ಹೊಸಪೇಟೆ: ಈ ಭಾಗದ ರೈಲ್ವೇ ಬೇಡಿಕೆಗಳಿಗೆ ನೈರುತ್ಯ ರೈಲ್ವೆ ವಲಯ ಬಳಕೆದಾರರ ಸಲಹಾ ಸಮಿತಿಯಿಂದ ಹುಬ್ಬಳ್ಳಿಯಲ್ಲಿ ವಲಯ ಪ್ರಧಾನ ವ್ಯವಸ್ಥಾಪಕರಿಗೆ ಅರವಿಂದ್ ಶ್ರೀವಾಸ್ತವ್ಗೆ ಬುಧವಾರ ಮನವಿ ಸಲ್ಲಿಸಿದರು.
ಕೋವಿಡ್ ಪೂರ್ವದಲ್ಲಿ ಕೊಲ್ಹಾಪುರ-ಹೈದರಬಾದ್ ನಡುವೆ ಖಾಯಂ ಆಗಿ ಸಂಚರಿಸುತ್ತಿದ್ದ ಈ ರೈಲನ್ನು ಕೋವಿಡ್ ನಂತರ ಬೆಳಗಾವಿ-ಹುಬ್ಬಳ್ಳಿ-ಹೊಸಪೇಟೆ-ಹೈದರಬಾದ-ಭದ್ರಾಚಲಂ ನಡುವೆ ವಿಶೇಷ ರೈಲಾಗಿ ಪರಿವರ್ತಿಸಿ ಈಗ ಸಂಚಾರ ನಿಲ್ಲಿಸಲಾಗಿದೆ. ಇದರಿಂದ ಕೊಪ್ಪಳ, ವಿಜಯನಗರ, ಬಳ್ಳಾರಿ ಜಿಲ್ಲೆಗಳಿಂದ ಮಂತ್ರಾಲಯ, ಹೈದರಬಾದ್ ಕಡೆಗೆ ನೇರ ಸಂಪರ್ಕ ಇಲ್ಲದಂತಾಗಿದೆ. ಇದರಿಂದ ರೈಲ ಸಂಚಾರ ಪುನರಾರಂಭಿಸಬೇಕು. ಈ ಮೊದಲು ಹುಬ್ಬಳ್ಳಿ-ಗುಂತಕಲ್ ನಡು ನಡುವೆ ಸಂಚರಿಸುತ್ತಿದ್ದ ರೈಲು ಕಳೆದ ಒಂದು ತಿಂಗಳಿAದ ಯಾವುದೇ ಕಾರಣ ನೀಡದೆ ತೋರಣಗಲ್ವರೆಗೆ ಮಾತ್ರ ಸಂಚರಿಸುತ್ತಿದೆ. ಪ್ರತಿನಿತ್ಯ ಬಳ್ಳಾರಿಗೆ ಹೋಗಿ ಬರುವ ಪ್ರಯಾಣಿಕರಿಗೆ ತೊಂದರೆಯಾಗಿದೆ. ಹಾಗೂ ಹುಬ್ಬಳ್ಳಿ-ವಿಜಯವಾಡ ನಡುವೆ ರಾತ್ರಿ ಸಂಚರಿಸುತ್ತಿದ್ದ ರೈಲು ಒಂದು ತಿಂಗಳಿAದ ರದ್ದಾಗಿದ್ದು ಕೂಡಲೇ ಪುನರಾರಂಭಿಸಬೇಕು ಎಂದು ಆಗ್ರಹಿಸಿದರು.
ನೈರುತ್ಯ ರೈಲ್ವೆ ವಲಯ ಬಳಕೆದಾರರ ಸಲಹಾ ಸಮಿತಿಯ ಸದಸ್ಯ ಬಾಬುಲಾಲ್ ಜೈನ್, ರೈಲ್ವೆ ಸಲಹಾ ಸಮಿತಿಯ ಸದಸ್ಯ ಆದೆಪ್ಪ ಗೌಡ ಇದ್ದರು.