ಬೆಂಗಳೂರು: ಶೀಲ ಶಂಕಿಸಿ ಪತ್ನಿಯನ್ನು ಕೊಲೆ ಮಾಡಿದ್ದ ಪತಿಗೆ 71ನೇ ಸೆಷನ್ಸ್ ನ್ಯಾಯಾಲಯ ಜೀವಾವಧಿ ಶಿಕ್ಷೆ ವಿಧಿಸಿ ತೀರ್ಪು ನೀಡಿದೆ.
ಒಡಿಶಾ ಮೂಲದ ಪ್ರಹ್ಲಾದ್ ಓಜಾ (37) ಅಪರಾಧಿ. 7 ವರ್ಷಗಳ ಹಿಂದೆ ನೌಕರಿ ಅರಸಿ ನಗರಕ್ಕೆ ಬಂದು ಕೊತ್ತನೂರಿನ ನಗರೇಶ್ವರ ನಾಗೇನಹಳ್ಳಿಯಲ್ಲಿ ಲೇಬರ್ ಶೆಡ್ನಲ್ಲಿ ಪ್ರಹ್ಲಾದ್ ಓಜಾ ದಂಪತಿ ನೆಲೆಸಿದ್ದರು. 2017ರಲ್ಲಿ ಬೇರೆ ಪುರುಷನ ಜೊತೆಗೆ ಪತ್ನಿ ಸಲುಗೆಯಿಂದ ಮಾತನಾಡುತ್ತಾಳೆ ಎಂಬ ವಿಚಾರಕ್ಕೆ ಜಗಳ ತೆಗೆದು ತವ ಮತ್ತು ರಿಪೀಸ್ ಪಟ್ಟಿಯಿಂದ ಹಲ್ಲೆ ನಡೆಸಿ ಕೊಲೆ ಮಾಡಿದ್ದ.
ಈ ಬಗ್ಗೆ ಪ್ರಕರಣ ದಾಖಲಿಸಿಕೊಂಡ ಕೊತ್ತನೂರು ಪೊಲೀಸರು, ಪ್ರಹ್ಲಾದ್ ಓಜಾನನ್ನು ಬಂಧಿಸಿ ತನಿಖೆ ನಡೆಸಿ ಕೋರ್ಟ್ಗೆ ಆರೋಪಪಟ್ಟಿ ಸಲ್ಲಿಸಿದ್ದರು. 71ನೇ ಸೆಷನ್ಸ್ ಕೋರ್ಟ್ನ ನ್ಯಾಯದೀಶರಾದ ಬಾಲಚಂದ್ರ ಭಟ್ ಅವರು, ವಾದ-ಪ್ರತಿವಾದ ಆಲಿಸಿದರು.ಪಬ್ಲಿಕ್ ಪ್ರಾಸಿಕ್ಯೂಟರ್ ಎಚ್.ಆರ್. ಸತ್ಯವತಿ, ವಾದ ಮಂಡಿಸಿದ್ದರು.
ಪ್ರಹ್ಲಾದ್ ಓಜಾ ಅಪರಾಧಿ ಎಂದು ಘೋಷಣೆ ಮಾಡಿ ಜೀವಾವಧಿ ಶಿಕ್ಷೆ ಮತ್ತು 1 ಸಾವಿರ ರೂ. ದಂಡ ವಿಧಿಸಿದ್ದಾರೆ. ಮೃತ ಮಹಿಳೆಯ ತಂದೆಗೆ 5 ಲಕ್ಷ ರೂ. ಪರಿಹಾರ ನೀಡುವಂತೆ ಕಾನೂನು ಸೇವಾ ಪ್ರಾಧಿಕಾರವು ನೀಡಬೇಕೆಂದು ಆದೇಶಿಸಿದರು.