ಮೆಟ್ಟೂರು (ತಮಿಳುನಾಡು): ತಮಿಳುನಾಡಿನ ಮೆಟ್ಟೂರುನಲ್ಲಿ ನಡೆದ ಎರಡು ಪ್ರತಿಷ್ಠಿತ ಸ್ಪರ್ಧೆಗಳಲ್ಲಿ ಕರ್ನಾಟಕದ ಕುಸ್ತಿಪಟುಗಳು ತಮ್ಮ ಕುಶಲತೆ ಮತ್ತು ದೃಢ ಸಂಕಲ್ಪವನ್ನು ಮೆರೆದಿದ್ದಾರೆ. 23 ವಯೋಮಿತಿಯ ದಕ್ಷಿಣ ಭಾರತ ಕುಸ್ತಿ ಚಾಂಪಿಯನ್ಷಿಪ್ನಲ್ಲಿ ಕರ್ನಾಟಕದ ಒಟ್ಟು 29 ಕುಸ್ತಿಪಟುಗಳು ಭಾಗವಹಿಸಿದರು. 9 ಫ್ರೀಸ್ಟೈಲ್ ಕುಸ್ತಿಪಟುಗಳು, 10 ಗ್ರೀಕೊ-ರೋಮನ್ ಕುಸ್ತಿಪಟುಗಳು, 10 ಮಹಿಳಾ ಕುಸ್ತಿಪಟುಗಳು ಅಪೂರ್ವ ಸಾಧನೆ ಸಾಧಿಸಿದ್ದು, ಎಲ್ಲಾ 29 ಮಂದಿ ಕುಸ್ತಿಪಟುಗಳು ಚಿನ್ನದ ಪದಕಗಳನ್ನು ಗೆದ್ದು, ಕರ್ನಾಟಕದ ಹೆಮ್ಮೆಯನ್ನು ಹೆಚ್ಚಿಸಿದ್ದಾರೆ ಮತ್ತು ಕುಸ್ತಿ ಸಮುದಾಯಕ್ಕೆ ಆನಂದವನ್ನು ತಂದಿದ್ದಾರೆ. ಈ ಐತಿಹಾಸಿಕ ಜಯ ನಮ್ಮ ಕ್ರೀಡಾಪಟುಗಳು, ಕೋಚುಗಳು, ಸಂಘ ಮತ್ತು ಅಧಿಕಾರಿಗಳ ನಿಷ್ಠೆ ಮತ್ತು ಪರಿಶ್ರಮವನ್ನು ಹೈಲೈಟ್ ಮಾಡುತ್ತದೆ.
1ನೇ ದಕ್ಷಿಣ ಭಾರತ ಸಂಪ್ರದಾಯಿಕ ಹಿರಿಯ ಕುಸ್ತಿ ಚಾಂಪಿಯನ್ಷಿಪ್ನಲ್ಲೂ ಗೆಲುವನ್ನು ಮುಂದುವರಿಸುತ್ತಾ, ಕರ್ನಾಟಕದ 20 ಕುಸ್ತಿಪಟುಗಳು ಭಾಗವಹಿಸಿ ಅಪೂರ್ವ ಸಾಧನೆ ತೋರಿದ್ದಾರೆ. ತಲಾ 10 ಪುರುಷ, ಮಹಿಳಾ ಕುಸ್ತಿಪಟುಗಳನ್ನು ಒಳಗೊಂಡ ಕರ್ನಾಟಕ ತಂಡವು 18 ಚಿನ್ನದ ಪದಕಗಳು ಮತ್ತು 2 ಕಂಚಿನ ಪದಕಗಳನ್ನು ಗೆದ್ದು, ಕುಸ್ತಿ ಅಂಗಣದಲ್ಲಿ ತನ್ನ ಪ್ರಾಬಲ್ಯವನ್ನು ಮತ್ತಷ್ಟು ಸುದೃಢಗೊಳಿಸಿದೆ. ಈ ವಿಶೇಷ ಸಾಧನೆ ಕರ್ನಾಟಕಕ್ಕೆ ಮತ್ತು ಕುಸ್ತಿ ಸಮುದಾಯಕ್ಕೆ ಮಹಾ ಹೆಮ್ಮೆಯನ್ನು ತಂದಿದೆ. ಒಟ್ಟಾಗಿ, ಕರ್ನಾಟಕದ ಕುಸ್ತಿ ತಂಡವು ಪುರುಷ ಮತ್ತು ಮಹಿಳಾ ವಿಭಾಗಗಳಲ್ಲಿ ಎರಡೂ ವಿಭಾಗಗಳಲ್ಲಿ ಚಾಂಪಿಯನ್ ಆಗಿ ಹೊರಹೊಮ್ಮಿದ್ದು, ಅವರ ಅದ್ವಿತೀಯ ಪ್ರತಿಭೆಯನ್ನು ಮತ್ತು ನಿಷ್ಠೆಯನ್ನು ತೋರಿಸಿದೆ.
ಈ ವಿಶೇಷ ಸಾಧನೆಗೆ ಕಾರಣರಾದ ಕುಸ್ತಿಪಟುಗಳು, ಅವರ ಕೋಚುಗಳು ಮತ್ತು ಅಧಿಕಾರಿಗಳಿಗೆ ನಾವು ಹೃತ್ಪೂರ್ವಕ ಅಭಿನಂದನೆಗಳನ್ನು ಸಲ್ಲಿಸುತ್ತೇವೆ. ಅವರ ಜಯವು ನಮ್ಮ ರಾಜ್ಯದಲ್ಲಿನ ಪ್ರತಿಭೆಯನ್ನು ಹೈಲೈಟ್ ಮಾಡುವುದಲ್ಲದೆ, ಭವಿಷ್ಯದ ಕುಸ್ತಿಪಟುಗಳಿಗೆ ಪ್ರೇರಣೆಯಾಗಿ ಕಾರ್ಯನಿರ್ವಹಿಸುತ್ತದೆ ಎಂದು ಭಾರತೀಯ ಕುಸ್ತಿಸಂಘದ ಜಂಟಿ ಕಾರ್ಯಧರ್ಶಿ ಹಾಗೂ ಕರ್ನಾಟಕ ರಾಜ್ಯ ಕುಸ್ತಿ ಸಂಘದ ಅಧ್ಯಕ್ಷ ಬಿ.ಗುಣರಂಜನ್ ಶೆಟ್ಟಿ ಮತ್ತು ಕರ್ನಾಟಕ ಕುಸ್ತಿ ಸಂಘದ ಪ್ರದಾನ ಕರ್ಯಧರ್ಶಿ ಜೆ. ಶ್ರೀನಿವಾಸ ಅಭಿನಂದನೆ ಸಲ್ಲಿಸಿದ್ದಾರೆ.