ಬೆಂಗಳೂರು: ಕರ್ನಾಟಕ ರಾಜ್ಯ ತಿಗಳರ (ವಹ್ನಿಕುಲ ಕ್ಷತ್ರಿಯರ) ಸಂಘವು 2023-24ನೇ ಸಾಲಿನ ಶೈಕ್ಷಣಿಕ ವರ್ಷದಲ್ಲಿ ಎಸ್ಎಸ್ಎಲ್ಸಿ ಮತ್ತು ದ್ವಿತೀಯ ಪಿಯುಸಿ ಪರೀಕೆಯಲ್ಲಿ ಶೇ.85 ಹಾಗೂ ಪದವಿಯಲ್ಲಿ ಶೇ.75 ಅಂಕಗಳನ್ನು ಗಳಿಸಿದ ವಿದ್ಯಾರ್ಥಿಗಳಿಂದ ಪ್ರತಿಭಾ ಪುರಸ್ಕಾರಕ್ಕಾಗಿ ಅರ್ಜಿ ಆಹ್ವಾನಿಸಿದೆ.
ವಹ್ನಿಕುಲ ಕ್ಷತ್ರಿಯರ ಸಮಾಜದ ವಿದ್ಯಾರ್ಥಿಗಳು ಪುರಸ್ಕಾರಕ್ಕೆ ಅರ್ಜಿ ಸಲ್ಲಿಸಬಹುದು. ಅರ್ಹರು ಅಂಕಪಟ್ಟಿಯ ನಕಲು, ವರ್ಗಾವಣೆ ಪ್ರಮಾಣ ಪತ್ರಘಿ, ಜಾತಿ ಪ್ರಮಾಣದ ಪತ್ರ (ಪ್ರವರ್ಗ 2ಎ) ದೃಢೀಕೃತ ನಕಲು ಪ್ರತಿ , ವಿದ್ಯಾರ್ಥಿಯ ಆಧಾರ್ ಕಾರ್ಡ್ ಪ್ರತಿ ಮತ್ತು ಎರಡು ಭಾವಚಿತ್ರ, ದೂರವಾಣಿ ಮತ್ತಿತರ ವಿವರಗಳೊಂದಿಗೆ ಜು.15ರೊಳಗೆ ಸಲ್ಲಿಸಬೇಕು ಎಂದು ಸಂಘದ ಉಪಾಧ್ಯಕ್ಷ ಎಂ. ಕುಪ್ಪುಸ್ವಾಮಿ ತಿಳಿಸಿದ್ದಾರೆ.
ವಿದ್ಯಾರ್ಥಿಗಳು ಅರ್ಜಿಗಳನ್ನು ಖುದ್ದಾಗಿ ಅಥವಾ ಅಂಚೆ ಮೂಲಕ ಕಳುಹಿಸಬಹದು. ವಿಳಾಸ: ಕರ್ನಾಟಕ ರಾಜ್ಯ ತಿಗಳರ ವಹ್ನಿಕುಲ ಕ್ಷತ್ರಿಯ ಸಂಘ, ನಂ.151, ಲಾಲ್ಬಾಗ್ ಸಿದ್ದಾಪುರ, ಜಯನಗರ 1ನೇ ಬ್ಲಾಕ್, ಬೆಂಗಳೂರು. ಮಾಹಿತಿಗೆ ದೂರವಾಣಿ: 080 2656 5677, ಮೊಬೈಲ್: 81975 63498.