More

    ಹಿರಿಯೂರು ತೋಟದ ಮನೆ ಬಳಿ ಕರಡಿ ದರ್ಶನ

    ಹಿರಿಯೂರು: ತಾಲೂಕಿನ ವಾಣಿವಿಲಾಸಪುರ ಗ್ರಾಮದ ನಟರಾಜ್ ಅವರ ತೋಟದ ಮನೆಯ ಎದುರು ತಡರಾತ್ರಿ ಕರಡಿ ಪ್ರತ್ಯಕ್ಷವಾಗಿದ್ದು, ಗ್ರಾಮಸ್ಥರಲ್ಲಿ ಆತಂಕ ಮೂಡಿಸಿದೆ.

    ತೋಟದಲ್ಲಿರುವ ಮನೆಯ ಮುಂದಿನ ಕಾಂಪೌಂಡ್ ಹಾರಿ, ಬಾಗಿಲ ಬಳಿ ಕ್ಷಣಕಾಲ ಕುಳಿತು, ನಂತರ ಮುಂಭಾಗದಲ್ಲಿ ಓಡಾಟ ನಡೆಸಿರುವ ದೃಶ್ಯ ಸಿಸಿ ಟಿವಿಯಲ್ಲಿ ಸೆರೆಯಾಗಿದೆ.

    ಕರಡಿ ಮನೆಯೊಳಗೆ ಹೋಗಲು ಪ್ರಯತ್ನಿಸಿದೆ. ಬಾಗಿಲು ಹಾಕಿದ್ದರಿಂದ ಮನೆ ಅಂಗಳದಲ್ಲಿ ಸುತ್ತಾಡಿಕೊಂಡು ಹೊರಟುಹೋಗಿದೆ.

    ಕಾರ್ಯಾಚರಣೆ ಪ್ರಗತಿಯಲ್ಲಿ

    ಕಳೆದ ಎರಡ್ಮೂರು ತಿಂಗಳಿನಿಂದ ತಾಲೂಕಿನಲ್ಲಿ ಹಲವೆಡೆ ಕರಡಿ ದರ್ಶನವಾಗುತ್ತಿದೆ ಎಂದು ವಲಯ ಅರಣ್ಯಾಧಿಕಾರಿ ಬಿ.ಶಶಿಧರ್ ತಿಳಿಸಿದ್ದಾರೆ.

    ಇತ್ತೀಚೆಗಷ್ಟೇ ತಾಲೂಕಿನ ಮೇಟಿಕುರ್ಕೆ, ಸೂರಗೊಂಡನಹಳ್ಳಿ, ತವಂದಿ ಗ್ರಾಮದ ಬಳಿ ಕರಡಿ ಕಾಣಿಸಿಕೊಂಡಿತ್ತು. ಸಿಬ್ಬಂದಿಯೊಂದಿಗೆ ಕರಡಿ ಹಿಡಿಯಲು ಮುಂದಾದಾಗ ಗೌನಹಳ್ಳಿ ಅರಣ್ಯ ಪ್ರದೇಶದ ಕಡೆ ಹೋಗಿದ್ದು, ಶುಕ್ರವಾರ ತಡರಾತ್ರಿ ವಿ.ವಿ.ಪುರ ಗ್ರಾಮದಲ್ಲಿ ಕರಡಿ ಕಾಣಿಸಿಕೊಂಡ ಹಿನ್ನೆಲೆಯಲ್ಲಿ ಸಿಬ್ಬಂದಿ ಕಾರ್ಯಪ್ರವೃತ್ತರಾಗಿದ್ದಾರೆ ಎಂದು ಹೇಳಿದ್ದಾರೆ.

    ಸಿನಿಮಾ

    ಲೈಫ್‌ಸ್ಟೈಲ್

    ಟೆಕ್ನಾಲಜಿ

    Latest Posts