ಹೆಬ್ರಿ: ನಾವು ಸಂಪಾದಿಸಿದ ಸಂಪನ್ಮೂಲದಲ್ಲಿ ಸ್ವಲ್ಪವಾದರೂ ಸಮಾಜಕ್ಕೆ ಬೇಕಾದ ಕೊಡುಗೆ ನೀಡಿದಲ್ಲಿ ಪರಮಾತ್ಮ ಸಂತೃಪ್ತನಾಗುವುದರಲ್ಲಿ ಸಂಶಯವಿಲ್ಲ ಎಂದು ರಾಘವೇಂದ್ರ ಭಟ್ ಹೇಳಿದರು. ಮರ್ಣೆ ಗ್ರಾಪಂಗೆ ಗುಡ್ಡೆಅಂಗಡಿ ಶಾರದ ಮತ್ತು ಶ್ರೀಧರ ಭಟ್ ಸ್ಮರಣಾರ್ಥ ನಿರ್ಮಿಸಿದ ತೆರೆದ ಬಾವಿ ಹಾಗೂ ಕೊಳವೆಬಾವಿ ಲೋಕಾರ್ಪಣೆಗೈದು ಮಾತನಾಡಿದರು.
ಗ್ರಾಪಂ ವತಿಯಿಂದ ರಾಘವೇಂದ್ರ ಭಟ್ ಅವರನ್ನು ಸನ್ಮಾನಿಸಲಾಯಿತು. ಮರ್ಣೆ ಗ್ರಾಪಂ ಅಧ್ಯಕ್ಷೆ ಪ್ರಭಾವತಿ ನಾಯಕ್, ತಾಪಂ ಮಾಜಿ ಉಪಾಧ್ಯಕ್ಷ ಹರೀಶ್ ನಾಯಕ್, ಪ್ರಮುಖರಾದ ಹಿಂದು ಸಮಾಜದ ಮುಖಂಡ ರತ್ನಾಕರ ಅಮೀನ್, ಪಿಡಿಒ ತಿಲಕ್ ರಾಜ್, ಅರುಂಧತಿ, ಜಗನ್ನಾಥ ಶೆಟ್ಟಿ, ಗ್ರಾಪಂ ಸಿಬ್ಬಂದಿ, ಸದಸ್ಯರು ಮತ್ತು ಗ್ರಾಮಸ್ಥರು ಉಪಸ್ಥಿತರಿದ್ದರು. ನಂದ ಕುಮಾರ್ ಹೆಗ್ಡೆ ನಿರೂಪಿಸಿದರು.
ಅಂತರ್ಜಲ ಕುಸಿಯುತ್ತಿರುವ ಕಾರಣ ಬೇಸಿಗೆಯಲ್ಲಿ ನೀರನ್ನು ಮಿತವಾಗಿ ಬಳಸಿ, ಅಲ್ಲದೆ ಯಾವುದೇ ಪ್ರಚಾರ ಬಯಸದೇ ಸದಾ ಸಮಾಜ ಸೇವೆಯಲ್ಲಿ ತನ್ನನ್ನು ತಾನು ತೊಡಗಿಸಿಕೊಂಡಿರು ವಿದ್ವಾನ್ ರಾಘವೇಂದ್ರ ಭಟ್ಟರು ನಮಗೆಲ್ಲಾ ಮಾದರಿ.
-ಪ್ರಭಾವತಿ ನಾಯಕ್ ಮರ್ಣೆ ಗ್ರಾಪಂ ಅಧ್ಯಕ್ಷೆ