ಹೊಸಪೇಟೆ: ಬೆಲೆ ಏರಿಕೆ, ಹಾಗೂ ನೀಟ್ ಅವ್ಯವಹಾರ ಸಮಗ್ರ ತನಿಖೆಗೆ ಆಗ್ರಹಿಸಿ ಡಿವೈಎಫ್ಐ ಸಂಘಟನೆ ಪದಾಧಿಕಾರಿಗಳು ತಹಸೀಲ್ ಕಚೇರಿ ಮುಂದೆ ಶನಿವಾರ ಪ್ರತಿಭಟನೆ ನಡೆಸಿದರು.
ಅವೈಜ್ಞಾನಿಕವಾಗಿ ಪೆಟ್ರೋಲ್, ಡೀಸೆಲ್, ಹಾಲಿನನ ಬೆಲೆ ಏರಿಸಿರುವ ರಾಜ್ಯ ಸರ್ಕಾರ ಈ ಕೊಡಲೇ ಬೆಲೆ ಇಳಿಸಬೇಕು. ಸಿದ್ದರಾಮಯ್ಯ ನವರು 50 ಲಿಟರ್ ಹಾಲನ್ನು ಉಚಿತ ನೀಡುತೇವೆ ಬೆಲೆ ಏರಿಕೆ ಅಲ್ಲ ಎಂದು ಹೇಳುತ್ತಿದ್ದಾರೆ. ಇದು ನಂಬುವುದಾದರೂ, ಬದಲಿಗೆ ರೈತರಿಗೆ, ರಸ ಗೊಬ್ಬರ, ಬಿತ್ತನೆ ಬೀಜ, ಜಾನುವಾರುಗಳಿಗೆ ಬೇಕಾದ, ಮೇವು, ಪೋಷಣೆಗೆ ಬೇಕಾದ ಚಿಕೆತ್ಸೆ, ಆಹಾರ ಒದಗಿಸಲು ಮುಂದಾಗಬೇಕು. ಈ ಹಿಂದೆ ಬಿಜೆಪಿ ಸರ್ಕಾರ ದ ಬೆಲೆ ಏರಿಕೆಯಿಂದ ತತ್ತರಿಸಿರುವ ಜನರು, ಕಾಂಗ್ರೆಸ್ಗೆ ಅಧಿಕಾರ ನೀಡಿದರು.
ಕಾಂಗ್ರೆಸ್ ನೈಜ ವರ್ತನೆ ಪ್ರದರ್ಶನ ಮಾಡುತ್ತಿದೆ. ಈ ಬಗ್ಗೆ ಜನಪ್ರತಿನಿಧಿ ಧ್ವನಿ ಎತ್ತಬೇಕು. ಬೆಲೆ ಇಳಿಸಲು ಮುಂದಾಗಬೇಕು. ಹಾಗೂ ನೀಟ್ ಪರೀಕ್ಷೆ ಅವ್ಯವಹಾರ ಸಮಗ್ರ ತನಿಖೆ ಆಗಬೇಕು. ರಾಜ್ಯ ಪಠ್ಯ ಕ್ರಮಗಳಂತೆ ನೀಟ್ ಪರೀಕ್ಷೆ ನೆಡೆಸಲು ಮುಂದಾಗಬೇಕು. ಹಿಂದಿನ ಸಿಬಿಎಸ್ ಈ ಪಠ್ಯ ಕ್ರಮದಂತೆ ಪ್ರಶ್ನೆ ಪತ್ರಿಕೆ ತಯಾರಿಸುವ ವಿಧಾನ ಕೈ ಬಿಡ ಬೇಕು. ಆಯಾ ರಾಜ್ಯ ಸರ್ಕಾರಗಳಿಗೆ ಸ್ವತಂತ್ರ ನೀಡಬೇಕು ಎಂದು ಒತ್ತಾಯಿಸಿದರು.
ಪ್ರಮುಖರಾದ ವಿ.ಸ್ವಾಮಿ, ಈಡಿಗರ ಮಂಜುನಾಥ, ಪವನ್, ನಿಖಿಲ್ ಸುಧಾಕರ್, ಬಸವರಾಜ್, ಶಿವು, ದುರ್ಗೆಶ,ಲೋಕೇಶ್ ಇತರರಿದ್ದರು.