More

    ಮನೆ ಪರಿಸರದಲ್ಲಿ ಹಸಿರು ರಕ್ಷಣೆ : ಕಟಪಾಡಿ ಮಹೇಶ್ ಶೆಣೈ

    ವಿಜಯವಾಣಿ ಸುದ್ದಿಜಾಲ ಶಿರ್ವ

    ಮರ, ಗಿಡ ಕಾಡುಗಳು ನಾಶವಾಗುತ್ತಿವೆ. ಮನುಷ್ಯನ ಜೀವನಕ್ಕೆ ಅಗತ್ಯ ಇರುವ ಜೀವವೈವಿಧ್ಯಗಳಲ್ಲಿ ಅತಿ ಮುಖ್ಯವಾಗಿದ್ದ ಗುಬ್ಬಚ್ಚಿಗಳು, ದುಂಬಿ, ಚಿಟ್ಟೆ, ಹಾವುಗಳ ಸಂತತಿ ನಶಿಸುತ್ತಿದೆ. ಇದಕ್ಕಾಗಿ ಪ್ರತಿ ಮನೆ, ಪರಿಸರದಲ್ಲಿ ಮಿಯಾವಾಕಿ ವನ ನಿರ್ಮಾಣಕ್ಕೆ ಮುಂದಾಗಬೇಕು ಎಂದು ಸಂಪನ್ಮೂಲ ವ್ಯಕ್ತಿ ಕಟಪಾಡಿ ಮಹೇಶ್ ಶೆಣೈ ಹೇಳಿದರು.

    ಬಂಟಕಲ್ಲು ಆಲ್ಪ್ರೈಡ್ ವಿನ್ಸೆಂಟ್ ಮೋನಿಸ್‌ರವರ ಪ್ರಾಯೋಜಕತ್ವದಲ್ಲಿ ಸ್ವಂತ ಭೂಮಿಯಲ್ಲಿ ಇಂದ್ರಪ್ರಸ್ಥ ಅರಣ್ಯೀಕರಣ ಯೋಜನೆಯಡಿಯಲ್ಲಿ ಮಿಯಾವಾಕಿ ವನ ನಿರ್ಮಾಣಕ್ಕೆ ಭಾನುವಾರ ಚಾಲನೆ ನೀಡಿ ಮಾತನಾಡಿದರು.

    ಮಾಣಿಪಾಡಿ ರತ್ನಾಕರ ಶೆಟ್ಟಿ ಅಧ್ಯಕ್ಷತೆ ವಹಿಸಿದ್ದರು. ಶಿರ್ವ ಗ್ರಾಪಂ ಉಪಾಧ್ಯಕ್ಷ ವಿಲ್ಸನ್ ರಾಡ್ರಿಗಸ್, ನಿವೃತ್ತ ಶಿಕ್ಷಕ ಬಿ.ಪುಂಡಲೀಕ ಮರಾಠೆ, ಸಮಾಜಸೇವಕ ಅನಂತ್ರಾಯ ಶೆಣೈ ಶಿರ್ವ, ನಿವೃತ್ತ ಮುಖ್ಯ ಶಿಕ್ಷಕ ಎನ್.ರಾಧಾಕೃಷ್ಣ ಪ್ರಭು, ಶಂಕರ ಶೆಟ್ಟಿ ಮಾನಿಪಾಡಿ, ಡಾ.ಮನೋಹರ ಬೋಳಾರ್, ಶಂಕರ ಪದಕಣ್ಣಾಯ, ಪ್ರೇಮಾನಂದ ಕಲ್ಮಾಡಿ, ವಲೇರಿಯನ್ ಡಿಸೋಜ, ಶಂಕರ ವಾಗ್ಲೆ, ರಮೇಶ್ ಬಂಟಕಲ್, ಭಾಸ್ಕರ ಶೆಟ್ಟಿ ಸಡಂಬೈಲು, ಹಿರಿಯರಾದ ದೇವದಾಸ್ ಜೋಗಿ ಬಂಟಕಲ್ಲು, ಸುಭಾಸ್ ನಾಯಕ್ ಸಡಂಬೈಲು, ನಿವೃತ್ತ ಮುಖ್ಯ ಶಿಕ್ಷಕಿ ಮೇರಿ ಡಿಸೋಜ, ಮಂಜುನಾಥ್ ಪೂಜಾರಿ ಉಪಸ್ಥಿತರಿದ್ದರು. ರಾಜೀವನಗರ ಹಿ.ಪ್ರಾ ಶಾಲಾ ಮುಖ್ಯ ಶಿಕ್ಷಕ ಎಸ್.ಎಸ್.ಪ್ರಸಾದ್ ಕಾರ್ಯಕ್ರಮ ನಿರೂಪಿಸಿದರು. ಆಲ್ಪ್ರೈಡ್ ವಿನ್ಸೆಂಟ್ ಮೋನಿಸ್ ವಂದಿಸಿದರು.

    ಸಿನಿಮಾ

    ಲೈಫ್‌ಸ್ಟೈಲ್

    ಟೆಕ್ನಾಲಜಿ

    Latest Posts