More

    ಚಿನ್ನದ ಪದಕ ಪಡೆದ ದರ್ಶನ್‌ಗೆ ಅಭಿನಂದನೆ

    ಚಿಕ್ಕಮಗಳೂರು: ಧಾರವಾಡ ಕೃಷಿ ವಿಶ್ವವಿದ್ಯಾಲಯದಲ್ಲಿ ನಡೆದ ೩೭ನೇ ಘಟಿಕೋತ್ಸವದಲ್ಲಿ ಚಿಕ್ಕಮಗಳೂರು ನಗರದ ದರ್ಶನ್.ಸಿ ಇವರು ಕೃಷಿ ವ್ಯವಹಾರ ನಿರ್ವಹಣೆ ಶಾಸ್ತç ವಿಷಯದಲ್ಲಿ ಮಾಸ್ಟರ್ ಆಫ್ ಬಿಸಿನೆಸ್ ಸ್ನಾತ್ತಕೋತ್ತರ ಕೃಷಿ ವ್ಯವಹಾರ ಪದವಿಯಲ್ಲಿ ಅತೀ ಹೆಚ್ಚು ಅಂಕ ಗಳಿಸಿ ಚಿನ್ನದ ಪದಕ ಪಡೆದುಕೊಂಡಿದ್ದಾರೆ.

    ಜೂ.೨೭ ರಂದು ರಾಜ್ಯಪಾಲ ಥಾವರ್ ಚಂದ್ ಗೆಹ್ಲೋಟ್ ಚಿನ್ನದ ಪದಕ ಹಾಗೂ ಪ್ರಶಸ್ತಿ ಪ್ರಧಾನ ಮಾಡಿದರು. ಈ ಸಂದರ್ಭದಲ್ಲಿ ಕೃಷಿ ಸಚಿವ ಎನ್. ಚೆಲುವರಾಯಸ್ವಾಮಿ ಉಪಸ್ಥಿತರಿದ್ದರು.ದರ್ಶನ್ ಇವರು ನಗರದ ದಂಟರಮಕ್ಕಿ ಬಡಾವಣೆಯ ಉದಯನಗರ ನಿವಾಸಿಗಳಾದ ಚಂದ್ರಶೇಖರ್ ಸಿ.ಎಸ್ ಹಾಗೂ ಮಹಾಲಕ್ಷ್ಮಿ ಇವರ ಪುತ್ರರಾಗಿದ್ದಾರೆ.

    ಸಿನಿಮಾ

    ಲೈಫ್‌ಸ್ಟೈಲ್

    ಟೆಕ್ನಾಲಜಿ

    Latest Posts