More

    ಹಿಂದೂ ಈಕೋಸಿಸ್ಟಮ್ ರಚನೆಗೆ ಎಲ್ಲ ರಾಜ್ಯದಲ್ಲು ಹಿಂದು ರಾಷ್ಟ್ರ ಸಮನ್ವಯ ಸಮಿತಿ

    ಹಿಂದೂ ಈಕೋಸಿಸ್ಟಮ್ ರಚಿಸಲು ಪ್ರತಿಯೊಂದು ರಾಜ್ಯದಲ್ಲಿ ಹಿಂದೂ ರಾಷ್ಟ್ರ ಸಮನ್ವಯ ಸಮಿತಿ ರಚಿಸಿ, ಹಿಂದೂಗಳಿಗೆ ಆಗಿರುವ ಅನ್ಯಾಯದ ವಿರುದ್ಧ ಜನಾಂದೋಲನ ಪ್ರಾರಂಭಿಸುತ್ತಿದ್ದೇವೆ ಎಂದು ಹಿಂದೂ ಜನಜಾಗೃತಿ ಸಮಿತಿಯ ಮಹಾರಾಷ್ಟ್ರ ಮತ್ತು ಛತ್ತೀಸಗಡ ರಾಜ್ಯ ಸಂಚಾಲಕ ಸುನಿಲ ಘನವಟ ತಿಳಿಸಿದರು.

    ಗೋವಾದ ಪೊಂಡಾದಲ್ಲಿ ನಡೆಯುತ್ತಿರುವ ವೈಶ್ವಿಕ ಹಿಂದೂ ರಾಷ್ಟ್ರ ಮಹೋತ್ಸವದ ನಿಮಿತ್ತ ದ ಹೋಟೆಲ್ ಪಾನ್‌ನಲ್ಲಿ ನಡೆದ ಸುದ್ದಿಗೋಷ್ಠಿಯಲ್ಲಿ ಮಾತನಾಡಿದರು.

    ಕಾಶ್ಮೀರ, ಬಂಗಾಳ ಮೊದಲಾದ ಪ್ರಾಂತ್ಯಗಳಲ್ಲಿ ಹಿಂದೂಗಳ ಮೇಲಾಗುತ್ತಿದ್ದ ದೌರ್ಜನ್ಯಗಳು . ಇಂದು ದೇಶಾದ್ಯಂತ ಪ್ರಾರಂಭವಾಗಿದೆ. ಜಾತ್ಯಾತೀತತೆಯ ಹೆಸರಿನಲ್ಲಿ ಮಾಡಲಾಗುವ ಅಲ್ಪಸಂಖ್ಯಾತರ ತುಷ್ಟೀಕರಣ ನಿಲ್ಲಿಸಬೇಕು ಮತ್ತು ಹಿಂದೂ ಸಮಾಜದ ಮೇಲಾಗುತ್ತಿರುವ ಅನ್ಯಾಯಗಳ ವಿರುದ್ಧ ರಾಷ್ಟ್ರಮಟ್ಟದಲ್ಲಿ ಜನಾಂದೋಲನ ಪ್ರಾರಂಭಿಸಿ, ದೇಶಾದ್ಯಂತ ’ಹಿಂದೂ ರಾಷ್ಟ್ರ ನಿರ್ಮಾಣ’ ಕಾರ್ಯಕ್ಕೆ ವೇಗ ನೀಡಲಾಗುವುದು ಎಂದು ಸುದ್ದಿಗೋಷ್ಠಿಯಲ್ಲಿ ಹೇಳಿದರು.

