![](https://cdn.vvimgs.com/wp-content/uploads/2024/06/Procto-Clinic-Digital-Ad.webp)
ಕಲಬುರಗಿ: ಜಾಗತಿಕವಾಗಿ ಎಲ್ಲರನ್ನೂ ಚಿಂತೆಗೀಡುಮಾಡಿರುವ ಕರೋನಾ ವೈರಸ್ Covid19 ಸೋಂಕು ತಗುಲಿ ತಂದೆ ಮಹ್ಮದ್ ಹುಸೇನ್ ಸಿದ್ಧಿಕಿ ಸಾವನ್ನಪ್ಪಲು ವೈದ್ಯರ ನಿರ್ಲಕ್ಷೃವೇ ಕಾರಣ ಎಂದು ಆರೋಪಿಸುವ ಮೂಲಕ ಖಾಜಿ ಹಾಮೀದ್ ಫೈಸಲ್ ಸಿದ್ಧಿಕಿ ಜಿಲ್ಲಾ ಆರೋಗ್ಯಾಧಿಕಾರಿ ಮತ್ತು ಸರ್ಕಾರಿ ವೈದ್ಯರ ವಿರುದ್ಧ ತಿರುಗಿ ಬಿದ್ದಿದ್ದಾರೆ.
![](https://cdn.vvimgs.com/wp-content/uploads/2024/07/addd.webp)
ತಂದೆ ಸಿದ್ಧಿಕಿ ಜ.20ರಂದು ಸೌದಿಯ ಉಮ್ರಾನ್ಗೆ ತೆರಳಿ ಸಹೋದರನ ಮನೆಯಲ್ಲಿದ್ದರು. ಫೆ.29ರಂದು ಯಾತ್ರೆ ಮುಗಿಸಿ ಕಲಬುರಗಿಗೆ ಮರಳಿದ್ದರು. ಮಾರ್ಚ್ 6ರಂದು ಶೀತ, ಕೆಮ್ಮು, ಜ್ವರ ಕಾಣಿಸಿಕೊಂಡಾಗ ಕುಟುಂಬ ವೈದ್ಯರಲ್ಲಿ ತೋರಿಸಿದೆವು. ಜ್ವರ ಹೆಚ್ಚಾದಾಗ ಖಾಸಗಿ ಆಸ್ಪತ್ರೆಗೆ ದಾಖಲಿಸಲು ಹೋದಾಗ ಅವರ ಔಷಧ ಹಿಡಿಯಲಿಲ್ಲ. ನಂತರ ಮತ್ತೊಂದು ಖಾಸಗಿ ಆಸ್ಪತ್ರೆಗೆ ಸೇರಿಸಿದೆವು. ಒಂದು ದಿನ ನಂತರ ಅವರೂ ಹೈದರಾಬಾದ್ಗೆ ಕರೆದೊಯ್ಯುವಂತೆ ಸೂಚಿಸಿದರು.
ಸೌದಿಯಿಂದ ವಾಪಸಾಗಿದ್ದಾರೆ ಎಂಬ ಏಕೈಕ ಕಾರಣಕ್ಕೆ ಹೈದರಾಬಾದಿನ ಯಾವುದೇ ಆಸ್ಪತ್ರೆಯಲ್ಲಿ ದಾಖಲಿಸಿಕೊಳ್ಳಲಿಲ್ಲ. ಅಂತೂ ಇಂತು ಸುಳ್ಳು ಹೇಳಿ ಕೇರ್ ಆಸ್ಪತ್ರೆಯಲ್ಲಿ ಅಡ್ಮಿಟ್ ಮಾಡಲಾಯಿತು. ಅಡ್ಮಿಟ್ ಆದ ಎರಡು ಗಂಟೆಯಲ್ಲಿ ಅವರಿಗೂ ವಿಷಯ ಗೊತ್ತಾಗಿ ತಂದೆಯನ್ನು ಹೊರಗೆ ಕಳುಹಿಸಿದರು. ಅನಿವಾರ್ಯವಾಗಿ ಕಲಬುರಗಿ ಜಿಮ್ಸ್ಗೆ ಕರೆತರಲಾಯಿತು. ವೈದ್ಯರು ತಪಾಸಣೆ ಮಾಡುವಷ್ಟರಲ್ಲೇ ಕೊನೆಯುಸಿರೆಳೆದಿದ್ದರು ಎಂದು ಹೇಳಿದ್ದಾರೆ.