More

    ಹೊಸ ಕಟ್ಟಡ ಕಾಮಗಾರಿ ವಿಳಂಭಕ್ಕೆ ಸಚಿವರ ಬೇಸರ; ಜಿಲ್ಲಾಸ್ಪತ್ರೆಗೆ ಶಿವಾನಂದ ಪಾಟೀಲ ದಿಢೀರ್ ಭೇಟಿ; ಹೆಚ್ಚುವರಿ ಬೆಡ್, ವೈದ್ಯರು, ಸಿಬ್ಬಂದಿಯ ಪರಿಶೀಲನೆ

    ಹಾವೇರಿ: ಇಲ್ಲಿನ ಹಳೇ ಪಿಬಿ ರಸ್ತೆಯಲ್ಲಿರುವ ಸಾರ್ವಜನಿಕ ಜಿಲ್ಲಾ ಆಸ್ಪತ್ರೆಗೆ ಜಿಲ್ಲಾ ಉಸ್ತುವಾರಿ ಸಚಿವ ಶಿವಾನಂದ ಪಾಟೀಲರು ಸೋಮವಾರ ದಿಢೀರ್ ಭೇಟಿ ನೀಡಿ ಪರಿಶೀಲಿಸಿದರು. ಆಸ್ಪತ್ರೆಯ ನೂತನ ಕಟ್ಟಡ ಕಾಮಗಾರಿ, ಐಸಿಯು, ಒಪಿಡಿ, ವಿವಿಧ ವಾರ್ಡುಗಳಿಗೆ ಭೇಟಿ ನೀಡಿ ಪರಿಶೀಲಿಸಿದರು. ಮೂರನೇ ಮಹಡಿ ಕಟ್ಟಡ ಕಾಮಗಾರಿ ವಿಳಂಭ ಹಿನ್ನೆಲೆ ಗುತ್ತಿಗೆದಾರರ ವಿರುದ್ಧ ಬೇಸರ ವ್ಯಕ್ತಪಡಿಸಿದರು.
    ಕಳೆದ ಬಾರಿ ಮುಖ್ಯಮಂತ್ರಿ ಅವರು ಆಸ್ಪತ್ರೆಗೆ ಭೇಟಿ ನೀಡಿದ್ದ ಸಂದರ್ಭದಲ್ಲೇ ಗುತ್ತಿಗೆದಾರರಿಗೆ ಎಚ್ಚರಿಕೆ ನೀಡಲಾಗಿತ್ತು. ಅವಧಿಯೊಳಗೆ ಕಾಮಗಾರಿ ಪೂರ್ಣಗೊಳಿಸುವಂತೆ ಸೂಚಿಸಲಾಗಿತ್ತು. ಗುತ್ತಿಗೆದಾರರ ವಿರುದ್ಧ ಕ್ರಮ ಕೈಗೊಳ್ಳುವಂತೆ ನಾನು ಭೇಟಿ ನೀಡಿದ ಸಂದರ್ಭದಲ್ಲಿ ಸೂಚಿಸಿದ್ದೆ. ಈ ಕುರಿತು ಮಾಹಿತಿ ನೀಡುವಂತೆ ಸೂಚಿಸಿದರು.
    ಆಸ್ಪತ್ರೆಯ ಬೆಡ್ ಹಾಗೂ ವೈದ್ಯರ ಕುರಿತು ಅಧಿಕಾರಿಗಳೊಂದಿಗೆ ಮಾಹಿತಿ ಪಡೆದರು. ಸದ್ಯ ಜಿಲ್ಲಾಸ್ಪತ್ರೆಯಲ್ಲಿ 270, ಎಂಸಿಎಚ್‌ನಲ್ಲಿ 100 ಸೇರಿ 340ಕ್ಕೂ ಅಧಿಕ ಬೆಡ್ ಲಭ್ಯವಿದೆ. ಹೊಸ ಕಟ್ಟಡ ಪೂರ್ಣಗೊಂಡ ನಂತರ ಮತ್ತೆ 100 ಬೆಡ್ ಸೌಲಭ್ಯ ಸಿಗಲಿದೆ. ಸದ್ಯಕ್ಕೆ ವೈದ್ಯರ ಕೊರತೆ ಇಲ್ಲ ಎಂದು ಆಸ್ಪತ್ರೆಯ ಆರ್‌ಎಂಒ ಡಾ.ಪರಸಪ್ಪ ಚುರ್ಚಿಹಾಳ ಮಾಹಿತಿ ನೀಡಿದರು.
