ನವದೆಹಲಿ: ಟೀಮ್ ಇಂಡಿಯಾ ವಿಶ್ವಕಪ್ ಗೆದ್ದಾಗಿನಿಂದ ಸೂರ್ಯಕುಮಾರ್ ಯಾದವ್ ಸಾಮಾಜಿಕ ಜಾಲತಾಣಗಳಲ್ಲಿ ಸಿಕ್ಕಾಪಟ್ಟೆ ಚರ್ಚೆಯಲ್ಲಿದ್ದಾರೆ. ಅದಕ್ಕೆ ಕಾರಣ ಆ ಒಂದು ವಿಡಿಯೋ ವೈರಲ್ ಆಗಿರುವುದು. ಆ ವಿಡಿಯೋ ಯಾವುದು ಎಂಬುದು ಈಗಾಗಲೇ ಎಲ್ಲರಿಗೂ ತಿಳಿದಿದೆ.
ಟಿ20 ವಿಶ್ವಕಪ್ ಟೂರ್ನಿಯ ರೋಚಕ ಫೈನಲ್ ಪಂದ್ಯದಲ್ಲಿ ಹಾರ್ದಿಕ್ ಪಾಂಡ್ಯ ಎಸೆದ ಚೆಂಡನ್ನು ಆಫ್ರಿಕಾದ ಸ್ಟಾರ್ ಆಟಗಾರ ಡೇವಿಡ್ ಮಿಲ್ಲರ್ ಬಲವಾಗಿ ಹೊಡೆದರು. ಚೆಂಡು ಗಾಳಿಯಲ್ಲಿ ಹಾರಿ ಹೋಗಿದ್ದನ್ನು ನೋಡಿ ಬಹುತೇಕರು ಅದು ಸಿಕ್ಸರ್ ಆಗುತ್ತದೆ ಎಂದು ಭಾವಿಸಿದ್ದರು. ಆದರೆ, ಸೂರ್ಯಕುಮಾರ್ ಯಾದವ್ ಅವರು ಸೂಪರ್ ಮ್ಯಾನ್ನಂತೆ ಅದ್ಭುತವಾಗಿ ಕ್ಯಾಚ್ ಹಿಡಿಯುವ ಮೂಲಕ ಪಂದ್ಯಕ್ಕೆ ರೋಚಕ ತಿರುವು ನೀಡಿದರು. ಅಲ್ಲಿಯವರೆಗೆ ಆಫ್ರಿಕಾ ಕಡೆ ವಾಲಿದ್ದ ವಿಜಯಲಕ್ಷ್ಮೀ ಒಂದೇ ಒಂದು ಕ್ಯಾಚ್ನಿಂದ ಟೀಮ್ ಇಂಡಿಯಾ ಕಡೆ ವಾಲಿದಳು. ಒಂದು ವೇಳೆ ಸೂರ್ಯ ಈ ಕ್ಯಾಚ್ ಬಿಟ್ಟಿದ್ದರೆ, ಟೀಮ್ ಇಂಡಿಯಾ ವಿಶ್ವಕಪ್ ಗೆಲ್ಲುತ್ತಿರಲಿಲ್ಲ.
ಆದರೆ, ಸೂರ್ಯಕುಮಾರ್ ಯಾದವ್ ಹಿಡಿದ ಅತ್ಯಾಕರ್ಷಕ ಕ್ಯಾಚ್ ಭಾರಿ ವಿವಾದವನ್ನೇ ಹುಟ್ಟು ಹಾಕಿದೆ. ಸಾಮಾಜಿಕ ಜಾಲತಾಣದಲ್ಲಿ ವಿಡಿಯೋದ್ದೇ ಚರ್ಚೆಯಾಗಿದೆ. ಕ್ಯಾಚ್ ಹಿಡಿಯುವಾಗ ಸೂರ್ಯ ಅವರ ಕಾಲು ಬೌಂಡರಿ ಗೆರೆಯನ್ನು ಮುಟ್ಟಿದೆ ಎಂದು ಕೆಲವರು ಸಾಮಾಜಿಕ ಜಾಲತಾಣಗಳಲ್ಲಿ ಕಾಮೆಂಟ್ ಮಾಡುತ್ತಿದ್ದರೆ, ಇನ್ನು ಕೆಲವರು ಇದೊಂದು ಅದ್ಭುತ ಕ್ಯಾಚ್ ಎನ್ನುತ್ತಿದ್ದಾರೆ. ಇದೀಗ ಈ ವಿವಾದಾತ್ಮಕ ಕ್ಯಾಚ್ ಬಗ್ಗೆ ದಕ್ಷಿಣ ಆಫ್ರಿಕಾದ ದಿಗ್ಗಜ ಶಾನ್ ಪೊಲಾಕ್ ಪ್ರತಿಕ್ರಿಯಿಸಿದ್ದಾರೆ.
