಯ ಪಿತಾಮಹ ಫ.ಗು.ಹಳಕಟ್ಟಿ ಸಂಸ್ಮರಣೆಯಲ್ಲಿ ಮಾತನಾಡಿದ ಅವರು, ವಚನಸಾಹಿತ್ಯ ಸಂರಕ್ಷಣೆಯನ್ನು ಮಹಾತಪಸ್ಸು ಎಂದು ಭಾವಿಸಿ, ಜೀವನದುದ್ದಕ್ಕೂ ವಚನ ಸಾಹಿತ್ಯ ಸಂರಕ್ಷಣೆ, ಸಂಶೋಧನೆ ಹಾಗೂ ಅದರ ಪ್ರಕಟಣೆಯಲ್ಲಿ ಶ್ರಮಿಸಿದ ಫ.ಗು.ಹಳಕಟ್ಟಿ ಸಾಧನೆ ಅನುಪಮವಾದುದು ಎಂದರು.
    ಅಧ್ಯಕ್ಷತೆ ವಹಿಸಿದ್ದ ಬಸವಳ ಟ್ರಸ್ಟ್ ಶಿವಮೊಗ್ಗ ಶಾಖೆ ಅಧ್ಯಕ್ಷ ರಾಮಪ್ಪ ಮಾತನಾಡಿದರು. ಕಾರ್ಯದರ್ಶಿ ಯೋಗೀಶ್ ನಿರ್ವಿಕಲ್ಪ, ಪ್ರಮುಖರಾದ ಶಿವರುದ್ರಪ್ಪ, ನೀಲಲೋಚನ, ನಾಗರತ್ನಮ್ಮ, ಲತಾ ಮುಂತಾದವರಿದ್ದರು.

    See also  ಅಚ್ಚುಕಟ್ಟಾಗಿರಲಿ ಬಾಲ್ಯವಿವಾಹ ನಿಷೇಧ ಜಾಗೃತಿ ಅಭಿಯಾನದ ಕಾರ್ಯಕ್ರಮ

    ಸಿನಿಮಾ

    ಲೈಫ್‌ಸ್ಟೈಲ್

    ಟೆಕ್ನಾಲಜಿ

    Latest Posts