    ಡೆಂೆ ಕೇಸ್‌ಗಳ ಸ್ಥಿತಿಗತಿ, ಮಹಿಳಾ ಮತ್ತು ಮಕ್ಕಳ ಆಸ್ಪತ್ರೆ ಕಟ್ಟಡ ಕಾಮಗಾರಿ, ನರ್ಸಿಂಗ್ ಕಾಲೇಜ್, ಕಣ್ಣಿನ ವಾರ್ಡ್, ಹೊರ ರೋಗಿಗಳ ಸಂಖ್ಯೆ, ಮತ್ತಿತರ ಅಂಶಗಳ ಕುರಿತು ಅಧಿಕಾರಿಗಳ ಜತೆಗೆ ಸಚಿವರು ಚರ್ಚಿಸಿದರು. ನೂತನ ಕಣ್ಣಿನ ವಾರ್ಡ್ ದೊಡ್ಡದಾಗಿದ್ದು, ಅಗತ್ಯವಿಲ್ಲ ಎಂದರೆ ಬೇರೆಡೆ ವರ್ಗಾಯಿಸಿ ಎಂದು ಸೂಚಿಸಿದರು. ಜಿಲ್ಲಾ, ತಾಲೂಕು ಆಸ್ಪತ್ರೆಗಳು, ಹೆರಿಗೆ ಆಸ್ಪತ್ರೆಗಳ ಬಗೆಗೆ ಮಾಹಿತಿ ಕಲೆ ಹಾಕಿದರು.
    ಸದ್ಯ ಜಿಲ್ಲೆಯಲ್ಲಿ ಈವರೆಗೆ 463 ಡೆಂೆ ಕೇಸ್ ಪತ್ತೆಯಾಗಿದ್ದು, 463 ರೋಗಿಗಳು ಗುಣಮುಖರಾಗಿದ್ದಾರೆ. ಜಿಲ್ಲಾಸ್ಪತ್ರೆಯಲ್ಲಿ 4, ಕೆಎಂಸಿಯಲ್ಲಿ ಇಬ್ಬರು ಚಿಕಿತ್ಸೆ ಪಡೆಯುತ್ತಿದ್ದಾರೆ. ಡೆಂೆಗೆ ಈವರೆಗೆ ಓರ್ವ ರೋಗಿ ಮೃತಪಟ್ಟಿದ್ದಾರೆ ಎಂದು ಡಿಎಚ್‌ಒ ಡಾ.ಜಯಾನಂದ ತಿಳಿಸಿದರು.
    ಶಾಸಕ ರುದ್ರಪ್ಪ ಲಮಾಣಿ, ಜಿಲ್ಲಾಧಿಕಾರಿ ರಘುನಂದನ ಮೂರ್ತಿ, ಜಿಲ್ಲಾ ಪಂಚಾಯಿತಿ ಸಿಇಒ ಅಕ್ಷಯ ಶ್ರೀಧರ, ಜಿಲ್ಲಾ ಆರೋಗ್ಯಾಧಿಕಾರಿ ಡಾ.ಜಯಾನಂದ, ಮೆಡಿಕಲ್ ಕಾಲೇಜ್ ಡೀನ್ ಡಾ.ಪ್ರದೀಪಕುಮಾರ, ಜಿಲ್ಲಾಸ್ಪತ್ರೆ ವೈದ್ಯಾಧಿಕಾರಿ ಡಾ.ಪರಸಪ್ಪ ಚುರ್ಚಿಹಾಳ, ಮತ್ತಿತರ ಅಧಿಕಾರಿ, ಸಿಬ್ಬಂದಿ ಹಾಜರಿದ್ದರು.
    ವೈದ್ಯರ ಮೇಲೆ ನಿಗಾ ಇಡಿ
    ಜಿಲ್ಲಾಸ್ಪತ್ರೆಯ ಒಪಿಡಿ ವಿಭಾಗದಲ್ಲಿ ಇಬ್ಬರು ವೈದ್ಯರು ಗೈರಾಗಿದ್ದ ಕುರಿತು ವಿಚಾರಿಸಿದ ಸಚಿವರು, ಇಲ್ಲಿ ಸೇವೆ ಸಲ್ಲಿಸುವ ವೈದ್ಯರು ಸಮಯಕ್ಕೆ ಸರಿಯಾಗಿ ಬರುತ್ತಾರೋ ಇಲ್ಲವೋ ? ವೈದ್ಯರ ಸಮಯ, ಕರ್ತವ್ಯ ಪಾಲನೆ ಕುರಿತು ಪರಿಶೀಲಿಸಿ, ಮಾಹಿತಿ ಕೊಡಿ ಎಂದು ಅಧಿಕಾರಿಗಳಿಗೆ ಸಚಿವರು ಸೂಚಿಸಿದರು.

    ಸಿನಿಮಾ

    ಲೈಫ್‌ಸ್ಟೈಲ್

    ಟೆಕ್ನಾಲಜಿ

    Latest Posts