ನವದೆಹಲಿ: ದೇಶಕ್ಕೆ ವಕ್ಕರಿಸಿರುವ ಮಹಾಮಾರಿ ಕರೊನಾ ವೈರಸ್ ಸೋಂಕಿನಿಂದ ಇಡೀ ರಾಷ್ಟ್ರಕ್ಕೆ ಬೀಗಮುದ್ರೆ ಬಿದ್ದಿದೆ. ಆರ್ಥಿಕ ಚಟುವಟಿಕೆ ಬಹುತೇಕ ಸ್ಥಗಿತಗೊಂಡಿದ್ದು, ಲಾಕ್ಡೌನ್ನಿಂದಾಗಿ ದೇಶಕ್ಕೆ ಸುಮಾರು 9 ಲಕ್ಷ ಕೋಟಿ ರೂ. ವೆಚ್ಚವಾಗುವ ಸಾಧ್ಯತೆ ಇದೆ. ಅಲ್ಲದೆ, ಜಿಡಿಪಿ ಬೆಳವಣಿಗೆ ದರ 4ಕ್ಕೆ ಕುಸಿಯಲಿದೆ ಎಂದು ಪರಿಣಿತರು ಅಂದಾಜಿಸಿದ್ದು, ಸದ್ಯ ಆರ್ಥಿಕ ಪ್ಯಾಕೇಜ್ ಅವಶ್ಯಕತೆ ಇದೆ ಎಂದು ಸರ್ಕಾರವನ್ನು ಒತ್ತಾಯಿಸಿದ್ದಾರೆ.
ಭಾರತೀಯ ರಿಸರ್ವ್ ಬ್ಯಾಂಕ್ ಏಪ್ರಿಲ್ 3 ರಂದು ತನ್ನ ಮೊದಲ ದ್ವಿ-ಮಾಸಿಕ ನೀತಿ ಪರಿಶೀಲನೆಯನ್ನು ಪ್ರಕಟಿಸಲಿದ್ದು, ಭಾರಿ ದರ ಕಡಿತ ಮಾಡಲು ಸಜ್ಜಾಗಿದೆ ಮತ್ತು ಹಣಕಾಸಿನ ಕೊರತೆಯ ಗುರಿಗಳನ್ನು ಉಲ್ಲಂಘಿಸಲಿದೆ ಎಂದು ವಿಶ್ಲೇಷಕರು ಅಂದಾಜಿಸಿದ್ದಾರೆ.
ಪ್ರಧಾನಿ ನರೇಂದ್ರ ಮೋದಿ ನಿನ್ನೆಯಷ್ಟೇ ಮೂರು ವಾರಗಳ ಸಂಪೂರ್ಣ ಲಾಕ್ಡೌನ್ ಅನ್ನು ಘೋಷಿಸಿದ್ದಾರೆ. ಕರೊನಾ ವೈರಸ್ ವೇಗವಾಗಿ ಹರಡುವುದನ್ನು ತಡೆಯುವ ನಿಟ್ಟಿನಲ್ಲಿ ಈ ಕ್ರಮ ಕೈಗೊಳ್ಳಲಾಗಿದೆ. ಇದರ ಪರಿಣಾಮ ಈಕ್ವಿಟಿ ಮಾರುಕಟ್ಟೆಗಳು ಬುಧವಾರದ ವಹಿವಾಟಿನ ಆರಂಭದಲ್ಲಿಯೇ ಶೇ 0.47 ರಷ್ಟು ಕುಸಿದವು.
ಏಪ್ರಿಲ್ ಪರಿಶೀಲನೆಯಲ್ಲಿ ಆರ್ಬಿಐ ಶೇಕಡಾ 0.65 ರಷ್ಟು ದರ ಕಡಿತಗೊಳಿಸುವ ಸಾಧ್ಯತೆಯಿದೆ ಮತ್ತು ವರ್ಷದ ಅವಧಿಯಲ್ಲಿ ಬಡ್ಡಿದರಗಳನ್ನು ಶೇಕಡಾ 1 ರಷ್ಟು ಕಡಿತಗೊಳಿಸುತ್ತದೆ ಎಂದು ಅಂದಾಜಿಸಲಾಗಿದೆ.
ಲಾಕ್ಡೌನ್ನಿಂದ ಉಂಟಾಗುವ ಆರ್ಥಿಕ ಪರಿಣಾಮದ ಬಗ್ಗೆ ಭಾರತ ಸರ್ಕಾರವು ಇಲ್ಲಿಯವರೆಗೆ ಮೌನವಾಗಿದೆ. ದಾಳಿಯನ್ನು ಅನ್ನು ತಗ್ಗಿಸಲು ಯಾವುದಾದರೂ ಕ್ರಮಗಳನ್ನು ತೆಗದುಕೊಳ್ಳಿ ಎಂದು ಪರಿಣಿತರ ಸಲಹೆ ನೀಡಿದ್ದಾರೆ.
ಈಗಾಗಲೇ ನೋಟ್ ಬ್ಯಾನ್ ಹಾಗೂ ಜಿಎಸ್ಟಿಯಂತಹ ಕ್ರಮಗಳಿಂದ ಅಸಂಘಟಿತ ವಲಯಗಳ ಮೇಲೆ ಭಾರಿ ಪರಿಣಾಮ ಬೀರಿದೆ. ಕೊರನಾ ಪರಿಣಾಮದಿಂದ ಮತ್ತಷ್ಟು ಹೊಡೆತ ಬೀಳಲಿದೆ. ಹೀಗಾಗಿ ಸಣ್ಣ ಉದ್ಯಮಗಳಿಗೆ ಸುಲಭ ಸಾಲ, ಸಾಲ ಪುನರ್ರಚನೆ ಮತ್ತು ನಗದು ವರ್ಗಾವಣೆ ಸೇರಿ ಸಾಧ್ಯವಾಗುವಂತಹ ಕ್ರಮಗಳನ್ನು ಕರೊನಾ ಆರ್ಥಿಕ ಪ್ಯಾಕೇಜ್ ಅಡಿಯಲ್ಲಿ ಸೇರಿಸಬೇಕು ಎಂದು ಸಲಹೆ ನೀಡಿದ್ದಾರೆ. (ಏಜೆನ್ಸೀಸ್)
ರಾಜಮೌಳಿಯ ಬಹುನೀರಿಕ್ಷಿತ ‘ಆರ್ಆರ್ಆರ್’ ಚಿತ್ರದ ಹೆಸರಿನ ಅರ್ಥವೇನು: ಮೋಷನ್ ಪೋಸ್ಟರ್ನಲ್ಲಿದೆ ಉತ್ತರ!