    ಭಾರತ ಮತ್ತು ನೇಪಾಳವನ್ನು ಹಿಂದೂ ರಾಷ್ಟ್ರಗಳೆಂದು ಘೋಷಿಸಬೇಕು.ಕಾಶಿ-ಮಥುರಾ ಮೊದಲಾದ ಹಿಂದೂ ದೇವಸ್ಥಾನಗಳನ್ನು ಅತಿಕ್ರಮಣದಿಂದ ಮುಕ್ತಗೊಳಿಸಿ ಹಿಂದೂಗಳಿಗೆ ವಹಿಸಿ ಕೊಡಬೇಕು. ಮತಾಂತರ ಮತ್ತು ಗೋಹತ್ಯೆಯ ವಿರುದ್ಧ ಕಠಿಣ ಕಾನೂನುಗಳನ್ನು ರಚಿಸಿ ಹಲಾಲ್ ಸರ್ಟಿಫಿಕೇಶನ ನಿರ್ಬಂಧಿಸುವುದರ ಜತೆಗೆ ಹಿಂದೂ ದೇವಸ್ಥಾನಗಳ ಸರಕಾರೀಕರಣ ರದ್ದುಗೊಳಿಸುವಂತೆ ಒತ್ತಾಯಿಸಿದರು.

    ಜನಸಂಖ್ಯೆ ನಿಯಂತ್ರಣ ಕಾನೂನುಗಳನ್ನು ಜಾರಿಗೊಳಿಸಿ ಕಾಶ್ಮೀರಿ ಹಿಂದೂಗಳಿಗೆ ಪುನರ್ವಸತಿ ಕಲ್ಪಿಸಬೇಕು. ಅಲ್ಲದೆ, ಶ್ರೀರಾಮ ಸೇನೆಯ ಪ್ರಮೋದ ಮುತಾಲಿಕ ಇವರ ಮೇಲಿನ ಗೋವಾ ನಿಷೇಧ ತೆರವುಗೊಳಿಸುವುದರ ಜತೆಗೆ ರೋಹಿಂಗ್ಯಾ ಮತ್ತು ಬಾಂಗ್ಲಾದೇಶಿ ನುಸುಳುಕೋರರನ್ನು ಹೊರಹಾಕಬೇಕು ಎಂದು ಆಗ್ರಹಿಸಿದ ಅವರು ಓಟಿಟಿ ಪ್ಲಾಟಫಾರ್ಮ್ಗಳನ್ನು ಕಾನೂನಿನ ವ್ಯಾಪ್ತಿಯಲ್ಲಿ ತರುವುದು ಸೂಕ್ತವಾಗಿದೆ.ಎಂದು ಹೇಳಿದ ಅವರು ಆನ್ಲೈನ್ ರಮ್ಮಿ ಜೂಜಿನ ಆಟಗಳನ್ನು ನಿಷೇಧಿಸುವುದು. ಮುಂತಾದ ವಿಷಯಗಳ ಮೇಲಿನ ಠರಾವುಗಳನ್ನು ಹೊರಡಿಸಿದರು.

    ಹಿಂದೂ ಜನಜಾಗೃತಿ ಸಮಿತಿಯ ಸತ್ಯವಿಜಯ ನಾಯಿಕ ಮಾತನಾಡಿ, ದೇವಸ್ಥಾನಗಳಲ್ಲಿ ಪ್ರಬೋಧನ ಸಭೆ, ದೇಶಾದ್ಯಂತ ಅನೇಕ ಸ್ಥಳಗಳಲ್ಲಿ ರಾಜ್ಯ ಮಟ್ಟದ ಮಂದಿರ ಪರಿಷತ್ತು ಆಯೋಜಿಸಬೇಕು. ಲವ್ ಜಿಹಾದ ಹಾಗೆಯೇ ಹಲಾಲ ಜಿಹಾದ ಸಂದರ್ಭದಲ್ಲಿ ಜನಜಾಗೃತಿ ಸಭೆಗಳನ್ನು ನಡೆಸಬೇಕು. ಅಲ್ಲದೆ, ಹಿಂದೂ ಧರ್ಮದ ಮೇಲೆ ನಾಟಕ, ಚಲನಚಿತ್ರ ಅಥವಾ ಇನ್ನಿತರ ಯಾವುದೇ ಮಾಧ್ಯಮದ ಮೂಲಕ ದಾಳಿ ನಡೆಸಿದರೆ ಅದನ್ನು ತೀವ್ರವಾಗಿ ವಿರೋಧಿಸುವುದು ನಮ್ಮ ಕರ್ತವ್ಯ ಎಂದು ಹೇಳಿದರು.

