ಬೆಂಗಳೂರು: ರೇಣುಕಾಸ್ವಾಮಿ ಹತ್ಯೆ ಪ್ರಕರಣದಲ್ಲಿ ಬಂಧನವಾಗಿ ಪರಪ್ಪನ ಅಗ್ರಹಾರ ಜೈಲಿನಲ್ಲಿರುವ ನಟ ದರ್ಶನ್ರನ್ನು ಕೆಲ ಆಪ್ತರು ಭೇಟಿ ಮಾಡುತ್ತಿದ್ದಾರೆ. ಈ ನಡುವೆ ದರ್ಶನ್ ಅವರ ತಾಯಿ ಮೀನಾ ಅವರು ಜೈಲಿಗೆ ಭೇಟಿ ನೀಡಿ ಮಗನನನ್ನು ನೋಡಿದ್ದಾರೆ.
ದರ್ಶನ್ ತನ್ನ ಕುಟುಂಬದವರ ಜೊತೆಗೆ ಕೂಡ ಸುಮಧುರ ಬಾಂಧವ್ಯ ಹೊಂದಿಲ್ಲ. ಸಹೋದರ ದಿನಕರ್ ಮೇಲೆ ಆತ ಈ ಹಿಂದೆ ಹಲ್ಲೆ ನಡೆಸಿದ್ದಿದೆ. ಈ ಎಲ್ಲ ಮುನಿಸು ಮರೆತು ಜೈಲಿನಲ್ಲಿರುವ ದರ್ಶನ್ ಅವರನ್ನು ನೋಡಲು ಮೀನಾ ತೂಗುದೀಪ ಹಾಗೂ ತಮ್ಮ ದೀನಕರ್ ಪರಪ್ಪನ ಅಗ್ರಹಾರಕ್ಕೆ ಬಂದು ದರ್ಶನ್ ಭೇಟಿ ಮಾಡಿ ತೆರಳಿದ್ದಾರೆ ಎನ್ನಲಾಗಿದೆ.
ದರ್ಶನ್ ಸೆರೆವಾಸ ಇಂದು ಹತ್ತನೇ ದಿನಕ್ಕೆ ಕಾಲಿಟ್ಟಿದೆ. ಇಷ್ಟು ದಿನವೂ ದರ್ಶನ್ ಅವರ ಅಮ್ಮ ಹಾಗೂ ತಮ್ಮ ಮಗನ ಭೇಟಿಗೆ ಸೆರೆಮನೆಯತ್ತ ಕಾಲಿಟ್ಟಿರಲಿಲ್ಲ. ಪತ್ನಿ ವಿಜಯಲಕ್ಷ್ಮಿ ಹಾಗೂ ಮಗ ವಿನೀಶ್ ಇತ್ತೀಚೆಗೆ ಭೇಟಿಯಾಗಿದ್ದರು. ಈಗ ದರ್ಶನ್ ಅವರನ್ನು ನೋಡಲು ಜೈಲಿಗೆ ಬಂದಿದ್ದಾರೆ.
ನಟ ದರ್ಶನ್ ತಾಯಿ ಮತ್ತು ಸಹೋದರ ಇಂದು ಭೇಟಿ ನೀಡಿದ್ದಾರೆ, ದರ್ಶನ್ಗೆ ತಾಯಿ ಮತ್ತು ಸಹೋದರ ಧೈರ್ಯ ಹೇಳಿದ್ದಾರೆ. ಮಗನನ್ನು ಸೆರೆ ಮನೆಯಲ್ಲಿ ನೋಡಿ ಕಣ್ಣೀರು ಹಾಕಿದ್ದಾರೆ ಎನ್ನಲಾಗಿದೆ.