ಬಾರ್ಬಡೋಸ್: ಇಲ್ಲಿನ ಕೆನ್ಸಿಂಗ್ಟನ್ ಓವಲ್ನಲ್ಲಿ ನಡೆಯುತ್ತಿರುವ ಐಸಿಸಿ ಟಿ20 ವಿಶ್ವಕಪ್ ಫೈನಲ್ ಪಂದ್ಯದಲ್ಲಿ ಭಾರತ ಮತ್ತು ದಕ್ಷಿಣ ಆಫ್ರಿಕಾ ತಂಡಗಳು ಭಾರೀ ಪೈಪೋಟಿಗೆ ಇಳಿದಿದ್ದು, ಟಾಸ್ ಗೆದ್ದು ಮೊದಲು ಬ್ಯಾಟಿಂಗ್ ಆಯ್ಕೆ ಮಾಡಿಕೊಂಡ ಟೀಮ್ ಇಂಡಿಯಾ, ದಕ್ಷಿಣ ಆಫ್ರಿಕಾಗೆ ಬೌಲಿಂಗ್ ಮಾಡುವಂತೆ ತಿಳಿಸಿತು. ನಾಯಕನ ಆಕರ್ಷಕ ಇನ್ನಿಂಗ್ಸ್ ಇಲ್ಲಿಯೂ ನೋಡಬಹುದು ಎಂದು ಅಪಾರ ನಿರೀಕ್ಷೆ ಇಟ್ಟುಕೊಂಡಿದ್ದ ಕ್ರಿಕೆಟ್ ಅಭಿಮಾನಿಗಳಿಗೆ ರೋಹಿತ್ ವಿಕೆಟ್ ಭಾರೀ ಬೇಸರ ಮೂಡಿಸಿತು.
ಇದನ್ನೂ ಓದಿ: ಮರ್ದಾಳ ಜಂಕ್ಷನ್ನಲ್ಲಿ ಹಂಪ್ಸ್ : ಲೋಕೋಪಯೋಗಿ ಇಲಾಖೆ ಇಂಜಿನಿಯರ್ಗೆ ಮನವಿ
ಉತ್ತಮ ಸ್ಟಾರ್ಟ್ ಕೊಟ್ಟ ವಿರಾಟ್ ಕೊಹ್ಲಿ, ಮೊದಲ ಓವರ್ನಲ್ಲಿಯೇ ಮೂರು ಬೌಂಡರಿ ಸಿಡಿಸುವ ಮೂಲಕ 15 ರನ್ಗಳನ್ನು ತಂಡಕ್ಕೆ ತಂದುಕೊಟ್ಟರು. ಈ ವೇಳೆ ಎರಡನೇ ಓವರ್ ಪ್ರಾರಂಭದಲ್ಲಿ ಎರಡು ಬೌಂಡರಿ ಬಾರಿಸಿದ ರೋಹಿತ್, ಕೇಶವ್ ಮಹಾರಾಜ್ಗೆ ಬೌಲಿಂಗ್ನಲ್ಲಿ ತಮ್ಮ ವಿಕೆಟ್ ಕಳೆದುಕೊಂಡರು. 5 ಎಸೆತಗಳಲ್ಲಿ 9 ರನ್ ಕಲೆಹಾಕಿದ ಶರ್ಮ, ಕ್ಲೇಸನ್ಗೆ ಕ್ಯಾಚ್ ಕೊಟ್ಟು, ಪೆವಿಲಿಯನ್ನತ್ತ ಮುಖಮಾಡಿದರು.
ರೋಹಿತ್ ಔಟ್ ಆಗುತ್ತಿದ್ದಂತೆ ಕ್ರೀಸ್ಗೆ ಬಂದ ರಿಷಭ್ ಪಂತ್ ಶೂನ್ಯಕ್ಕೆ ತಮ್ಮ ವಿಕೆಟ್ ಕಳೆದುಕೊಂಡು ಕ್ಯಾಪ್ಟನ್ ಹಾದಿಹಿಡಿದರು. ಎರಡು ಬಾಲ್ ಎದುರಿಸಿದ ಪಂತ್, ಕೇಶವ್ ಮಹಾರಾಜ್ಗೆ ವಿಕೆಟ್ ಒಪ್ಪಿಸಿ, ಮೈದಾನದಿಂದ ಹೊರನಡೆದರು. ಇದು ಟೀಮ್ ಇಂಡಿಯಾ ಅಭಿಮಾನಿಗಳಿಗೆ ಭಾರೀ ಆಘಾತ ಉಂಟುಮಾಡಿತು. ಇವರಿಬ್ಬರ ಬೆನ್ನಲ್ಲೇ ಸೂರ್ಯಕುಮಾರ್ ಯಾದವ್ ಕೂಡ ಕೇವಲ 3 ರನ್ ಗಳಿಸಿ ಪೆವಿಲಿಯನ್ನತ್ತ ಸಾಗಿದ್ದಾರೆ.
ವಿರಾಟ್ ಕೊಹ್ಲಿ ಕಳಪೆ ಫಾರ್ಮ್ಗೆ ಇದೇ ಬಲವಾದ ಕಾರಣ! ಶಾಕಿಂಗ್ ಸಂಗತಿ ತೆರೆದಿಟ್ಟ ರವಿಶಾಸ್ತ್ರಿ