ಕೊಪ್ಪಳ: ನಗರದ ಬಸ್ ನಿಲ್ದಾಣ ಬಳಿಯ ಜಗದಂಬಾ ಮೊಬೈಲ್ ಕೇರ್ನಲ್ಲಿ ಶನಿವಾರ ರಿಪೇರಿ ವೇಳೆ ಮೊಬೈಲ್ ಏಕಾಏಕಿ ಬ್ಲಾಸ್ಟ್ ಆಗಿದ್ದು, ಭಾರಿ ಅನಾಹುತ ತಪ್ಪಿದೆ.
ಗ್ರಾಹಕರೊಬ್ಬರು ರಿಪೇರಿಗೆಂದು ಮೊಬೈಲ್ ನೀಡಿದ್ದರು. ಎಂದಿನಂತೆ ರಿಪೇರಿ ಮಾಡುತ್ತಿದ್ದ ಯುವಕ ಇತರ ಮೊಬೈಲ್ ರಿಪೇರಿ ಮಾಡಿದ್ದಾನೆ. ಬೇರೆಡೆ ತೆಗೆದಿರಿಸಿದ್ದ ಮೊಬೈಲ್ನ್ನು ಸಹಾಯಕ ತಂದು ಕೊಟ್ಟಿದ್ದಾನೆ. ಟೇಬಲ್ ಮೇಲೆ ಮೊಬೈಲ್ ಇರಿಸಿ ಬಟ್ಟೆಯಿಂದ ಒರೆಸಲು ಮುಂದಾದಾಗ ಒಮ್ಮಿಂದೊಮ್ಮೆಲೆ ಬ್ಲಾಸ್ಟ್ ಆಗಿ ಸಿಡಿದಿದೆ. ಅದೃಷ್ಟವಶಾತ್ ರಿಪೇರಿ ಮಾಡುವಾತನಿಗೆ ಯಾವುದೇ ಅಪಾಯವಾಗಿಲ್ಲ.
ತಕ್ಷಣ ಎಚ್ಚೆತ್ತ ಅಂಗಡಿ ಮಾಲೀಕ ಮೊಬೈಲ್ನ್ನು ಕೆಳಗೆ ತಳ್ಳಿ, ನೀರು ಸುರಿದು ಬೆಂಕಿ ಆರಿಸಿದ್ದಾನೆ. ಇದರಿಂದ ಆಗಬಹುದಾಗಿದ್ದ ಅನಾಹುತ ತಪ್ಪಿದೆ. ಮೊಬೈಲ್ ಬ್ಲಾಸ್ಟ್ ಆದ ಟನೆ ಸಿಸಿಟಿವಿ ಕ್ಯಾಮೆರಾದಲ್ಲಿ ಸೆರೆಯಾಗಿದ್ದು, ವೈರಲ್ ಆಗುತ್ತಿದೆ.