ಬೆಂಗಳೂರು: ಆರ್ಥಿಕ ಬೆಳವಣಿಗೆ, ನಾವೀನ್ಯತೆಗೆ ಉತ್ತೇಜನ, ಉದ್ಯೋಗ ಸೃಷ್ಟಿಗೆ ಹೆಚ್ಚಿನ ಆದ್ಯತೆ ನೀಡುತ್ತಿರುವ ಸೂಕ್ಷ್ಮ, ಸಣ್ಣ ಮತ್ತು ಮಧ್ಯಮ ಕೈಗಾರಿಕೆಗಳ (ಎಂಎಸ್ಎಂಇ) ಕಾರ್ಯವನ್ನು ಕರ್ನಾಟಕ ವಾಣಿಜ್ಯ ಮತ್ತು ಕೈಗಾರಿಕಾ ಮಹಾಸಂಸ್ಥೆ (ಎಫ್ಕೆಸಿಸಿಐ) ಅಧ್ಯ ರಮೇಶ್ಚಂದ್ರ ಲಹೋಟಿ ಶ್ಲಾಘಿಸಿದ್ದಾರೆ.
ಸುಸ್ಥಿರ ಅಭಿವೃದ್ಧಿಗಾಗಿ 2030ರ ಕಾರ್ಯಸೂಚಿ ಮುನ್ನಡೆಸುವಲ್ಲಿ ಎಂಎಸ್ಎಂಇ ಪ್ರಮುಖ ಪಾತ್ರ ವಹಿಸುತ್ತಿದೆ. ಸಣ್ಣ ಕೈಗಾರಿಕೆಗಳು ಕೈಗೊಳ್ಳುವ ಕಾರ್ಯಕ್ರಮಗಳಿಗೆ ನಮ್ಮ ಪ್ರೋತ್ಸಾಹ ಇರಲಿದೆ. “ಅಂತಾರಾಷ್ಟ್ರೀಯ ಎಂಎಸ್ಎಂಇ ದಿನ’ವು ನೀತಿ ನಿರೂಪಕರು, ಬೃಹತ್ ಉದ್ಯಮಗಳು, ಹಣಕಾಸು ಸಂಸ್ಥೆಗಳು, ಅಂತಾರಾಷ್ಟ್ರೀಯ ಸಮುದಾಯಕ್ಕೆ ಒಗ್ಗೂಡಲು, ಚರ್ಚಿಸಲು ಮತ್ತು ಎಂಎಸ್ಎಂಇಗಳಿಗೆ ಅನುಕೂಲಕರ ವಾತಾವರಣ ಬೆಳೆಸುವ ವಿಚಾರ ವಿನಿಮಯ ಮಾಡಿಕೊಳ್ಳಲು ವಿಶಿಷ್ಟ ವೇದಿಕೆಯಾಗಿದೆ. ಈ ದಿನವು ಬಡತನ ನಿಮೂರ್ಲನೆ, ಆರ್ಥಿಕ ಬೆಳವಣಿಗೆ ಉತ್ತೇಜಿಸುವಲ್ಲಿ ಸಾಮೂಹಿಕ ಪ್ರಯತ್ನ ಕುರಿತು ಎತ್ತಿ ತೋರಿಸುತ್ತದೆ ಎಂದರು.
ರಾಜ್ಯದಲ್ಲಿ ಸಿಎಂ ಬದಲಾವಣೆ ಕೂಗು; ಚೆಲುವರಾಯಸ್ವಾಮಿ ರಿಯಾಕ್ಷನ್
ಸ್ಪರ್ಧಾತ್ಮಕ ಮಾರುಕಟ್ಟೆಯಲ್ಲಿ ಅಭಿವೃದ್ಧಿಗೆ ಕೌಶಲ, ಜ್ಷಾನದೊಂದಿಗೆ ಸಣ್ಣ ಕೈಗಾರಿಗಳನ್ನು ಸಜ್ಜುಗೊಳಿಸಬೇಕಿದೆ. ಸುಲಭವಾಗಿ ಆರ್ಥಿಕ ಸಹಾಯಕ್ಕೆ ಸಂಸ್ಥೆಗಳು ನಿಕಟವಾಗಿ ಕೆಲಸ ಮಾಡಬೇಕಿದೆ. ಬೃಹತ್ ಉದ್ಯಮಗಳ ನಡುವೆ ಸಂಪರ್ಕ ಸಾಧಿಸಲು, ಜಾಗತಿಕ ಮೌಲ್ಯದ ಸರಪಳಿಗಳಲ್ಲಿ ಏಕೀಕರಣ ಉತ್ತೇಜಿಸಲು ಮತ್ತು ಮಾರುಕಟ್ಟೆ ಅವಕಾಶ ಹೆಚ್ಚಿಸಲು ಉಪಕ್ರಮಗಳನ್ನು ಬಲಪಡಿಸಲಾಗುವುದು. ನಮ್ಮೊಂದಿಗೆ ಸೇರಲು ಎಲ್ಲ ಪಾಲುದಾರರನ್ನು ಆಹ್ವಾನಿಸಲಾಗುವುದು ಎಂದು ಲಹೋಟಿ ತಿಳಿಸಿದರು.