    ಗೋಮಾಂತಕ ಮಂದಿರ ಮಹಾಸಂಘದ ಕಾರ್ಯದರ್ಶಿ ಜಯೇಶ ಥಳಿ ಮಾತನಾಡಿ, ಕಳೆದ ಎರಡು ವರ್ಷಗಳಲ್ಲಿ ಅಧಿವೇಶನದ ಮೂಲಕ ಮಂದಿರ ಸಂಸ್ಕೃತಿ ರಕ್ಷಾ ಅಭಿಯಾನ ನಡೆಸಲಾಗಿದೆ. ಈ ಮೂಲಕ 710 ದೇವಸ್ಥಾನಗಳಲ್ಲಿ ವಸ್ತ್ರ ಸಂಹಿತೆ ಜಾರಿ ಮಾಡಲಾಗಿದ್ದು, ಇನ್ನುಳಿದ ದೇವಸ್ಥಾನಗಳಲ್ಲೂ ವಸ್ತ್ರ ಸಂಹಿತೆ ಜಾರಿಗೊಳಿಸಲು ಪ್ರಯತ್ನಿಸಲಾಗುತ್ತಿದೆ. ಮಂದಿರ ಮಹಾಸಂಘದ ವತಿಯಿಂದ ದೇಶಾದ್ಯಂತ 14 ಸಾವಿರ ದೇವಸ್ಥಾನಗಳ ಸಂಘಟನೆಯಾಗಿದೆ ಎಂದು ತಿಳಿಸಿದರು.

    ಹಿಂದೂ ವಿಧಿಜ್ಞ ಪರಿಷತ್ತು ಗೋವಾ ರಾಜ್ಯ ಕಾರ್ಯದರ್ಶಿ ನಾಗೇಶ ಜೋಶಿ ಮಾತನಾಡಿ, ಕಾಶಿ, ಮಥುರಾ, ಭೋಜಶಾಲಾ ಮುಂತಾದ ಪ್ರಮುಖ ಹಿಂದೂ ದೇವಸ್ಥಾನಗಳ ವಿಮೋಚನೆಗಾಗಿ ಹೋರಾಟ ನಡೆಯುತ್ತಿದೆ. ಪ್ರಸ್ತುತ, ದೇಶಾದ್ಯಂತ ಹಿಂದುತ್ವನಿಷ್ಠರಿಗೆ ’ದ್ವೇಷ-ಭಾಷಣ’ದ ಸುಳ್ಳು ಪ್ರಕರಣಗಳಲ್ಲಿ ಸಿಲುಕಿಸುವ ಹುನ್ನಾರ ಮಾಡುತ್ತಿದ್ದಾರೆ. ‘ಇಕೊಸಿಸ್ಟಮ್ ಕಾರ್ಯನಿರತವಾಗಿದ್ದು, ಅದು ಹಿಂದೂ ಧರ್ಮದ ಮೇಲೆ ದಾಳಿ ಮಾಡಲು ಪ್ರಯತ್ನ ಮಾಡುತ್ತಿದೆ ಎಂದು ಆರೋಪಿಸಿದರು.

    12ನೇ ಅಖಿಲ ಭಾರತೀಯ ಹಿಂದೂ ರಾಷ್ಟ್ರ ಅಧಿವೇಶನ ಅಂದರೆ ವೈಶ್ವಿಕ ಹಿಂದೂ ರಾಷ್ಟ್ರ ಮಹೋತ್ಸವದಲ್ಲಿ ಅಂಗೀಕರಿಸಲಾದ ಠರಾವ್‌ಗಳು

    1. ಭಾರತದ ಬಹುಸಂಖ್ಯಾತ ಹಿಂದೂಗಳಿಗೆ ನ್ಯಾಯ ನೀಡಲು ಸಂವಿಧಾನದಿಂದ ’ಜಾತ್ಯತೀತ’ ಮತ್ತು ’ಸಮಾಜವಾದ’ ಪದಗಳನ್ನು ತೆಗೆದು, ಅಲ್ಲಿ ’ಆಧ್ಯಾತ್ಮಿಕ’ ಪದವನ್ನು ಸೇರಿಸಿ ಭಾರತವನ್ನು ’ಹಿಂದೂ ರಾಷ್ಟ್ರ’ ಎಂದು ಘೋಷಿಸಬೇಕು !

