ಶ್ರೀನಗರ: ಲಡಾಖ್ನ ದೌಲತ್ ಬೇಗ್ ಓಲ್ಡಿ ಪ್ರದೇಶದಲ್ಲಿ ಶುಕ್ರವಾರ ಯುದ್ಧ ಟ್ಯಾಂಕ್ ತರಬೇತಿಯಲ್ಲಿದ್ದಾಗ ನೀರಿನ ಮಟ್ಟ ಹಠಾತ್ ಏರಿಕೆಯಾಗಿ ಜೆಸಿಒ ಸೇರಿದಂತೆ ಐವರು ಸೇನಾ ಯೋಧರು ಹುತಾತ್ಮರಾಗಿದ್ದಾರೆ.
ಇದನ್ನೂ ಓದಿ: ಅಮರನಾಥ ಯಾತ್ರೆ ಆರಂಭ.. ಪವಿತ್ರ ಗುಹೆಯತ್ತ ಹೆಜ್ಜೆ ಹಾಕಿದ ಯಾತ್ರಾರ್ಥಿಗಳು
ದೌಲತ್ ಬೇಗ್ ಓಲ್ಡಿಯಲ್ಲಿ ಟ್ಯಾಂಕ್ ತರಬೇತಿ ನಡೆಯುತ್ತಿತ್ತು. ಅನೇಕ ಸೇನಾ ಟ್ಯಾಂಕ್ಗಳು ಅಲ್ಲಿದ್ದವು. ಈ ಸಮಯದಲ್ಲಿ, ಟಿ-72 ಟ್ಯಾಂಕ್ ಮೂಲಕ ನದಿಯನ್ನು ಹೇಗೆ ದಾಟಬೇಕು ಎಂಬುದರ ಕುರಿತು ಅಭ್ಯಾಸವು ಲೈನ್ ಆಫ್ ಆಕ್ಚುವಲ್ ಕಂಟ್ರೋಲ್ (ಎಲ್ಎಸಿ) ಬಳಿ ನಡೆಯುತ್ತಿತ್ತು. ಆದರೆ ನದಿಯಲ್ಲಿ ಹಠಾತ್ ಪ್ರವಾಹ ಬಂದಿದ್ದರಿಂದ ಯುದ್ಧ ಟ್ಯಾಂಕ್ ಮತ್ತು ಯೋದರು ಕೊಚ್ಚಿಕೊಂಡು ಹೋಗಿದ್ದಾರೆ.
ಘಟನೆ ನಡೆದ ಕೂಡಲೇ ಸೇನಾ ಸಿಬ್ಬಂದಿ ಕಾರ್ಯಾಚರಣೆಗೆ ಇಳಿದರಾದರೂ ಅಭ್ಯಾಸದಲ್ಲಿ ನಿರತರಾಗಿದ್ದ ಯೋದರನ್ನು ಉಳಿಸಿಕೊಳ್ಳಲು ಸಾಧ್ಯವಾಗಿಲ್ಲ ಎನ್ನಲಾಗಿದೆ.