ಹೆಬ್ರಿ: ಎಚ್ಸಿಎಲ್ ಫೌಂಡೇಶನ್ ಆಂಧ್ರಪ್ರದೇಶದ ಗುಂಟೂರು ಆಚಾರ್ಯ ನಾಗಾರ್ಜುನ ವಿಶ್ವವಿದ್ಯಾಲಯದಲ್ಲಿ ಜೂನ್ 20-21ರಂದು ನಡೆದ ದಕ್ಷಿಣ ಭಾರತ ವಲಯ ಚಾಂಪಿಯನ್ಷಿಪ್ ಸ್ಪೋರ್ಟ್ಸ್ ಫೋರ್ ಚೇಂಜ್ 2024ರಲ್ಲಿ ಕರ್ನಾಟಕವನ್ನು ಪ್ರತಿನಿಧಿಸಿ ರಾಷ್ಟ್ರಮಟ್ಟಕ್ಕೆ ಉಡುಪಿ ಜಿಲ್ಲೆ ಸರ್ಕಾರಿ ಪ್ರೌಢ ಮತ್ತು ಪ್ರಾಥಮಿಕ ಶಾಲಾ ವಿದ್ಯಾರ್ಥಿಗಳು ಆಯ್ಕೆಯಾಗಿದ್ದಾರೆ.
ಕಾರ್ಕಳ ಪೆರ್ವಾಜೆ ಸುಂದರ ಪುರಾಣಿಕ ಸ್ಮಾರಕ ಸರ್ಕಾರಿ ಪ್ರೌಢಶಾಲೆ ಇಲಾಂಗ್ ಬಮ್ ನಾನ್ ತೋಯಿ ದೇವಿ(ಚೆಸ್), ಧನುಷ್ (ಬ್ಯಾಡ್ಮಿಂಟನ್), ಅಮೋಘ(ಟೇಬಲ್ ಟೆನ್ನಿಸ್), ಸಿಂಚನಾ(ಟೇಬಲ್ ಟೆನಿಸ್). ಗುಂಡ್ಮಿ ಸರ್ಕಾರಿ ಹಿರಿಯ ಪ್ರಾಥಮಿಕ ಶಾಲೆಯ ಚಿನ್ಮಯಿ (60 ಮೀಟರ್ ರನ್ನಿಂಗ್ರೇಸ್), ಮಣಿಪುರ ಸರ್ಕಾರಿ ಹಿರಿಯ ಪ್ರಾಥಮಿಕ ಶಾಲೆಯ ರಿಂಕ ಚೌದರಿ (ಉದ್ದ ಜಿಗಿತ), ಶೇಕ್ ಮಹಮ್ಮದ್ ಅಲ್ಫಾಜ್(ಗುಂಡು ಎಸೆತ), ಹೃತ್ವೀಕ್(ಎತ್ತರ ಜಿಗಿತ), ಭುವನೇಂದ್ರ ಆಚಾರ್ಯ(ಕೇರಂ), ಅರಮನೆ ಒಕ್ಕಲು ಸರ್ಕಾರಿ ಹಿರಿಯ ಪ್ರಾಥಮಿಕ ಶಾಲೆಯ ಜುನೈದ್(60 ಮೀಟರ್ ರನ್ನಿಂಗ್ ರೇಸ್) ಕರ್ನಾಟಕ ಪಬ್ಲಿಕ್ ಸ್ಕೂಲ್ ಹಿರಿಯಡ್ಕದ ಪ್ರೇಕ್ಷಾ(600 ಮೀಟರ್ ರನ್ನಿಂಗ್ ರೇಸ್), ದೀಕ್ಷಿತ್(ವಾಲಿಬಾಲ್), ಅಲ್ಬಾಡಿ ಆರ್ಡಿ ಸರ್ಕಾರಿ ಪ್ರೌಢಶಾಲೆಯ ನಂದನ (ಎತ್ತರ ಜಿಗಿತ), ಆದಿತ್ಯ (600 ಮೀಟರ್ ರನ್ನಿಂಗ್ ರೇಸ್), ಒಳಕಾಡು ಸರ್ಕಾರಿ ಮಾದರಿ ಹಿರಿಯ ಪ್ರಾಥಮಿಕ ಶಾಲೆಯ ರಶ್ಮಿತಾ (ಗುಂಡು ಎಸೆತ), ಆಲೂರು ಸರ್ಕಾರಿ ಹಿರಿಯ ಪ್ರಾಥಮಿಕ ಶಾಲೆಯ ನಿತೇಶ್( ಟ್ರೈಲ್ತಾನ್), ಬ್ರಹ್ಮಾವರ ಸರ್ಕಾರಿ ಮಾದರಿ ಹಿರಿಯ ಪ್ರಾಥಮಿಕ ಶಾಲೆಯ ಆಯುಷ್ ಎಸ್.ಅಮೀನ್(ಗುಂಡು ಎಸೆತ), ಗೌತಮ್(ಬಾಲ್ ತ್ರೋ), ಮೂಡುಗಿಳಿಯಾರು ಸರ್ಕಾರಿ ಹಿರಿಯ ಪ್ರಾಥಮಿಕ ಶಾಲೆಯ ಸಲ್ಮಾನ್ (ಬಾಲ್ ತ್ರೋ), ಬಸ್ರೂರು ಸರ್ಕಾರಿ ಪ್ರೌಢಶಾಲೆಯ ರಿತೇಶ್(ಟರ್ರಲ್ತಾನ್)ತಲ್ಲೂರು ಸರ್ಕಾರಿ ಹಿರಿಯ ಪ್ರಾಥಮಿಕ ಶಾಲೆಯ ಕಾವ್ಯ (ಬ್ಯಾಡ್ಮಿಂಟನ್), ಬ್ರಹ್ಮಾವರ ಸರ್ಕಾರಿ ಪದವಿ ಪೂರ್ವ ಶಾಲೆಯ ಶಮಿತ್(ವಾಲಿಬಾಲ್)ನಲ್ಲಿ ಆಯ್ಕೆಯಾಗಿದ್ದಾರೆ.
ಕಾರ್ಕಳ ಪೆರ್ವಾಜೆ ಸುಂದರ ಪುರಾಣಿಕ ಸ್ಮಾರಕ ಸರ್ಕಾರಿ ಪ್ರೌಢಶಾಲೆ ದೈಹಿಕ ಶಿಕ್ಷಣ ಶಿಕ್ಷಕಿ ವೇದಾವತಿ ಎನ್., ಪೆರ್ವಾಜಿ ಸರ್ಕಾರಿ ಮಾದರಿ ಶಾಲೆ ದೈಹಿಕ ಶಿಕ್ಷಣ ಶಿಕ್ಷಕ ಸುರೇಶ ಎಂ., ಮೇಲ್ವಿಚಾರಕಿ ವಿಶಾಲ ದೇವಾಡಿಗ, ಶೋಧನ್ ಶೆಟ್ಟಿ ಮುನಿಯಾಲು, ಶ್ರವಣ್ ಅಜೆಕಾರು ವಿದ್ಯಾರ್ಥಿಗಳೊಂದಿಗೆ ಭಾಗವಹಿಸಿದ್ದರು.