    2. ’ನೇಪಾಳವನ್ನು ಹಿಂದೂ ರಾಷ್ಟ್ರವಾಗಿ ಘೋಷಿಸಬೇಕು’ ಎಂಬ ಬೇಡಿಕೆಗೆ ಈ ಅಧಿವೇಶನದಲ್ಲಿ ಸಂಪೂರ್ಣ ಬೆಂಬಲ ನೀಡಲಾಗಿದೆ.

    3. ಹಿಂದೂಗಳ ಮೂಲಭೂತ ಹಕ್ಕುಗಳನ್ನು ದಮನಿಸುವ ’ಪ್ಲೇಸೆಸ್ ಆಫ್ ವರ್ಷಿಪ್ ಆಕ್ಟ್ 1991’ ಕಾನೂನನ್ನು ತಕ್ಷಣ ರದ್ದುಗೊಳಿಸಿ, ಕಾಶಿ, ಮಥುರಾ, ತಾಜಮಹಲ್, ಭೋಜಶಾಲಾ ಮುಂತಾದ ಮೊಗಲ್ ಆಕ್ರಮಣಕಾರರು ಕಬಳಿಸಿರುವ ದೇವಸ್ಥಾನಗಳು ಮತ್ತು ಭೂಮಿಯನ್ನು ಪುನಃ ಹಿಂದೂಗಳ ನಿಯಂತ್ರಣಕ್ಕೆ ನೀಡಬೇಕು.

    4. ಸರಕಾರದ ನಿಯಂತ್ರಣದಲ್ಲಿರುವ ದೇಶಾದ್ಯಾಂತದ ಎಲ್ಲಾ ದೇವಸ್ಥಾನಗಳನ್ನು ಸರಕಾರದ ನಿಯಂತ್ರಣದಿಂದ ಮುಕ್ತಗೊಳಿಸಿ ಭಕ್ತರ ಕೈಗೆ ನೀಡಬೇಕು.

    5. ದೇವಸ್ಥಾನಗಳಿರುವ ಪ್ರದೇಶವನ್ನು ’ಮದ್ಯ-ಮಾಂಸ’ ಮಾರಾಟದಿಂದ ಮುಕ್ತಗೊಳಿಸಬೇಕು.

    6. ಕೇಂದ್ರ ಸರಕಾರವು ದೇಶಾದ್ಯಾಂತ ’ಗೋಹತ್ಯೆ ನಿಷೇಧ’ ಮತ್ತು ’ಮತಾಂತರ ನಿಷೇಧ’ ಕಾನೂನುಗಳನ್ನು ಜಾರಿಗೊಳಿಸಬೇಕು. ಮತಾಂತರವನ್ನು ತಡೆಗಟ್ಟಲು ಸಂವಿಧಾನದ ಪರಿಚ್ಛೇದ 25 ರಲ್ಲಿ ಸುಧಾರಣೆ ಮಾಡಿ ಅದರಲ್ಲಿ ಧರ್ಮದ ಪ್ರಚಾರ ಶಬ್ದವನ್ನು ತೆಗೆಯಬೇಕು

