More

    ಜುಲೈ 1 ರಿಂದ ‘ಸುಕಲ್ಪ’ ರಾಜ್ಯಮಟ್ಟದ ತಾಂತ್ರಿಕ ಮೇಳ

    ದಾವಣಗೆರೆ : ನಗರದ ಜಿ.ಎಂ. ಯುನಿವರ್ಸಿಟಿಯ ಇನ್‌ಫರ್ಮೇಷನ್ ಸೈನ್ಸ್ ಆ್ಯಂಡ್ ಇಂಜಿನಿಯರಿಂಗ್ ವಿಭಾಗದ ವತಿಯಿಂದ ಜುಲೈ 1 ಮತ್ತು 2ರಂದು ‘ಸುಕಲ್ಪ’ ರಾಜ್ಯಮಟ್ಟದ ತಾಂತ್ರಿಕ ಮೇಳವನ್ನು ಆಯೋಜಿಸಲಾಗಿದೆ ಎಂದು ಮೇಳದ ಸಂಚಾಲಕ ಟಿ.ಎಂ. ವೀರಗಂಗಾಧರ ಸ್ವಾಮಿ ತಿಳಿಸಿದರು.  ಶುಕ್ರವಾರ ಸುದ್ದಿಗೋಷ್ಠಿಯಲ್ಲಿ ಮಾತನಾಡಿ, 2 ದಿನಗಳ ಮೇಳದಲ್ಲಿ ವಿವಿಧ ತಾಂತ್ರಿಕ ಸ್ಪರ್ಧೆಗಳು ನಡೆಯಲಿವೆ. ಮೊದಲ ದಿನ ಕೋಡ ಕ್ಲ್ಯಾಷ್, ಹ್ಯಾಕಾಥಾನ್, ಇ-ಸ್ಪೋರ್ಟ್ಸ್ ಸ್ಪರ್ಧೆಗಳನ್ನು ಹಮ್ಮಿಕೊಳ್ಳಲಾಗಿದೆ. 2ನೇ ದಿನ ಟೆಕ್ ಮೇಜ್, ಇಂಜಿನಿಯರ್ಸ್ ಐ, ಐಡಿಯಾ ಟ್ಯಾಂಕ್ ಸ್ಪರ್ಧೆಗಳನ್ನು ಆಯೋಜಿಸಲಾಗಿದೆ ಎಂದು ಮಾಹಿತಿ ನೀಡಿದರು.  ರಾಜ್ಯದ ವಿವಿಧೆಡೆಯ ಇಂಜಿನಿಯರಿಂಗ್ ಕಾಲೇಜುಗಳಿಂದ 250ಕ್ಕೂ ಹೆಚ್ಚು ವಿದ್ಯಾರ್ಥಿಗಳು ಸ್ಪರ್ಧೆಗಳಿಗೆ ಹೆಸರು ನೋಂದಾಯಿಸಿದ್ದಾರೆ. ತುಮಕೂರು, ಶಿವಮೊಗ್ಗ, ಹಾವೇರಿ, ಬೆಂಗಳೂರು, ಮೈಸೂರು ಸೇರಿ ವಿವಿಧ ನಗರಗಳಿಂದ ಹೆಚ್ಚಿನ ಸಂಖ್ಯೆಯ ವಿದ್ಯಾರ್ಥಿಗಳು  ಭಾಗವಹಿಸುವ ನಿರೀಕ್ಷೆ ಇದೆ. ಸ್ಪರ್ಧೆಗಳ ವಿಜೇತರಿಗೆ ಆಕರ್ಷಕ ಬಹುಮಾನಗಳನ್ನು ನೀಡಲಾಗುವುದು ಎಂದು ಹೇಳಿದರು.  ಸುಕಲ್ಪದ ಸಂಯೋಜಕಿ ಪ್ರೊ.ಎಂ.ಬಿ. ನಸ್ರೀನ್ ತಾಜ್, ಕಾಲೇಜಿನ ಪ್ಲೇಸ್‌ಮೆಂಟ್ ವಿಭಾಗದ ನಿರ್ದೇಶಕ ಟಿ.ಆರ್. ತೇಜಸ್ವಿ ಕಟ್ಟಿಮನಿ, ಸುಕಲ್ಪದ ಸಂಯೋಜಕ ಪ್ರೊ.ಇಮ್ರಾನ್ ಖಾನ್ ಇದ್ದರು.    

    ಸಿನಿಮಾ

    ಲೈಫ್‌ಸ್ಟೈಲ್

    ಟೆಕ್ನಾಲಜಿ

    Latest Posts