ಕಳೆದ ಎರಡು ದಿನಗಳಿಂದ ಸೂರ್ಯಕುಮಾರ್ ಅವರ ಅದ್ಭುತ ಕ್ಯಾಚ್ ತೀವ್ರ ಚರ್ಚೆಗೆ ಗ್ರಾಸವಾಗಿದೆ. ಈ ಕ್ಯಾಚ್ಗೆ ಹೆಚ್ಚಿನ ಚರ್ಚೆಯ ಅಗತ್ಯವಿಲ್ಲ. ಸೂರ್ಯಕುಮಾರ್ ಆ ಕ್ಯಾಚ್ ಅನ್ನು ಅದ್ಭುತವಾಗಿ ಹಿಡಿದರು. ಆತ ಬೌಂಡರಿ ರೇಖೆಯನ್ನು ಮುಟ್ಟಲಿಲ್ಲ. ಬದಲಾಗಿ ಸೂರ್ಯಕುಮಾರ್ ಆ ಕ್ಯಾಚ್ ಅನ್ನು ಸೊಗಸಾಗಿ ಹಿಡಿದರು. ಪ್ರತಿಯೊಬ್ಬರೂ ಈ ಕೌಶಲ್ಯಗಳನ್ನು ಹೊಂದಿರುವುದಿಲ್ಲ. ಈ ಬಗ್ಗೆ ಚರ್ಚೆ ಮಾಡುವ ಅಗತ್ಯವಿಲ್ಲ ಎಂದು ಶಾನ್ ಪೊಲಾಕ್ ಹೇಳಿದ್ದಾರೆ.
A Question asked by Pakistani 🇵🇰 Journalist to Shaun Pollock about Surya Kumar Yadav’s Catch ?
Pollock Said – “Catch was Fine” 👏
👉 But Why, Pakistani’s can’t digest India’s Win, Any Specific Reason 🤔#T20WorldCup #INDvSApic.twitter.com/66HVIFPlVJ
— Richard Kettleborough (@RichKettle07) June 30, 2024
ಅದು ಕೂಡ ಈ ಪ್ರಶ್ನೆಯನ್ನು ಪಾಕಿಸ್ತಾನದ ವರದಿಗಾರನೊಬ್ಬ ಕೇಳಿದ್ದು ಇಲ್ಲಿ ಗಮನಾರ್ಹ ಸಂಗತಿ. ಬೇಕಂತಲೇ ಆತ ಪೊಲಾಕ್ ಅವರನ್ನು ಈ ಪ್ರಶ್ನೆಯನ್ನು ಕೇಳಿದ್ದಾನೆ. ಅದಕ್ಕೆ ಪೊಲಾಕ್ ಕೊಟ್ಟ ಉತ್ತರ ಮಾತ್ರ ಖಡಕ್ ಆಗಿತ್ತು. ಇದೀಗ ಟೀಮ್ ಇಂಡಿಯಾ ಅಭಿಮಾನಿಗಳು ಈ ವಿಡಿಯೋ ಮೂಲಕ ಪಾಕಿಸ್ತಾನದ ಕ್ರೀಡಾಭಿಮಾನಿಗಳ ಕಾಲೆಳೆಯುತ್ತಿದ್ದಾರೆ. ಪಾಕಿಗಳು ಟೀಮ್ ಇಂಡಿಯಾದ ಗೆಲುವನ್ನು ಜೀರ್ಣಿಸಿಕೊಳ್ಳಲು ಸಾಧ್ಯವಾಗುತ್ತಿಲ್ಲ ಎಂಬುದಕ್ಕೆ ಈ ಒಂದು ವಿಡಿಯೋ ಸಾಕ್ಷಿ ಎಂದು ಟೀಕಿಸುತ್ತಿದ್ದಾರೆ. (ಏಜೆನ್ಸೀಸ್)
ನನ್ನ ಕೊನೇ ಉಸಿರಿರೋವರೆಗೂ ಆತನನ್ನು ಮರೆಯಲ್ಲ! ವಿಶ್ವಕಪ್ ಗೆದ್ದ ಬೆನ್ನಲ್ಲೇ ಕಣ್ಣೀರಿಟ್ಟ ಇರ್ಫಾನ್ ಪಠಾಣ್
ರೋಹಿತ್ ಶರ್ಮರ ವಿಭಿನ್ನ ಸಂಭ್ರಮಾಚರಣೆ ಹಿಂದಿನ ಅರ್ಥವೇನು? ಕಪ್ ಗೆದ್ದ ನಂತ್ರ ಯಾಕೆ ಹೀಗೆ ಮಾಡಿದ್ರು?