    7. ಧಾರ್ಮಿಕತೆಯ ಆಧಾರದ ಮೇಲೆ ’ಹಲಾಲ್ ಪ್ರಮಾಣಪತ್ರ’ ತಕ್ಷಣ ನಿಷೇಧಿಸಬೇಕು. ಭಾರತದಲ್ಲಿ ಎಫ್.ಎಸ್.ಎಸ್.ಎ.ಐ. ಮತ್ತು ಎ್.ಡಿ.ಎ. ಯಂತಹ ಸರಕಾರಿ ಸಂಸ್ಥೆಗಳಿರುವಾಗಲೂ ಧಾರ್ಮಿಕ ಆಧಾರದಲ್ಲಿ ಸಮಾನಾಂತರ ಅರ್ಥವ್ಯವಸ್ಥೆಯನ್ನು ನಿರ್ಮಾಣ ಮಾಡುವ ಹಲಾಲ ಸರ್ಟಿಫಿಕೇಶನ್ ನ ಮೇಲೆ ತಕ್ಷಣ ನಿರ್ಬಂಧ ಹೇರಬೇಕು

    8. ವಕ್ಫ್ ಮಂಡಳಿಯ ಕಾನೂನನ್ನು ತಕ್ಷಣ ರದ್ದುಗೊಳಿಸಬೇಕು ಮತ್ತು ಈ ಮಂಡಳಿಯಿಂದ ಔಚ್ಞ ಒಛಿ ಮೂಲಕ ಅತಿಕ್ರಮಿಸಿರುವ ಎಲ್ಲಾ ಭೂಮಿಯನ್ನು ವಕ್ಫ್ ಮುಕ್ತಗೊಳಿಸಬೇಕು.

    9. ಭಾರತದ ವಿರುದ್ಧ ಯುದ್ಧಮಾಡಲು ಗಝವಾ-ಎ-ಹಿಂದ್ ನ ಫತ್ವಾ ಜ್ಯಾರಿಗೊಳಿಸಿದ ದಾರುಲ್ ಉಲೂಮ ದೇವಬಂದ ಈ ಸಂಘಟನೆಯನ್ನು ತಕ್ಷಣ ನಿರ್ಬಂಧಿಸಬೇಕು

    10.ಗೋವಾದಲ್ಲಿ ’ಇನ್ಕ್ವಿಜಿಷನ್’ ಅಡಿಯಲ್ಲಿ 250 ವರ್ಷಗಳಿಂದ ಗೋಮಂತಕರ ಮೇಲೆ ನಡೆದ ಅಮಾನವೀಯ ಮತ್ತು ಕ್ರೂರ ಅತ್ಯಾಚಾರಗಳ ಕುರಿತು ಕ್ರೈಸ್ತ ಧರ್ಮಗುರು ಪೋಪ್ ಅವರು ಗೋವಾದ ಜನತೆಯಲ್ಲಿ ಕ್ಷಮೆ ಕೇಳಬೇಕು.

    11. ಕಾಶ್ಮೀರ ಕಣಿವೆಯಲ್ಲಿ ’ಪನುನ್ ಕಾಶ್ಮೀರ’ ಹೆಸರಿನ ಕೇಂದ್ರಾಡಳಿತ ಪ್ರದೇಶವನ್ನು ಸೃಷ್ಟಿಸಿ, ಸ್ಥಳಾಂತರಗೊಂಡಿರುವ ಕಾಶ್ಮೀರಿ ಹಿಂದೂಗಳಿಗೆ ಅಲ್ಲಿ ಪುನರ್ವಸತಿ ಕಲ್ಪಿಸಬೇಕು.

    12. ಪಾಕಿಸ್ತಾನ, ಬಾಂಗ್ಲಾದೇಶ ಮತ್ತು ಶ್ರೀಲಂಕಾದಲ್ಲಿ ಹಿಂದೂಗಳ ಮೇಲೆ ನಡೆದ ಅತ್ಯಾಚಾರದ ಬಗ್ಗೆ ಅಂತಾರಾಷ್ಟ್ರೀಯ ಮಾನವ ಹಕ್ಕು ಸಂಘಟನೆಗಳು ಮತ್ತು ಭಾರತದ ಸರಕಾರವು ವಿಚಾರಣೆ ನಡೆಸಿ, ಅಲ್ಲಿನ ಅಲ್ಪಸಂಖ್ಯಾತ ಹಿಂದೂಗಳ ರಕ್ಷಣೆ ಮಾಡಬೇಕು.

    13. ಭಾರತದಲ್ಲಿ ಅಕ್ರಮವಾಗಿ ಪ್ರವೇಶಿಸಿರುವ ರೋಹಿಂಗ್ಯಾ ಮತ್ತು ಬಾಂಗ್ಲಾದೇಶಿ ಮುಸ್ಲಿಮರನ್ನು ವಾಪಾಸು ಕಳಿಸಲು ಸರಕಾರವು ಕಠಿಣ ಕಾನೂನನ್ನು ಜಾರಿಗೊಳಿಸಬೇಕು. ಪೌರತ್ವ ತಿದ್ದುಪಡಿ ಕಾನೂನನ್ನು ತಕ್ಷಣ ಅನುಷ್ಠಾನಕ್ಕೆ ತರಬೇಕು.

    14. ಕಳೆದ ಕೆಲವು ವರ್ಷಗಳಿಂದ ಅಹಿಂದೂಗಳ ಜನಸಂಖ್ಯೆಯಲ್ಲಾಗುತ್ತಿರುವ ಹೆಚ್ಚಳವನ್ನು ಗಮನದಲ್ಲಿರಿಸಿ ದೇಶದಲ್ಲಿ ಎಲ್ಲ ಧರ್ಮೀಯರ ಸಂಖ್ಯೆಯನ್ನು ಸಂತುಲನ ಗೊಳಿಸಲು ದೇಶದಲ್ಲಿ ತಕ್ಷಣ ’ಜನಸಂಖ್ಯೆ ನಿಯಂತ್ರಣ ಕಾನೂನು’ ಜಾರಿಗೊಳಿಸಬೇಕು.

    15. ಮಾನವೀಯತೆಯ ದೃಷ್ಟಿಯಿಂದ ಮತ್ತು ಸಂವಿಧಾನಾತ್ಮಕ ಅಧಿಕಾರಗಳ ವಿಚಾರವನ್ನು ಮಾಡಿ ಗೋವಾದ ಮುಖ್ಯಮಂತ್ರಿ ಶ್ರೀ ಪ್ರಮೋದ ಸಾವಂತರು, ಕರ್ನಾಟಕದ ಶ್ರೀರಾಮ ಸೇನೆಯ ಅಧ್ಯಕ್ಷ ಶ್ರೀ. ಪ್ರಮೋದ ಮುತಾಲಿಕ್ ಅವರ ಮೇಲೆ ಗೋವಾ ರಾಜ್ಯವು ಹೇರಿರುವ ಪ್ರವೇಶ ನಿರ್ಬಂಧವನ್ನು ತೆಗೆದುಹಾಕಬೇಕು.

    16. ’ಒಟಿಟಿ’ ಮತ್ತು ’ವೆಬ್ ಸೀರೀಸ್’ ಕಾನೂನಿನ ವ್ಯಾಪ್ತಿಗೆ ಸೇರಿಸಿ, ಚಲನಚಿತ್ರ ಸಂಸರ್ ಮಂಡಳಿಯಲ್ಲಿ ಹಿಂದೂ ಮತ್ತು ಆಧ್ಯಾತ್ಮಿಕ ಸಂಘಟನೆಗಳ ಪ್ರತಿನಿಧಿಗಳನ್ನು ಸೇರಿಸಬೇಕು.

    17. ಆನ್ ಲೈನ್ ಮಾಧ್ಯಮಗಳಲ್ಲಿ ’ರಮಿ ಸರ್ಕಲ್’, ’ಜುಗಾರ ಜಾಹೀರಾತು’ ಗಳು ಯುವ ಜನತೆಯನ್ನು ತಪ್ಪು ಮಾರ್ಗದಲ್ಲಿ ಸಾಗುವ ತಕ್ಷಣ ನಿಷೇಧಿಸುವುದು.

    ಸಿನಿಮಾ

    ಲೈಫ್‌ಸ್ಟೈಲ್

    ಟೆಕ್ನಾಲಜಿ

    Latest Posts